AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇವರುಗಳ ಶ್ರಮಕ್ಕೆ ವಿಜ್ಞಾನವೂ ವಿಚಾರವೂ ಕೌಶಲವೂ ಸೇರಿದಾಗ

Construction : ವಿಚಾರ ಶಕ್ತಿಯಿಂದ, ಅರಿವಿನಿಂದ, ಒಮ್ಮೊಮ್ಮೆ ತಕ್ಕುದಾದ ಸಲಕರಣೆಗಳ ಸಹಾಯದಿಂದ ಕಠಿಣವಾದ ಕೆಲಸಗಳನ್ನು ಚೊಕ್ಕ ಮತ್ತು ಛಂದಗೊಳಿಸುವ ಜಾಣ್ಮೆ ಇವರಿಗಲ್ಲದೆ ಇನ್ನ್ಯಾರಿಗಿದೆ? ನೋಡಿ ಈ ವಿಡಿಯೋ.

Viral Video: ಇವರುಗಳ ಶ್ರಮಕ್ಕೆ ವಿಜ್ಞಾನವೂ ವಿಚಾರವೂ ಕೌಶಲವೂ ಸೇರಿದಾಗ
ಗೋಡೆ ಗಿಲಾವು ಮಾಡುತ್ತಿರುವುದು
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Jul 28, 2023 | 5:59 PM

Share

Workers : ಎಂಜಿನಿಯರುಗಳು ಮತ್ತು ಕಾರ್ಮಿಕರ ಕೌಶಲ ಜಾಣತನಗಳನ್ನು ಎತ್ತಿ ತೋರಿಸಿ ಸಂಭ್ರಮಿಸುವ ವಿಡಿಯೋ ಒಂದು ವೈರಲ್ ಆಗಿದೆ. ‘ಇಂಜಿನಿಯರುಗಳು ಮತ್ತು ಕಾರ್ಮಿಕರ ಉಚ್ಚಮಟ್ಟದ ಕಸುಬುದಾರಿಕೆ’ ಎಂಬ ಒಕ್ಕಣೆಯಿರುವ ಈ ವಿಡಿಯೋವನ್ನು ತನ್ಸುಯೆಗೆನ್​ ಎನ್ನುವವರು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಕಟ್ಟಡ ಕಟ್ಟುವವರು, ರಸ್ತೆ ನಿರ್ಮಿಸುವವರು, ಕೈಗಾರಿಕೆಯ ಕೆಲಸಗಾರದು ಹೀಗೆ ಒಟ್ಟಾರೆ ಶ್ರಮಜೀವಿಗಳು ಭೌತಶಾಸ್ತ್ರದ ತತ್ವಗಳ ಪ್ರಾತ್ಯಕ್ಷಿಕ ಬಳಕೆಯಿಂದ, ತಮ್ಮ ವಿಚಾರ ಶಕ್ತಿಯಿಂದ, ಅರಿವಿನಿಂದ, ಒಮ್ಮೊಮ್ಮೆ ತಕ್ಕುದಾದ ಸಲಕರಣೆಗಳನ್ನು ಸಹಾಯಕ್ಕೆ ತೆಗೆದುಕೊಂಡು ತಮ್ಮ ಕಠಿಣವಾದ ಕೆಲಸಗಳನ್ನು ಅಚ್ಚರಿಯೆನ್ನಿಸುವಷ್ಟು ಸುಲಭವಾಗಿಯೂ ಅಚ್ಚುಕಟ್ಟಾಗಿಯೂ ನೆರವೇರಿಸುವ ತುಣುಕುಗಳು ಕಾಣುತ್ತವೆ.

ಕಬ್ಬಿಣದ ಪೈಪುಗಳನ್ನು ಒಂದೊಂದಾಗಿ ಎತ್ತಿಳಿಸಿ ಸಾಗಿಸುವ ಬದಲು ಅವುಗಳ ಮೇಲೆಯೇ ಸ್ಕೇಟಿಂಗ್ ಮಾಡಿ ಉರುಳಿಸುತ್ತ ಸಾಗಿಸುವುದನ್ನು ಕಾಣುತ್ತೇವೆ. ಗೋಡೆಗೆ ಬಣ್ಣ ಉಗ್ಗಿ ಸೂಕ್ತ ಅಳತೆಯ ಹಲಗೆಯಿಂದ ಕ್ಷಣಾರ್ಧದಲ್ಲಿ ಬಣ್ಣ ಹಚ್ಚಿ ಮುಗಿಸುವುದು, ಅರೆನಿರ್ಮಿತ ಕಟ್ಟಡದ ಬೇರೆ ಬೇರೆ ಹಂತಗಳಲ್ಲಿ ನಿಂತ ಕೆಲಸಗಾರರು ತಮ್ಮ ಚಲನೆಗಳನ್ನು ಮೇಳೈಸಿ ಚಕಚಕನೇ ನೆಲದಿಂದ ಆರಾಳೆತ್ತರಕ್ಕೆ ಕಲಸಿದ ಸಿಮೆಂಟ್ ಸಾಗಿಸುವುದು, ಹೇಗೆ ನೋಡಿದರೆ ನೊಡುತ್ತಲೇ ಇರಬೇಕೆನ್ನುವ ಕಲಾಗಾರಿಕೆ ಉದ್ದಕ್ಕೂ ತೋರುತ್ತದೆ.

ಇದನ್ನೂ ಓದಿ : Viral Video: ನಾಯಿಗೂ ಒಂದು ದಿನ ಬರುತ್ತದೆ ಎಂದು ಕೇಳಿದ್ದಿರಲ್ಲ, ಈಗ ನೋಡಿ!

ಈ ವಿಡಿಯೋ ಅನ್ನು ಈತನಕ ಸುಮಾರು 4.6 ಮಿಲಿಯನ್​ ಜನರು ನೋಡಿದ್ದಾರೆ. 1000ಕ್ಕಿಂತಲೂ ಹೆಚ್ಚು ಜನರು ಲೈಕ್​ ಮಾಡಿದ್ದಾರೆ. 18 ಸಾವಿರಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಇಂಥ ಕೆಲಸಗಳನ್ನು ಮಾಡುವುದು ನನಗೂ ಇಷ್ಟ ಎಂದು ಅನೇಕರು ಹೇಳಿದ್ದಾರೆ. ಅಯ್ಯೋ ಇಷ್ಟು ದೊಡ್ಡ ವಿಡಿಯೋ ಅನ್ನು ಕೊನೇತನಕ ನೋಡಲು ಯಾರಿಗೆಲ್ಲ ತಾಳ್ಮೆ ಇತ್ತು ಎಂದು ಮತ್ತೊಂದಿಷ್ಟು ಜನ ಕೇಳಿದ್ದಾರೆ.

ಇದನ್ನೂ ಓದಿ : Viral: ಬಿಹಾರ್; ತನಗೆ ಎರಡೇ ಮಕ್ಕಳು ಎಂದು ಸುಳ್ಳು ಹೇಳಿದ್ದ ಛಾಪ್ರಾ ಮೇಯರ್ ಇದೀಗ ವಜಾ

ಎಂಥದ್ದೇ ಶ್ರಮದ ಅಥವಾ ದಿನನಿತ್ಯದ ಬೇಸರದ ಕೆಲಸಗಳನ್ನೂ ದಕ್ಷತೆಯಿಂದಷ್ಟೇ ಅಲ್ಲ ಆಟವಾಡುತ್ತ ಉಲ್ಲಾಸದಿಂದ ಮಾಡಬಹುದು ಎಂಬುದಕ್ಕೆ ಇದು ನಿದರ್ಶನವೇ? ನೋಡಿ ನಿಮಗೇನೆನ್ನಿಸಿತು ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ