AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಒಂದೊಳ್ಳೆಯ ಹಾಡಿಗೆ ರೀಲ್ಸ್ ಮಾಡಬೇಕಾ? ಇಲ್ಲಿದೆ ನೋಡಿ ವೈರಲ್ ಸಾಂಗ್

ರೀಲ್ಸ್​ನಲ್ಲಿ ಹಳೆಯ ಸಾಂಗ್​ಗಳು, ದೇಶ ವಿದೇಶದ ಹಾಡುಗಳು ವೈರಲ್ ಆಗುತ್ತವೆ. ಅದಕ್ಕೆ ಕಾರಣ ಬೇಕಿರುವುದಿಲ್ಲ. ಹಾಡಿನ ಮ್ಯೂಸಿಕ್ ಚೆನ್ನಾಗಿದ್ದರೆ ಅಷ್ಟೇ ಸಾಕಾಗುತ್ತದೆ. ಇದಕ್ಕೆ ಹೊಸ ಉದಾಹರಣೆ ‘ಬಾದಲ್ ಬರ್ಸಾ ಬೀಜುಲಿ..’ ಹಾಡು.

ಮಳೆಗಾಲದಲ್ಲಿ ಒಂದೊಳ್ಳೆಯ ಹಾಡಿಗೆ ರೀಲ್ಸ್ ಮಾಡಬೇಕಾ? ಇಲ್ಲಿದೆ ನೋಡಿ ವೈರಲ್ ಸಾಂಗ್
ವೈರಲ್ ಸಾಂಗ್
ರಾಜೇಶ್ ದುಗ್ಗುಮನೆ
|

Updated on:Jul 27, 2023 | 1:09 PM

Share

ಇತ್ತೀಚೆಗೆ ಇನ್​ಸ್ಟಾಗ್ರಾಮ್ ರೀಲ್ಸ್ ಸಖತ್ ಟ್ರೆಂಡಿಂಗ್​ನಲ್ಲಿದೆ. ಪ್ರವಾಸಿ ಸ್ಥಳಕ್ಕೆ ತೆರಳಿದರೆ ಸಾಕು ಅನೇಕರು ರೀಲ್ಸ್ ಮಾಡೋಕೆ ಆರಂಭಿಸುತ್ತಾರೆ. ಈಗ ಮಳೆಗಾಲ ಆರಂಭ ಆಗಿದೆ. ಹೊರಗೆ ಸುರಿವ ಮಳೆಗೆ ಡ್ಯಾನ್ಸ್ ಮಾಡಿ ರೀಲ್ಸ್ ಮಾಡಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ಆದರೆ ಒಳ್ಳೆಯ ಸಾಂಗ್ ಸಿಕ್ಕಿರುವುದಿಲ್ಲ. ಹಾಗಾದರೆ, ನಾವು ಆ ರೀತಿಯ ಒಂದು ಹಾಡಿನ ಬಗ್ಗೆ ವಿವರಿಸುತ್ತಿದ್ದೇವೆ. ಇದು ನೇಪಾಳಿ (Nepali) ಭಾಷೆಯ ಹಾಡು. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಯಾವುದು ಆ ಹಾಡು? ‘ಬಾದಲ್ ಬರ್ಸಾ ಬೀಜುಲಿ..’ (Badal Barsa Bijuli).

ರೀಲ್ಸ್​ನಲ್ಲಿ ಹಳೆಯ ಸಾಂಗ್​ಗಳು, ದೇಶ ವಿದೇಶದ ಹಾಡುಗಳು ವೈರಲ್ ಆಗುತ್ತವೆ. ಅದಕ್ಕೆ ಕಾರಣ ಬೇಕಿರುವುದಿಲ್ಲ. ಹಾಡಿನ ಮ್ಯೂಸಿಕ್ ಚೆನ್ನಾಗಿದ್ದರೆ ಅಷ್ಟೇ ಸಾಕಾಗುತ್ತದೆ. ಇದಕ್ಕೆ ಹೊಸ ಉದಾಹರಣೆ ‘ಬಾದಲ್ ಬರ್ಸಾ ಬೀಜುಲಿ..’ ಹಾಡು. ಇದು ನೇಪಾಳಿ ಸಿನಿಮಾ ‘ಕರ್ತಬ್ಯ’ ಸಿನಿಮಾದ ಹಾಡು. ಈ ಸಿನಿಮಾ ತೆರೆಗೆ ಬಂದಿದ್ದು 2004ರಲ್ಲಿ ಅನ್ನೋದು ವಿಶೇಷ. ಇದರ ಕವರ್ ವರ್ಷನ್​ನ ಆನಂದ ಕರ್ಕಿ ಹಾಗೂ ಪ್ರಶ್ನಾ ಶಕ್ಯ ಹಾಡಿದ್ದಾರೆ.

‘ಬಾದಲ್ ಬರ್ಸಾ ಬೀಜುಲಿ..’ ಮಾನ್ಸೂನ್ ಬಗ್ಗೆ ಇರುವ ಸಾಂಗ್. ಪೂರ್ತಿ ಹಾಡು ಮುಂಗಾರು ಮಳೆ, ತಂಪಾದ ವಾತಾವರಣದ ಬಗ್ಗೆಯೇ ಇದೆ. ಈ ಕಾರಣದಿಂದಲೇ ಮಳೆಗಾಲದಲ್ಲಿ ಈ ಹಾಡು ವೈರಲ್ ಆಗುತ್ತಿದೆ. ಆದರೆ, ಬಹುತೇಕರಿಗೆ ಇದು ನೇಪಾಳಿ ಸಿನಿಮಾದ ಹಾಡು ಎಂಬ ವಿಚಾರ ಗೊತ್ತಿಲ್ಲ.

ಇದನ್ನೂ ಓದಿ: ಹೊರಬಿತ್ತು ‘ಸೀತಾ ರಾಮ’ ಟಿಆರ್​ಪಿ; ಟಾಪ್​ 10ರಲ್ಲಿ ಈ ಧಾರಾವಾಹಿಗೆ ಎಷ್ಟನೇ ಸ್ಥಾನ?

ಕನ್ನಡದ ಕಿರುತೆರೆ ನಟಿಯರು ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ನಟಿ ಸಾರಾ ಅಣ್ಣಯ್ಯ ಮೊದಲಾದವರು ಈ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ಈ ರೀಲ್ಸ್​ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಾಡಿಗೆ ನೀವು ಕೂಡ ಡ್ಯಾನ್ಸ್ ಮಾಡಬಹುದು.

(ವಿ.ಸೂ: ರೀಲ್ಸ್ ಮಾಡುವಾಗ ಎಚ್ಚರಿಕೆಯಿಂದ ಇರಿ. ಇದರಿಂದ ಪ್ರಾಣಕ್ಕೆ ತೊಂದರೆ ಆಗಬಹುದು. ಅಪಾಯ ಸ್ಥಳಗಳಲ್ಲಿ ರೀಲ್ಸ್ ಮಾಡುವುದನ್ನು ಟಿವಿ9 ಪ್ರೋತ್ಸಾಹಿಸುವುದಿಲ್ಲ.)

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:07 pm, Thu, 27 July 23

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ