Viral Video: ಅಲೋಪೇಸಿಯಾನೇ ಆಶೀರ್ವಾದ: ‘ಬಾಲ್ಡ್ ಈಸ್​ ಬ್ಯೂಟಿಫುಲ್​’ ನೀಹಾರ್​ ಸಚದೇವ್ ​

Inspirational Story : ನಿನ್ನನ್ನು ಯಾರು ಮದುವೆಯಾಗುತ್ತಾರೆ? ಎಂದು ನನ್ನ ತಂದೆಯೇ ಕೇಳಿದರು. ಆಗ ಕೋಪದಿಂದ, 'ನನ್ನ ಹೆಗಲ ಮೇಲೆ ಒಳ್ಳೆಯ ತಲೆ ಇದೆ ಎಂದು ಅಂದುಕೊಳ್ಳುವ ಯಾರಾದರೂ!' ಎಂದು ಉತ್ತರಿಸಿ ತಲೆಯನ್ನು ಸಂಪೂರ್ಣ ಬೋಳಿಸಿಕೊಳ್ಳಲು ನಿರ್ಧರಿಸಿದೆ. ಬೋಳುತಲೆಯಲ್ಲಿ ತುಂಬಾ ಸುಂದರವಾಗಿ ಕಂಡೆ. ಸಂಪೂರ್ಣ ಸ್ವತಂತ್ರಳು ಎನ್ನಿಸತೊಡಗಿತು.

Viral Video: ಅಲೋಪೇಸಿಯಾನೇ ಆಶೀರ್ವಾದ: 'ಬಾಲ್ಡ್ ಈಸ್​ ಬ್ಯೂಟಿಫುಲ್​' ನೀಹಾರ್​ ಸಚದೇವ್ ​
ನೀಹಾರ್ ಸಚದೇವ ಮತ್ತು ಅರುಣ ದಂಪತಿ
Follow us
|

Updated on:Sep 14, 2023 | 4:53 PM

Alopecia: ‘ಆರು ತಿಂಗಳ ಮಗುವಾಗಿದ್ದಾಗಲೇ ಅಲೋಪೇಸಿಯಾದಿಂದ ನನ್ನ ತಲೆಗೂದಲು ಉದುರಲಾರಂಭಿಸಿದವು. ನನ್ನ ಪೋಷಕರು ಆಯುರ್ವೇದ ಚಿಕಿತ್ಸೆ ಕೊಡಿಸಿದರು. ಆರು ವರ್ಷದವಳಾಗುತ್ತಿದ್ದಂತೆ ಹುಬ್ಬುಗಳೂ ಉದುರಿದವು. ಕೂದಲುಗಳಿಲ್ಲದೆಯೂ ನಾನು ಸುಂದರವಾಗಿ ಕಾಣುತ್ತೇನೆ ಎಂದು ನನ್ನ ತಾಯಿ ಹೇಳುತ್ತಿದ್ದರಿಂದ ನನ್ನಲ್ಲಿ ಆತ್ಮಪ್ರಜ್ಞೆ ಬೆಳೆಯುತ್ತ ಹೋಯಿತು. ಒಂಬತ್ತು ವರ್ಷದವಳಿದ್ದಾಗ ಟೋಪಿ ಧರಿಸಿ ಶಾಲೆಗೆ ಹೋಗತೊಡಗಿದೆ. ಆಗ ನನ್ನ ಹೆತ್ತವರು ವಿಗ್​ ಕೊಡಿಸಿದರು. ಎಲ್ಲರಂತೆ ಸಾಮಾನ್ಯವಾಗಿ ಕಾಣುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಶಾಲೆಗೆ ಹೋಗತೊಡಗಿದೆ. ಆದರೆ ಶಾಲೆಯಲ್ಲಿ ಒಂದು ಹುಡುಗಿ, ಓಹ್ ದೇವರೇ ಅದು ವಿಗ್ (Wig)​? ಎಂದು ಕೂಗಿದಳು. ಆಗ ನಾನು ಗಾಸಿಗೊಂಡೆ. ಆತ್ಮೀಯ ಸ್ನೇಹಿತ ಕೂಡ ಅವಮಾನಗೊಳಿಸಿದ.’

ಇದನ್ನೂ ಓದಿ : Viral Video: ಆಗ್ರಾ; ಸರ್ಕಾರಿ ಮಕ್ಕಳ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಮಹಿಳಾ ಅಧಿಕಾರಿ; ತನಿಖೆಗೆ ಆದೇಶ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಮಾಧ್ಯಮಿಕ ಶಾಲೆಯ ಅನುಭವವಂತೂ ನರಕದಿಂದ ಕೂಡಿತ್ತು. ಸ್ವಿಮ್ಮಿಂಗ್​ ಕ್ಲಾಸ್​ ಇದ್ದಾಗ ನಾನು ಹೆದರುತ್ತಿದ್ದೆ. ಆಗ ಆಚೆ ಕುಳಿತುಕೊಳ್ಳುತ್ತಿದ್ದೆ. ಸ್ನೇಹಿತೆಯರು ಚುಡಾಯಿಸತೊಡಗಿದರು, ಆಗೆಲ್ಲಾ ಮನೆಗೆ ಬಂದು ಅಪ್ಪ ಅಮ್ಮನ ಬಳಿ ಬಂದು ಜಗಳ ತೆಗೆಯುತ್ತಿದ್ದೆ. ಆದರೂ ನನ್ನ ವಿದ್ಯಾಭ್ಯಾಸದೆಡೆ ಗಮನಕೊಟ್ಟೆ. ಮುಂದೆ ನನ್ನದೇ ಆದ ಸ್ನೇಹಿತರ ಗುಂಪಾಯಿತು. ನನಗೊಬ್ಬ ಆಪ್ತ ಗೆಳೆಯನೂ ಆದ. ನಾನು ನನ್ನ ಕೂದಲಿನ ಸಮಸ್ಯೆಯ ಬಗ್ಗೆ ಹೇಳಿದೆ. ನಮ್ಮಿಬ್ಬರಿಗೂ ಸಾಕಾಗುವಷ್ಟು ನನ್ನ ತಲೆಗೂದಲಿದೆ ಎಂದ. ಕ್ರಮೇಣ ನನ್ನ ತಲೆಯಲ್ಲಿ ಕೂದಲು ಮತ್ತೆ ಬೆಳೆಯಲಾರಂಭಿಸಿತು. ನಾನು ವಿಗ್​ ಧರಿಸುವುದನ್ನು ಬಿಟ್ಟೆ.’

ಅಲೋಪೇಸಿಯಾ ಎಂಬ ಆಶೀರ್ವಾದ

‘ಆದರೆ ಮತ್ತೆ ನನ್ನ ಕೂದಲು ಉದುರಲಾರಂಭಿಸಿದವು. ಸ್ಟಿರಾಯ್ಡ್ ಟ್ರೀಟ್​ಮೆಂಟ್​ ಕೂಡ ಫಲಿಸಲಿಲ್ಲ. ಆಗ ನಿನ್ನನ್ನು ಯಾರು ಮದುವೆಯಾಗುತ್ತಾರೆ? ಎಂದು ನನ್ನ ತಂದೆಯೇ ಕೇಳಿದರು. ಆಗ ಕೋಪದಿಂದ, ‘ನನ್ನ ಹೆಗಲ ಮೇಲೆ ಒಳ್ಳೆಯ ತಲೆ ಇದೆ ಎಂದು ಅಂದುಕೊಳ್ಳುವ ಯಾರಾದರೂ!’ ಎಂದು ಉತ್ತರಿಸಿ ನನ್ನ ತಲೆಯನ್ನು ಸಂಪೂರ್ಣ ಬೋಳಿಸಿಕೊಳ್ಳಲು ನಿರ್ಧರಿಸಿದೆ. ನನ್ನ ಸ್ನೇಹಿತರು ‘ನೀಹಾರ್​ ಬಾಲ್ಡ್​ ಬಾಷ್​’ ಎಂಬ ಪಾರ್ಟಿ ಆಯೋಜಿಸಿದರು. ನನ್ನ ತಂದೆಗೆ ನನ್ನ ತಲೆಯನ್ನು ಕ್ಷೌರ ಮಾಡುವಂತೆ ವಿನಂತಿಸಿಕೊಂಡೆ. ನಂತರ ಕನ್ನಡಿಯಲ್ಲಿ ನೋಡಿಕೊಂಡೆ, ನಿಜಕ್ಕೂ ನಾನು ಸುಂದರವಾಗಿ ಕಾಣುತ್ತಿದ್ದೆ! ನಂತರ ನಾನು ಶಾಲೆಗೆ ಮರಳಿದೆ.  ನನ್ನನ್ನು ಹೀಗಳೆದವರೆಲ್ಲ ಮತ್ತೆ ಗೆಳೆತನ ಬಯಸಿದರು. ನೀನು ಅದ್ಭುತವಾಗಿದ್ದೀ, ನಾನೇ ನೀಚ, ಕ್ಷಮಿಸು, ಬಹುಶಃ ಕ್ಷಮಿಸುತ್ತೀ ಎಂದು ಭಾವಿಸುತ್ತೇನೆ ಎಂದು ಒಬ್ಬ ಹೇಳಿದ.’

ನೀಹಾರ್ ಮತ್ತು ಅರುಣ ಮಧುರ ಕ್ಷಣಗಳು

‘ತಲೆ ಬೋಳಿಸಿಯಾದ ಮೇಲೆ ನಾನು ಸಂಪೂರ್ಣ ಸ್ವತಂತ್ರಳು ಎಂಬ ಭಾವ ಮೂಡಿತು. ಸಮಾಜದ ಬಗ್ಗೆ ಯೋಚಿಸಬೇಡ ಎಂದು ನನ್ನ ಪೋಷಕರೂ ಹೇಳಿದರು. ನನ್ನನ್ನು ನಾನು ಸ್ವೀಕರಿಸಿದೆ. ಮುಂದೆ ನನ್ನ ಅಕ್ಕನ ಮದುವೆಯಲ್ಲಿ ನಾನು ಚೆಂದವಾಗಿ ಅಲಂಕರಿಸಿಕೊಂಡು ಧೈರ್ಯದಿಂದ ವೇದಿಕೆಯ ಮೇಲೆ ಹೋಗಿ ನನ್ನ ಅಲೋಪೇಸಿಯಾದ ಬಗ್ಗೆ ಹೇಳಿಕೊಂಡೆ. ನನ್ನ ದುಃಸ್ವಪ್ನವೇ ನನಗೆ ದೊಡ್ಡ ಆಶೀರ್ವಾದ. ಮುಂದೆ ಸಂಗಾತಿ ಅರುಣ ಸಿಕ್ಕರು. ಈಗ ನಾನು ಯಾವ ಆತಂಕವೂ ಇಲ್ಲದೇ ನನ್ನಿಚ್ಛೆಯಂತೆ ಬದುಕುತ್ತಿದ್ದೇನೆ, ಖುಷಿಯಿಂದ!

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:27 pm, Thu, 14 September 23

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ