AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹರಿಯಾಣ; 13 ಗಂಟೆಗಳ ಕ್ಯಾಬ್​ರೈಡ್​; ಚಾಲಕನಿಗೆ ಹಣ ಕೊಡಲು ನಿರಾಕರಿಸಿದ ಮಹಿಳೆ

Cabs : ರಾತ್ರಿಯಿಡೀ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಚಾಲಕನಿಗೆ ಹೇಳುತ್ತಲೇ ಹೋಗಿದ್ದಾಳೆ. ಬೇಸತ್ತ ಚಾಲಕ ಹಣ ಪಾವತಿಸುವಂತೆ ಕೇಳಿದಾಗ, ಆತನ ಮೇಲೆಯೇ ಸುಳ್ಳು ಕೇಸ್​ ದಾಖಲಿಸುವುದಾಗಿ ಬೆದರಿಸಿದ್ದಾಳೆ.

Viral Video: ಹರಿಯಾಣ; 13 ಗಂಟೆಗಳ ಕ್ಯಾಬ್​ರೈಡ್​; ಚಾಲಕನಿಗೆ ಹಣ ಕೊಡಲು ನಿರಾಕರಿಸಿದ ಮಹಿಳೆ
ಕ್ಯಾಬ್​ ಹಣ ಪಾವತಿಸದೆ ರಸ್ತೆಯಲ್ಲಿ ಜಗಳಕ್ಕಿಳಿದ ಗುರುಗ್ರಾಮ್​ನ ಜ್ಯೋತಿ
Follow us
ಶ್ರೀದೇವಿ ಕಳಸದ
|

Updated on:Jul 27, 2023 | 2:55 PM

Haryana : ಹರಿಯಾಣದ ಗುರುಗ್ರಾಮ್​ನ (Gurugram) ಈ ಮಹಿಳೆ 13 ಗಂಟೆಗಳ ಕಾಲ ಕ್ಯಾಬ್​ನಲ್ಲಿ ಸುತ್ತಾಡಿ ಕ್ಯಾಬ್​ ಚಾಲಕನಿಗೆ ಹಣ ಪಾವತಿಸಲು ನಿರಾಕರಿಸಿದ್ದಾಳೆ. ಇಷ್ಟೇ ಅಲ್ಲ, ಅವನು ಕಿರುಕುಳ ನೀಡಿದ್ಧಾನೆಂದು ಸುಳ್ಳು ಕೇಸ್​​ ಹಾಕುವುದಾಗಿ ಬೆದರಿಸಿ ರಸ್ತೆಯಲ್ಲಿ ಗಲಾಟೆ ಸೃಷ್ಟಿಸಿದ್ದಾಳೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಆಕೆ  ಕ್ಯಾಬ್​ ಚಾಲಕ, ಪೊಲೀಸ್​ ಮತ್ತು ಪತ್ರಕರ್ತೆಯೊಂದಿಗೆ ಜಗಳವಾಡಿದ್ದಾಳೆ. ಪತ್ರಕರ್ತೆ ದೀಪಿಕಾ ನಾರಾಯಣ ಭಾರದ್ವಾಜ್ ಈ ವಿಡಿಯೋ​ ಟ್ವೀಟ್ ಮಾಡಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ಕ್ಯಾಬ್​ ಚಾಲಕ ದೀಪಕ್​ ನೀಡಿದ ಮಾಹಿತಿಯ ಪ್ರಕಾರ ಈ ಮಹಿಳೆಯನ್ನು ಜ್ಯೋತಿ ಎಂದು ಗುರುತಿಸಲಾಗಿದೆ. ರಾತ್ರಿ 9ರಸುಮಾರಿಗೆ ಮೇದಾಂತ ಆಸ್ಪತ್ರೆಯ ಬಳಿ ಈಕೆ ಓಲಾ ಆ್ಯಪ್​ ಮೂಲಕ ಕ್ಯಾಬ್​ ಬುಕ್ ಮಾಡಿದ್ದಾಳೆ. ಮರುದಿನ 9ಗಂಟೆಯತನಕ ಗುರುಗ್ರಾಮ್​ನ ವಿವಿಧ ಜಾಗಗಳಿಗೆ ಪ್ರಯಾಣಿಸಿದ್ದಾಳೆ. ನಂತರ ರೂ. 2000 ಕ್ಯಾಬ್​ ಶುಲ್ಕ ಭರಿಸಲು ಚಾಲಕ ಕೇಳಿಕೊಂಡಾಗ ಆತನನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ಧಾಳೆ.

ಇದನ್ನೂ ಓದಿ : Viral: ಮುಂಬೈ: ಮರಾಠಿ ಧಾರಾವಾಹಿ ಸೆಟ್​ನಲ್ಲಿ ಕಾಣಿಸಿಕೊಂಡ ಮರಿಚಿರತೆ

ಕ್ಯಾಬ್​ ಚಾಲಕ ದೀಪಕ್​, ‘ಆಕೆ ನಿಖರವಾಗಿ ತಾನು ಯಾವ ಸ್ಥಳಕ್ಕೆ ಹೋಗಬೇಕು ಎನ್ನುವುದನ್ನು ತಿಳಿಸದೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸೂಚಿನೆ ನೀಡುತ್ತಿದ್ದಳು. ನನಗೆ ಸಾಕಾಗಿ ಟ್ರಿಪ್​ ಮುಗಿಸುವಂತೆ ಆಕೆಗೆ ಕೇಳಿಕೊಂಡೆ. ಅಲ್ಲದೆ, ರೂ. 2,000 ಪ್ರಯಾಣ ಶುಲ್ಕವನ್ನೂ ಭರಿಸುವಂತೆ ಹೇಳಿದೆ. ಯುಪಿಐ ಮೂಲಕ ಭರಿಸುವುದಾಗಿ ಹೇಳುತ್ತಿದ್ದಳೇ ವಿನಾ 2 ಗಂಟೆ ಸಮಯ ಕಳೆದರೂ ನನ್ನ ಅಕೌಂಟ್​​ಗೆ ಹಣ ಬರಲಿಲ್ಲ. ಮತ್ತೆ ಮತ್ತೆ ಹಣ ಕೇಳಿದ್ದಕ್ಕೆ ನನ್ನ ಮೇಲೆಯೇ ಸುಳ್ಳು ಕೇಸ್​ ಹಾಕಿ ಸಿಲುಕಿಸುತ್ತೇನೆ ಎಂದು ಬೆದರಿಸಿದಳು’ ಎಂದಿದ್ದಾನೆ.

ಇದನ್ನೂ ಓದಿ : Viral Video: ಕೈಲಾಸ ಪರ್ವತದಲ್ಲಿ ಶಿವ; ಈಕೆ ಪಾರ್ವತಿಯ ಅವತಾರ, ಗಾಢನಿದ್ರೆಯಿಂದ ನಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ

ಪತ್ರಕರ್ತೆ ದೀಪಿಕಾ ನಾರಾಯಣ ಭಾರದ್ವಾಜ ಈ ಪ್ರಕರಣವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಳ್ಳಲು ಶುರು ಮಾಡುತ್ತಿದ್ದಂತೆ ಅವರೊಂದಿಗೂ ಜ್ಯೋತಿ ಜಗಳಕ್ಕೆ ಇಳಿದಿದ್ಧಾಳೆ. ರಸ್ತೆಯಲ್ಲಿ ಜಗಳ ತಾರಕಕ್ಕೆ ಏರುತ್ತಿದ್ದಂತೆ ಗುರುಗ್ರಾಮ್​ ಪೊಲೀಸರ ತಂಡವು ಮಧ್ಯಪ್ರವೇಶಿಸಿ, ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:41 pm, Thu, 27 July 23

ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ