AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತಪ್ಪಿಸಿಕೊಂಡ ಅಪರಾಧಿಯನ್ನು ಹಿಡಿಯಲು ತಪ್ಪಾದ ಮನೆ ಪ್ರವೇಶಿಸಿದ ಮಾರ್ಷಲ್​ಗಳು; ಹೆದರಿ ಕಂಗಾಲಾಗಿ ಮಗುವನ್ನು ಬಿಗಿದಪ್ಪಿ ಹಿಡಿದ ತಾಯಿ

ತಪ್ಪಾದ ಮನೆಗೆ ನುಗ್ಗಿದ ಮಾರ್ಷಲ್​ಗಳು ತಾಯಿ ಮತ್ತು ಪುಟ್ಟ ಮಗುವನ್ನು ಗನ್​ ಪಾಯಿಂಟ್​ನಲ್ಲಿ ಹಿಡಿಟ್ಟಿದ್ದರು. ಹೆದರಿ ಕಂಗಾಲಾದ ತಾಯಿ, ಮಗುವನ್ನು ಬಿಗಿದಪ್ಪಿ ಹಿಡಿದು ನಿಂತಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Video: ತಪ್ಪಿಸಿಕೊಂಡ ಅಪರಾಧಿಯನ್ನು ಹಿಡಿಯಲು ತಪ್ಪಾದ ಮನೆ ಪ್ರವೇಶಿಸಿದ ಮಾರ್ಷಲ್​ಗಳು; ಹೆದರಿ ಕಂಗಾಲಾಗಿ ಮಗುವನ್ನು ಬಿಗಿದಪ್ಪಿ ಹಿಡಿದ ತಾಯಿ
ಗನ್​ ನೋಡಿ ಮಗುವನ್ನು ಬಿಗಿದಪ್ಪಿ ಹಿಡಿದ ತಾಯಿ
TV9 Web
| Edited By: |

Updated on: Oct 28, 2021 | 12:39 PM

Share

ತಪ್ಪಿಸಿಕೊಂಡ ಅಪರಾಧಿಯನ್ನು ಹುಡುಕಲು ಮಾರ್ಷಲ್​ಗಳು ಅಪಾರ್ಟ್ಮೆಂಟ್​ಗಳಿಗೆ ನುಗ್ಗುವ ದೃಶ್ಯಗಳನ್ನು ನೀವು ಈ ಹಿಂದೆ ನೋಡಿರಬಹುದು. ಏತನ್ಮಧ್ಯೆ ತಪ್ಪಾದ ಮನೆ ಮೇಲೆ ದಾಳಿ ನಡೆಸಿ ಅಮಾಯಕರನ್ನು ಗನ್​ ಪಾಯಿಂಟ್​ನಲ್ಲಿ ಹಿಡಿದಿಟ್ಟುಕೊಳ್ಳುವ ಹಲವಾರು ದೃಶ್ಯಗಳಿವೆ. ಇತ್ತೀಚೆಗೆ ಫ್ಲೋರಿಡಾದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ತಪ್ಪಾದ ಮನೆಗೆ ನುಗ್ಗಿದ ಮಾರ್ಷಲ್​ಗಳು ಗನ್​ ಪಾಯಿಂಟ್​ನಲ್ಲಿ ತಾಯಿ ಮತ್ತು ಪುಟ್ಟ ಮಗುವನ್ನು ಹಿಡಿದಿಟ್ಟಿದ್ದರು. ಹೆದರಿ ಕಂಗಾಲಾದ ತಾಯಿ, ಮಗುವನ್ನು ಬಿಗಿದಪ್ಪಿ ಹಿಡಿದು ನಿಂತಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಕ್ಟೋಬರ್ 22ರಂದು ಘಟನೆ ನಡೆದಿದ್ದು, ತಾಯಿ 3 ತಿಂಗಳ ಪುಟ್ಟ ಮಗುವನ್ನು ಮಲಗಿಸುತ್ತಾ ತಾನೂ ನಿದ್ರೆಗೆ ಜಾರಿದ್ದಳು. ಈ ವೇಳೆ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆದಿದೆ. ಮನೆ ಬಾಗಿಲೆದುರು ನಿಂತಿದ್ದ ಮಾರ್ಷಲ್​ಗಳು ಗನ್​ ಪಾಯಿಂಟ್​ನಿಂದ ತಾಯಿ ಮಗುವನ್ನು ಹಿಡಿದಿಟ್ಟಿದ್ದರು. 22 ವರ್ಷದ ಮಹಿಳೆ ಕಂಗಾಲಾಗಿ ನಿಂತಿದ್ದ ದೃಶ್ಯ ಇದೀಗ ವೈರಲ್ ಆಗಿದೆ. ಶಸ್ತ್ರಸಜ್ಜಿತ ಮಾರ್ಷಲ್​ಗಳು ಮಹಿಳೆಯ ಮನೆಯ ಬಾಗಿಲ ಎದುರು ಬಂದರು. ಮಹಿಳೆಯನ್ನು ಹೊರ ಬರುವಂತೆ ಹೇಳಿದರು. ಹೊರಗೆ ಬಾ ಎಂದು ಮಾರ್ಷಲ್​ಗಳು ಹೇಳುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.

ಮಹಿಳೆ, ಮಾರ್ಷಲ್​ಗಳ ಆದೇಶದಂತೆ ಮನೆಯೊಳಗಿದ್ದ ನಾಯಿಯನ್ನು ಪಂಜರದೊಳಗೆ ಇರಿಸಿ ಮನೆಯ ಬಾಗಿಲನ್ನು ತೆರೆದಳು. ತಕ್ಷಣವೇ ಮಾರ್ಷಲ್​ಗಳು ಮನೆಯೊಳಗೆ ನುಗ್ಗಿದರು. ಬಂದಿದ್ದ 7 ಮಾರ್ಷಲ್​ಗಳು ಬಂದೂಕುಗಳನ್ನು ಹಿಡಿದಿದ್ದರು. ಅವರು ನನ್ನನ್ನು ಹೊರಗೆ ತಳ್ಳಿದರು, ಮಗುವನ್ನು ಮತ್ತು ನಾನು ನಿಂತಿದ್ದಾಗ ಗನ್​ ಪಾಯಿಂಟ್​ನಿಂದ ಹಿಡಿದಿಟ್ಟಿದ್ದರು. ನನಗೆ ತುಂಬಾ ಭಯವಾಗಿತ್ತು. ಏಕೆಂದರೆ ಒಟ್ಟು 7 ರಿಂದ 8 ಜನರಲ್ಲಿ ಅಷ್ಟೂ ಜನ ಬಂದೂಕುಗಳನ್ನು ಹಿಡಿದು ನಿಂತಿದ್ದರು ಎಂದು ಮಹಿಳೆ ಹೇಳಿದ್ದಾರೆ.

ಮಾರ್ಷಲ್​ಗಳು ತಾವು ತಪ್ಪು ಮಾಡುತ್ತಿದ್ದೇವೆ ಎಂದು ಅರಿಯುವ ಮುನ್ನವೇ ಗನ್​ ಪಾಇಂಟ್​ನಿಂದ ಹಿಡಿದಿಟ್ಟಿದ್ದರು, ಆ ಬಳಿಕ ಅವರಲ್ಲಿ ಓರ್ವರು ತಪ್ಪು ಅಪಾರ್ಟ್ಮೆಂಟ್ ತಪ್ಪು ಅಪಾರ್ಟ್ಮೆಂಟ್ ಎಂದು ಹೇಳುತ್ತಿರುವುದು ಕೇಳಿಸಿದೆ. ಸುಮಾರು ಒಂದು ಗಂಟೆಯ ಬಳಿಕ ಅಪಾರ್ಟ್ಮೆಂಟ್​ನಿಂದ ಅವರೆಲ್ಲಾರೂ ಹೊರ ಹೋದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಸೆಪ್ಟೆಂಬರ್​ನಲ್ಲಿ ನಡೆದ ಕೊಲೆಯ ನಂತರ ವಾರೆಂಟ್​ನಲ್ಲಿ ಶಮರ್ ಜಾನ್ಸರ್​ಗಾಗಿ ಹುಡುಕುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ:

Shocking Video: ಬಕೆಟ್​ನಲ್ಲಿ ನೀರು ಹಿಡಿದು ದೈತ್ಯ ನಾಗರ ಹಾವಿನ ತಲೆಯ ಮೇಲೆ ಸುರಿದ ಭೂಪ! ವಿಡಿಯೋ ನೋಡಿ

Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ 8 ತಿಂಗಳ ಗರ್ಭಿಣಿ

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ