AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಬಣ್ಣಗುರುಡುತನ ಇದೆಯೇ? ಪರೀಕ್ಷಿಸಿಕೊಳ್ಳಿ

Test for Color Blindness : ಬಣ್ಣಗುರುಡುತನದ ಸಮಸ್ಯೆ ಇಲ್ಲವೆಂದಾದಲ್ಲಿ ಈ ವೃತ್ತದಲ್ಲಿರುವ ಅಂಕಿಗಳನ್ನು ನೀವು ಸ್ಪಷ್ಟವಾಗಿ ಗುರುತಿಸುತ್ತೀರಿ.

ನಿಮಗೆ ಬಣ್ಣಗುರುಡುತನ ಇದೆಯೇ? ಪರೀಕ್ಷಿಸಿಕೊಳ್ಳಿ
ಈ ಬಣ್ಣಗಳಲ್ಲಿ ಅಡಗಿರುವ ಅಂಕಿಗಳನ್ನು ಗುರುತಿಸಿ
TV9 Web
| Edited By: |

Updated on:Sep 29, 2022 | 11:13 AM

Share

Color Blind : ನಮ್ಮನ್ನು ನಾವು ಅರಿತುಕೊಳ್ಳಲು ಮನೋವಿಜ್ಞಾನದ ಆಧಾರದಡಿ ಸಾಕಷ್ಟು ಪರೀಕ್ಷೆಗಳನ್ನು ಮನೋಶಾಸ್ತ್ರಜ್ಞರು ರೂಪಿಸಿದ್ದಾರೆ. ಈಗಾಗಲೇ ಇಂಥ ಸ್ವಯಂಪರೀಕ್ಷೆಗಳ ಕುರಿತು ಈ ತಾಣದಲ್ಲಿಯೇ ನೀವು ಓದಿದ್ದೀರಿ, ಪ್ರಯೋಗಿಸಿದ್ದೀರಿ. ಮೈಂಡ್​ ರೀಡಿಂಗ್, ಫೇಸ್​ ರೀಡಿಂಗ್​ನಂಥ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಂಡಿರುತ್ತೀರಿ. ಜೊತೆಗೆ ಸ್ವಯಂ ಅವಲೋಕನ ಕೂಡಿ ಮಾಡಿಕೊಂಡಿರುತ್ತೀರಿ. ಈ ಮೂಲಕ ನಿಮ್ಮ ಸ್ವಭಾವ, ಗುಣ, ಬುದ್ಧಿವಂತಿಕೆ, ಭಾವನಾತ್ಮಕ ಮಟ್ಟ ಮುಂತಾದವನ್ನು ಪರೀಕ್ಷಿಸಿಕೊಂಡಿರುತ್ತೀರಿ. ಈಗಿಲ್ಲಿ ಇನ್ನೊಂದು ಪರೀಕ್ಷೆ ಇದೆ. ಇದು ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ್ದು. ಅಂದರೆ ಬಣ್ಣಗುರುಡು ಸಮಸ್ಯೆಗೆ ಸಂಬಂಧಿಸಿದ್ದು.

ಸಾಕಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರ ಕಣ್ಣುಗಳನ್ನು ನೋಡಿದಾಗ ಅಂಥ ವ್ಯತ್ಯಾಸವೇನೂ ತೋರದು. ಆದರೆ, ಇತರರಿಗೆ ಕಾಣುವ ಬಣ್ಣಗಳು ಅವರ ಗ್ರಹಿಕೆಯಲ್ಲಿ ಬೇರೆಯ ಬಣ್ಣಗಳನ್ನೇ ಸೂಚಿಸುತ್ತಿರುತ್ತವೆ. ಇದು ಸಾಮಾನ್ಯವಾಗಿ ಆನುವಂಶಿಕ ಸಮಸ್ಯೆ ಎಂದು ಹೇಳಲಾಗುತ್ತದೆ. ನೀವು ಈ ಸಮಸ್ಯೆಗೆ ಒಳಗಾಗಿದ್ದೀರೋ ಇಲ್ಲವೋ ಎನ್ನುವುದನ್ನು ಇಲ್ಲಿರುವ ಸಣ್ಣ ಪರೀಕ್ಷಾ ವಿಧಾನದಿಂದ ಕಂಡುಕೊಳ್ಳಬಹುದು.

1917 ರಲ್ಲಿ ಜಪಾನಿನ ವೈದ್ಯ ಶಿನೋಬು ಇಶಿಹರಾ ಅವರು ಬಣ್ಣಗುರುಡುತನವನ್ನು ಪತ್ತೆಹಚ್ಚಲು ಈ ಪರೀಕ್ಷಾ ವಿಧಾನವನ್ನು ರೂಪಿಸಿದರು. ಇಲ್ಲಿ ವಿವಿಧ ಬಣ್ಣಗಳನ್ನುಳ್ಳ ಆರು ವೃತ್ತಾಕಾರಗಳಿವೆ. ಈ ವೃತ್ತಗಳಲ್ಲಿ ಕೆಲ ಸಂಖ್ಯೆಗಳು ಅಡಗಿವೆ. ಅವುಗಳನ್ನು ಗುರುತಿಸಲು ಸಾಧ್ಯವಾಗುವಂತೆ ಈ ವೃತ್ತಗಳ ವಿನ್ಯಾಸ ಮಾಡಲಾಗಿದೆ. ಹಾಗಾಗಿ ಈ ವೃತ್ತಗಳಲ್ಲಿರುವ ಅಂಕಿಗಳನ್ನು ಗುರುತಿಸಲು ನಿಮಗೆ ಸಾಧ್ಯವಾಗದಿದ್ದರೆ ನಿಮಗೆ ಬಣ್ಣಗುರು ಸಮಸ್ಯೆ ಇದೆ ಎಂದರ್ಥ. ನೀವು ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಉತ್ತರ ಹೀಗಿದೆ : 7, 13, 16, 8, 12 ಮತ್ತು 9

(ವಿ. ಸೂ. ಅಂತರ್ಜಾಲದ ಆಧಾರದಿಂದ ಪಡೆದ ಮಾಹಿತಿ ಇದಾಗಿದೆ. ನಿಖರತೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಒಳಿತು)

 ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:11 am, Thu, 29 September 22

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು