Viral : ಬಾರ್ಬಿ; ಇದೀಗ ಬರಾಕ್​ ಒಬಾಮಾ ಮತ್ತು ಜೋ ಬೈಡನ್​ಗೆ ಗುಲಾಬಿ ಜ್ವರ

Artificial Intelligence : ವಿಷಯಾಧಾರಿತ ಬೌದ್ಧಿಕ ಚರ್ಚೆಯನ್ನು ಬೆಳೆಸದೆ ಬಾರ್ಬಿ ಹೆಸರಲ್ಲಿ ಎಐ ಮೂಲಕ ಇಂಥದೆಲ್ಲವನ್ನೂ ಸೃಷ್ಟಿಸುತ್ತಿರುವುದು ಮತ್ತದನ್ನು ಜನರು ತಮಾಷೆಯಾಗಿ ನೋಡುತ್ತಿರುವುದು ಕೆಲ ನೆಟ್ಟಿಗರಿಗೆ ಬೇಸರ ತರಿಸಿದೆ.

Viral : ಬಾರ್ಬಿ; ಇದೀಗ ಬರಾಕ್​ ಒಬಾಮಾ ಮತ್ತು ಜೋ ಬೈಡನ್​ಗೆ ಗುಲಾಬಿ ಜ್ವರ
ಬರಾಕ್ ಒಬಾಮಾ ಮತ್ತು ಜೋ ಬೈಡೆನ್
Follow us
|

Updated on:Jul 28, 2023 | 4:56 PM

Barbie : ರಾಜಕಾರಣಿಗಳು, ಪ್ರಸಿದ್ಧ ವ್ಯಕ್ತಿಗಳು, ನಟನಟಿಯರು, ಉದ್ಯಮಿಗಳು ಹೀಗೆ ಇವರೆಲ್ಲರಿಗೂ ಹಿಡಿದಿದ್ದ ಬಾರ್ಬಿ ಫಿವರ್​​ ಮೊನ್ನೆಯಷ್ಟೇ ಗ್ಯಾಂಗ್ಸ್​ ಆಫ್​ ವಾಸೇಪುರ್​ಗೂ (Gangs of Wasseypur) ಹಿಡಿದಿತ್ತು. ಇದೀಗ ಬರಾಕ್​ ಒಬಾಮಾ ಮತ್ತು ಜೋ ಬೈಡೆನ್​ಗೂ ಹಿಡಿದುಕೊಂಡಿದೆ. ಎಐ ಕಲಾವಿದರಂತೂ ತಿಂಗಲಿನಿಂದ ಹಗಲೂರಾತ್ರಿ ಈ ಗುಲಾಬಿ ಜ್ವರದ ಹರಡುವಿಕೆಯಲ್ಲಿ ಮುಳುಗಿ ಹೋಗಿದ್ದಾರೆ. ಇದೀಗ ಜೋ ಮತ್ತು ಬರಾಕ್​ ಜೋಡಿಯಂತೂ ಬಹಳ ಮಾರ್ಮಿಕವಾಗಿದೆ ಎಂದು ನೆಟ್ಟಿಗರು ಬಿದ್ದುಬಿದ್ದು ನಗುತ್ತಿದ್ದಾರೆ.

ಜುಲೈ 21 ರಂದು ಬಿಡುಗಡೆಯಾದ ಬಾರ್ಬಿ ಇಡೀ ಜಗತ್ತನ್ನು ಗುಲಾಬಿ ಜ್ವರಕ್ಕೆ ಕೆಡವಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ; ಪಿಂಕ್ ಗೂಗಲ್, ಪಿಂಕ್ ಎಆರ್‌ಬಿಎನ್‌ಬಿ, ಪಿಂಕ್​ ಬರ್ಗರ್​ ಹೀಗೆ… ಇದೀಗ ಜೋ ಬೈಡನ್ ಮತ್ತು ಒಬಾಮಾ ಅವರ ಬಾರ್ಬಿ ಎಐ ಚಿತ್ರವನ್ನು ಬೈಡೆನ್ ಆಡಳಿತದಲ್ಲಿ ರಾಷ್ಟ್ರೀಯ ಹಣಕಾಸು ಅಧ್ಯಕ್ಷರಾಗಿದ್ದ ಜಾನ್​ ಕೂಪರ್​ (Jon Cooper) ಟ್ವೀಟ್​ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ : Viral Video: ನಾಯಿಗೂ ಒಂದು ದಿನ ಬರುತ್ತದೆ ಎಂದು ಕೇಳಿದ್ದಿರಲ್ಲ, ಈಗ ನೋಡಿ!

ಅನೇಕರು ಈ ಟ್ವೀಟಿನಡಿ ಪ್ರತಿಕ್ರಿಯಿಸುತ್ತಿದ್ದಾರೆ. ನಕ್ಕು ನಕ್ಕು ಹೊಟ್ಟೆ ಕರಗಿಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಚಿತ್ರ ಬೇಕೇ? ಎಂದಿದ್ದಾರೆ ಒಬ್ಬರು. ಇದು ಅದ್ಭುತ, ಇದು ನಿಜವಾಗಲಿ ಎಂದಿದ್ದಾರೆ ಇನ್ನೊಬ್ಬರು. ಇವರೊಂದಿಗೆ ಟ್ರಂಪ್​ನನ್ನೂ ಕರೆದುಕೊಂಡು ಬನ್ನಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಚಿಪ್ಪುಮೀನಿನ ಖಾದ್ಯದಲ್ಲಿ ಸಿಕ್ಕ ಮುತ್ತು; ಅದನ್ನಾಕೆ ನಿಶ್ಚಿತಾರ್ಥದ ಉಂಗುರವಾಗಿಸಿಕೊಂಡಳು

ಆದರೆ ಎಐ ಕಲಾವಿದರ ಈ ಸರಣಿಚಿತ್ರಗಳ ಕುರಿತು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಬಾರ್ಬಿ ಹೆಸರಿನಲ್ಲಿ ಇಂಥವರನ್ನೆಲ್ಲ ನೋಡುತ್ತಿರುವುದು ನಿರಾಶೆ ಉಂಟು ಮಾಡುತ್ತಿದೆ. ವಿಷಯಾಧಾರಿತ ಮತ್ತು ಸಮರ್ಥನೀಯ ಬೌದ್ಧಿಕ ಚರ್ಚೆಗಳನ್ನು ಬೆಳೆಸುವ ಬದಲು ಜನರನ್ನು ಇಂಥ ವಿಷಯಗಳಿಗೆ ಎಳೆಯುತ್ತಿರುವುದು ನಿಜಕ್ಕೂ ಶೋಚನೀಯ ಎಂದಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:49 pm, Fri, 28 July 23

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ