AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜಪಾನ್​; ನಾಗರಿಕ ಜಿಂಕೆಸಾರಂಗಗಳ ಅಪರೂಪದ ವಿಡಿಯೋ

Animals : ಪರಿಸ್ಥಿತಿ ಎಂಥವರಿಗೂ ಸಹಬಾಳ್ವೆಯನ್ನು ಕಲಿಸುತ್ತದೆ ಎನ್ನುವುದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಜಪಾನಿನ ನಾರಾದಲ್ಲಿ ಮಾತ್ರ ಇದು ನಿಜ. ಮಳೆಯಿಂದ ರಕ್ಷಣ ಪಡೆಯಲು ಈ ಜೀವಗಳು ಮನುಷ್ಯರೊಂದಿಗೆ ಇಲ್ಲಿ ತಂಗಿವೆ.

Viral Video: ಜಪಾನ್​; ನಾಗರಿಕ ಜಿಂಕೆಸಾರಂಗಗಳ ಅಪರೂಪದ ವಿಡಿಯೋ
ಮಳೆ ಬಂದದ್ದಕ್ಕೆ ಜಿಂಕೆ ಮತ್ತು ಸಾರಂಗಗಳು ಜಪಾನಿನ ನಾರಾದಲ್ಲಿ ಮನುಷ್ಯರೊಂದಿಗೆ
ಶ್ರೀದೇವಿ ಕಳಸದ
|

Updated on:Jul 29, 2023 | 10:52 AM

Share

Japan : ಅಂತರ್ಜಾಲದಲ್ಲಿ ಪ್ರಾಣಿಪ್ರಿಯರ ಮನಸ್ಸನ್ನು ಕದಿಯುತ್ತಿದೆ ಈ ಸುಂದರವಾದ ವಿಡಿಯೋ. ಜಪಾನಿನ ನಾರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಭಾರೀ ಮಳೆ (Rain) ಬೀಳುತ್ತಿರುವ ಪರಿಣಾಮ ಮನುಷ್ಯರೊಂದಿಗೆ ಜಿಂಕೆ, ಸಾರಂಗಗಳೂ ಸೂರಿನ ಕೆಳಗೆ ಆಶ್ರಯ ಪಡೆದಿವೆ. ಈ ಅಪರೂಪದ ದೃಶ್ಯವನ್ನು ತನ್ಸು ಯೆಗೆನ್​ ಎನ್ನುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಾಮರಸ್ಯವನ್ನು ಈ ಚಿತ್ರ ಸೂಚಿಸುತ್ತಿದ್ದು, ನೆಟ್ಟಿಗರು ಈ ಆಪ್ತವಾದ ದೃಶ್ಯ ನೋಡಿ ಬಹಳ ಖುಷಿಗೊಂಡು ಪ್ರತಿಕ್ರಿಯಿಸುತ್ತಿದ್ದಾರೆ.

ಈತನಕ ಈ ವಿಡಿಯೋ ಅನ್ನು 34 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸುಮಾರು 5 ಲಕ್ಷ ಜನರು ಲೈಕ್ ಮಾಡಿದ್ದಾರೆ. 90,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನಿಜಕ್ಕೂ ಈ ಪ್ರಾಣಿಗಳೇ ಮನುಷ್ಯರಿಗಿಂತ ಹೆಚ್ಚು ನಾಗರಿಕತೆಯನ್ನು ಅರ್ಥ ಮಾಡಿಕೊಂಡಿವೆ ಎಂದಿದ್ಧಾರೆ ಒಬ್ಬರು. ಜಿಂಕೆಗಳಿಗೂ ಹೇಗೆ ಶಿಸ್ತು ಪಾಲಿಸಬೇಕು ಎನ್ನುವುದು ಗೊತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ವೈಪರ್ ವಿಥ್ ಸ್ಟಿಕರ್​; ಈ ಕಾರ್​ನಿಂದ ಅದೆಷ್ಟು ಅಪಘಾತಗಳಾಗಿವೆಯೋ

ನಿಜಕ್ಕೂ ಇದು ನನ್ನ ಮನಸ್ಸನ್ನು ತುಂಬಿ ಬರುತ್ತಿದೆ. ಎಷ್ಟು ಶಾಂತವಾಗಿ ಚೊಕ್ಕವಾಗಿ ಅವು ವಿರಮಿಸುತ್ತಿವೆ. ನಾನೀಗ ಈ ಜಾಗದಲ್ಲಿ ಇರಬಾರದಿತ್ತಾ? ಎನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ಇಂಥ ಮಧುರಗಳಿಗೆಗಳಿಗೆ ಪ್ರತೀ ಮನುಷ್ಯನು ಸಾಕ್ಷಿಯಾಗಬೇಕು, ಸಹಬಾಳ್ವೆ ಎಂದರೆ ಏನು ಎಂದು ಅರ್ಥವಾಗುತ್ತದೆ ಎಂದಿದ್ದಾರೆ ಇನ್ನೊಬ್ಬರು. ನಾನೀಗ ಯೋಚಿಸುತ್ತಿದ್ದೇನೆ ಪ್ರತೀ ಮಳೆಗಾಲದಲ್ಲಿಯೂ ಪ್ರಾಣಿಗಳೆಲ್ಲ ಎಲ್ಲಿ ಆಶ್ರಯ ಪಡೆಯುತ್ತವೆ? ಹೀಗೆಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral : ಬಾರ್ಬಿ; ಇದೀಗ ಬರಾಕ್​ ಒಬಾಮಾ ಮತ್ತು ಜೋ ಬೈಡನ್​ಗೆ ಗುಲಾಬಿ ಜ್ವರ 

ಈ ವಿಡಿಯೋ ನನ್ನೆಲ್ಲ ಮನಸ್ಸಿನ ದುಗುಡವನ್ನೂ ಓಡಿಸಿತು. ನಾನು ಅದಕ್ಕೇ ಆಗಾಗ ಪ್ರಾಣಿಗಳ ವಿಡಿಯೋವನ್ನೇ ಹೆಚ್ಚೆಚ್ಚು ನೋಡುತ್ತೇನೆ ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 10:51 am, Sat, 29 July 23

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!