Viral Video: ನಾಯಿಗೂ ಒಂದು ದಿನ ಬರುತ್ತದೆ ಎಂದು ಕೇಳಿದ್ದಿರಲ್ಲ, ಈಗ ನೋಡಿ!

Dogs : ಓಹೋ, ಶ್ವಾನಮಹಾರಾಜರು ಅಜಯ್​ ದೇವಗನ್​ ಅವರಿಂದ ತರಬೇತಿ ಪಡೆದಿರುವ ಹಾಗಿದೆ ಎಂದು ಹಲವರು. ಹಾಗಿದ್ದರೆ ಇನ್ನು ಮುಂದೆ ನಮ್ಮ ರಾಷ್ಟ್ರೀಯ ಪ್ರಾಣಿ ಯಾವುದು ಎಂದು ಕೆಲವರು. ಈ ವಿಡಿಯೋದ ಬಗ್ಗೆ ನೀವು ಏನು ಹೇಳುತ್ತೀರಿ?

Viral Video: ನಾಯಿಗೂ ಒಂದು ದಿನ ಬರುತ್ತದೆ ಎಂದು ಕೇಳಿದ್ದಿರಲ್ಲ, ಈಗ ನೋಡಿ!
ಎಮ್ಮೆಸವಾರಿ ಮಾಡುತ್ತಿರುವ ನಾಯಿ
Follow us
|

Updated on:Jul 28, 2023 | 4:06 PM

Dog : ಶ್ವಾನಮಹಾರಾಜರು ಎಮ್ಮೆಯ (Buffalo) ಮೇಲೇರಿ ಘನಗಾಂಭೀರ್ಯವಾಗಿ ಪ್ರಜೆಗಳ ಕ್ಷೇಮಸಮಾಚಾರ ತಿಳಿದುಕೊಳ್ಳಲು ಪುರಸಂಚಾರಕ್ಕೆ ಹೊರಟಿದ್ದಾರೆ. ನೆಟ್ಟಿಗ ಮಹಾಶಯರಲ್ಲಿ ಕೆಲವರು ಇವರಿಗೆ ಬಗೆಬಗೆಯ ಸವಾಲುಗಳನ್ನೆಸೆದು ಇವರ ಪಾಂಡಿತ್ಯ ಪರೀಕ್ಷೆ ಮಾಡುತ್ತಿದ್ದಾರೆ. ಕೆಲವರಷ್ಟೇ ಇವರ ಬಗ್ಗೆ ಹೆಮ್ಮೆಯಾಡಿದ್ದಾರೆ. ಇನ್ನೂ ಕೆಲವರು ಅಪಹಾಸ್ಯದಿಂದ ಕಾಲೆಳೆಯುತ್ತಿದ್ದಾರೆ. ಈ ಎಳೆತಂದಿದಾಗಿಯೇ ಈ ಮೂವರೂ ಸಾಮಾಜಿಕ ಜಾಲತಾಣದ ತುಂಬೆಲ್ಲ ತಮ್ಮ ಕೀರ್ತಿಪತಾಕೆ ಹಾರಿಸುತ್ತಿದ್ದಾರೆ. ಇವರಿಗೆ ಜಯವಾಗಲಿ, ಈ ಅಪರೂಪದ ಸಂಚಾರಕ್ಕೆ ನೀವೂ ಸಾಕ್ಷಿಯಾಗಿ ಪುನೀತರಾಗಿ.

‘ಪ್ರತೀ ನಾಯಿಗೂ ಅದರದೇ ಆದ ದಿನವೊಂದು ಬಂದೇ ಬರುತ್ತದೆ ಎಂದು ಕೇಳಿದ್ದೆ, ಆದರೆ ಅದನ್ನು ಇಂದು ನೋಡಿಯೇ ಬಿಟ್ಟೆ’ ಎಂದಿದ್ದಾರೆ ಈ ವಿಡಿಯೋ ಟ್ವೀಟ್ ಮಾಡಿದ ಶಾಝಿಯಾ ಚೌಧರಿ. ಈ ವಿಡಿಯೋ ಅನ್ನು ಈತನಕ 9 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 8,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 1,600 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಇನ್ನು ಇನ್​ಸ್ಟಾಗ್ರಾನಲ್ಲಿಯೂ ಈ ವಿಡಿಯೋ ಇದ್ದು ಈತನಕ 16 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ.

ಇದನ್ನೂ ಓದಿ : Viral: ಬಿಹಾರ್; ತನಗೆ ಎರಡೇ ಮಕ್ಕಳು ಎಂದು ಸುಳ್ಳು ಹೇಳಿದ್ದ ಛಾಪ್ರಾ ಮೇಯರ್ ಇದೀಗ ವಜಾ

ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ವೈರಲ್ ವಿಡಿಯೋ ಯಾವ ಚಿತ್ರದ ಶೂಟಿಂಗ್? ಎಂದಿದ್ದಾರೆ ಒಬ್ಬರು. ಶಭಾಷ್​! ಅಜಯ್​ ದೇವಗನ್​ ಎಂದಿದ್ದಾರೆ ಮತ್ತೊಬ್ಬರು. ಆನೆಗಳ ಮೇಲೆ ಸವಾರಿ ಮಾಡುತ್ತಿರುವ ನಾಯಿಗೆ ಜಯವಾಗಲಿ ಎಂದಿದ್ದಾರೆ ಇನ್ನೊಬ್ಬರು. ಗೋಲ್ಮಾಲ್​ 1ನೇ ಡ್ರಾಫ್ಟ್​ ಇದು ಎಂದಿದ್ದಾಎರ ಇನ್ನೂ ಒಬ್ಬರು.

ಇದನ್ನೂ ಓದಿ : Viral: ಚಿಪ್ಪುಮೀನಿನ ಖಾದ್ಯದಲ್ಲಿ ಸಿಕ್ಕ ಮುತ್ತು; ಅದನ್ನಾಕೆ ನಿಶ್ಚಿತಾರ್ಥದ ಉಂಗುರವಾಗಿಸಿಕೊಂಡಳು

ಅಯ್ಯೋ ನಾನೂ ನಿಮ್ಮೊಂದಿಗೆ ಈಗ ಇರಬೇಕಿತ್ತು ಎಂದಿದ್ದಾರೆ ಒಬ್ಬರು. ಇನ್ನುಮುಂದೆ ರಾಷ್ಟ್ರೀಯ ಪ್ರಾಣಿ ನಾಯಿಯಾಗಲಿ ಎಂದಿದ್ದಾರೆ ಮತ್ತೊಬ್ಬರು. ನಮ್ಮ ಬಾಹುಬಲಿ ಬಂದಾ ಎಂದಿದ್ದಾರೆ ಇನ್ನೂ ಒಬ್ಬರು. ಅವಕಾಶವಾದಿಗಳು ಎಲ್ಲೆಡೆಯೂ ಇರುತ್ತಾರೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:01 pm, Fri, 28 July 23

ತಾಜಾ ಸುದ್ದಿ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ