AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗೆ ಸರ್ಪ್ರೈಸ್ ಆಗಿ ಬಂತು ಲಕ್ಷಗಟ್ಟಲೆ ಮೌಲ್ಯದ ಪೀಠೋಪಕರಣಗಳು; ಎಲ್ಲಕ್ಕೂ ಕಾರಣ ಈ ಪುಟಾಣಿ ಪೋರನಂತೆ!

ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಏನೂ ಆಗಬಹುದು. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಮನೆ ಬಾಗಿಲಿಗೆ ಲಕ್ಷಗಟ್ಟಲೆ ಮೌಲ್ಯದ ಪೀಠೋಪಕರಣಗಳು ಬಂದಿವೆ. ಎಲ್ಲಕ್ಕೂ ಕಾರಣವಾಗಿದ್ದು, 22 ತಿಂಗಳ ಪುಟಾಣಿ ಪೋರ! ಅಮೇರಿಕಾದಲ್ಲಿ ವರದಿಯಾದ ಘಟನೆ ಇಲ್ಲಿದೆ.

ಮನೆಗೆ ಸರ್ಪ್ರೈಸ್ ಆಗಿ ಬಂತು ಲಕ್ಷಗಟ್ಟಲೆ ಮೌಲ್ಯದ ಪೀಠೋಪಕರಣಗಳು; ಎಲ್ಲಕ್ಕೂ ಕಾರಣ ಈ ಪುಟಾಣಿ ಪೋರನಂತೆ!
22 ತಿಂಗಳ ಪುಟಾಣಿ ಅಯಾಂಶ್ ಕುಮಾರ್ (Credits: NBC)
TV9 Web
| Edited By: |

Updated on:Jan 23, 2022 | 2:46 PM

Share

ಸಾಮಾನ್ಯವಾಗಿ ತಜ್ಞರು ಮಕ್ಕಳಿಂದ ಮೊಬೈಲ್ ದೂರವಿಡಿ ಎಂದು ಸಲಹೆ ನೀಡುತ್ತಲೇ ಇರುತ್ತಾರೆ. ಇದಕ್ಕೆ ಆರೋಗ್ಯದ ಹಿತದೃಷ್ಟಿ ಒಂದು ಕಾರಣವಾದರೆ, ಏನಾದರೂ ಎಡವಟ್ಟು ಸಂಭವಿಸಬಹುದು ಎಂಬ ಆತಂಕ ಮತ್ತೊಂದು ಕಾರಣ. ಮಕ್ಕಳ ಕೈಗೆ ಮೊಬೈಲ್ ಸಿಕ್ಕು ಎಡವಟ್ಟಾಗಿರುವ ಉದಾಹರಣೆಗಳು ಅನೇಕ. ಈಗಾಗಲೇ ಅಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ತಾಜಾ ಬೆಳವಣಿಗೆಯೊಂದರಲ್ಲಿ ಪೋರನೊಬ್ಬ ತಾಯಿಯ ಮೊಬೈಲ್​ನಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ. ಮನೆ ಬಾಗಿಲಿಗೆ ಸಾಲುಸಾಲಾಗಿ ವಸ್ತುಗಳು ಬರುವುದನ್ನು ನೋಡಿದ ಪೋಷಕರಿಗೆ ನಿಜ ವಿಷಯ ಅರ್ಥವಾಗಲು ಬಹಳಷ್ಟು ಸಮಯವೇ ಹಿಡಿದಿದೆ. ಅಷ್ಟಕ್ಕೂ ಆಗಿದ್ದೇನು? ಆ ಪೋರ ಆರ್ಡರ್ ಮಾಡಿದ್ದು ಹೇಗೆ? ಎನ್​ಬಿಸಿ ವರದಿ ಮಾಡಿದ ಘಟನೆ ಇಲ್ಲಿದೆ.

22 ತಿಂಗಳ ಮಗು ಅಯಾಂಶ್ ಕುಮಾರ್. ಆತ ಇಕಾಮರ್ಸ್​ ಸೈಟ್ ಆದ ವಾಲ್​ಮಾರ್ಟ್​​ನಿಂದ ಬರೋಬ್ಬರಿ 2,000 ಡಾಲರ್ ಅರ್ಥಾನ್ ₹ 1.4 ಲಕ್ಷ ಮೊತ್ತದ ಪೀಠೋಪಕರಣಗಳನ್ನು ಖರೀದಿ ಮಾಡಿದ್ದಾನೆ. ಇದನ್ನೇನು ಆತನ ಪೋಷಕರು ಹೀಗೆ ಮಾಡು ಎಂದು ಹೇಳಿಕೊಟ್ಟು ಮಾಡಿದ್ದಲ್ಲ. ಬದಲಾಗಿ ಆತನ ತಾಯಿ ಮೊಬೈಲ್ ನೀಡಿದ್ದರಿಂದ ಆದ ಯಡವಟ್ಟು.

ಹೌದು. ಅಯಾಂಶ್ ಅವರ ತಾಯಿ ವಾಲ್​ಮಾರ್ಟ್​​ ವೆಬ್​ಸೈಟ್​ನಲ್ಲಿ ಹಲವಾರು ವಸ್ತುಗಳನ್ನು ಕಾರ್ಟ್​ನಲ್ಲಿ ಹಾಕಿಟ್ಟಿದ್ದರು. ಅದರಲ್ಲಿ ಕೆಲವನ್ನಷ್ಟೇ ಕೊಳ್ಳುವ ಉದ್ದೇಶ ಅವರದ್ದಾಗಿತ್ತು. ಆದರೆ ಅವರ ಮಗನ ಕಿತಾಪತಿಯಿಂದ ಎಲ್ಲಾ ವಸ್ತುಗಳೂ ಮನೆ ಬಾಗಿಲಿಗೆ ಬಂದಿವೆ. ‘‘ಇದನ್ನು ನಂಬುವುದು ಅಸಾಧ್ಯ. ಆದರೆ ಘಟನೆ ಮಾತ್ರ ಹಾಗೇ ನಡೆದಿದೆ’’ ಎಂದು ವಿವರಿಸಿದ್ದಾರೆ ಅಯಾಂಶ್ ತಂದೆ ಪ್ರಮೋದ್ ಕುಮಾರ್.

ಮನೆ ಬಾಗಿಲಿಗೆ ಪೀಠೋಪಕರಣಗಳು ಸೇರಿದಂತೆ ವಸ್ತುಗಳು ಬಂದಾಗ ಎಲ್ಲರಿಗೂ ಆಶ್ಚರ್ಯವಾಯಿತಂತೆ. ಕೆಲವೊಂದು ವಸ್ತುಗಳು ಎಷ್ಟು ದೊಡ್ಡವಿದ್ದವೆಂದರೆ ಮನೆ ಬಾಗಿಲಿನ ಮೂಲಕ ಅವನ್ನು ಒಳ ತರಲು ಅಸಾಧ್ಯವಾಗಿತ್ತು ಎಂದು ಪೋಷಕರು ತಿಳಿಸಿದ್ದಾರೆ. ಅಯಾಂಶ್ ಮಾಡಿದ ಆರ್ಡರ್​ನಲ್ಲಿ ಕುರ್ಚಿಗಳು, ಹೂ ಇಡಲು ಪಾಟ್​ಗಳು ಸೇರಿದಂತೆ ಅನೇಕ ವಸ್ತುಗಳು ಇದ್ದವು.

ಮಗ ಆರ್ಡರ್ ಮಾಡಿದ್ದರ ಕುರಿತು ಪ್ರತಿಕ್ರಿಯೆ ನೀಡಿರುವ ಅಯಾಂಶ್ ತಾಯಿ, ‘ಆತ ಇನ್ನೂ ಪುಟ್ಟ ಹುಡುಗ. ಬಹಳ ಮುದ್ದು. ಅವನೇ ಎಲ್ಲವನ್ನೂ ಆರ್ಡರ್ ಮಾಡಿದ್ದಾನೆ ಎಂದು ತಿಳಿದು ನಾವೆಲ್ಲಾ ನಕ್ಕಿದ್ದೇವೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಯಾಂಶ್ ತಾಯಿ ಹಾಗೂ ಇತರ ಸಂಬಂಧಿಗಳು ಮೊಬೈಲ್ ಬಳಸಿ ವಸ್ತುಗಳನ್ನು ಖರೀದಿಸುವುದನ್ನು ಗಮನಿಸುತ್ತಿದ್ದ ಎಂದು ಎನ್​ಬಿಸಿ ವರದಿ ಮಾಡಿದೆ.

ಇನ್ನು ಮುಂದೆ ಮೊಬೈಲ್​ ಸ್ಕ್ರೀನ್ ತೆರೆಯಲು ಕಷ್ಟವಾಗುವ ಪಾಸ್​ವರ್ಡ್​ಗಳು ಹಾಗೂ ಫೇಸ್​ಲಾಕ್ ಹಾಕಿಡುವುದಾಗಿ ಅಯಾಂಶ್ ತಂದೆ ವಿವರಿಸಿದ್ದಾರೆ. ಅಲ್ಲದೇ ಮೊಬೈಲ್​ಅನ್ನು ಯಾವಾಗಲೂ ಲಾಕ್ ಮಾಡಿಡುವುದಾಗಿ ಅವರು ಹೇಳಿದ್ದಾರೆ. ಈ ಘಟನೆ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:

ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಕಳ್ಳತನ; ಬೆಂಗಳೂರಿನಲ್ಲಿ ಎಫ್ಐಆರ್ ದಾಖಲು, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ಬಹುಮಾನ

ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ

Published On - 2:34 pm, Sun, 23 January 22

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!