AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೈಲಾಸ ಪರ್ವತದಲ್ಲಿ ಶಿವ; ‘ಈಕೆ ಪಾರ್ವತಿಯ ಅವತಾರ, ಗಾಢನಿದ್ರೆಯಿಂದ ನಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ’

India : 'ದೇಶದ ಭವಿಷ್ಯ ಉಜ್ವಲವಾಗಿದೆ! ಈ ಉಪನ್ಯಾಸದ ಹಕ್ಕುಗಳನ್ನು NASA ಉಪಗ್ರಹದಿಂದ ಪ್ರಮಾಣೀಕರಿಸಲಾಗಿದೆ. ನೆಹರೂ ಭಾರತವನ್ನು ಮುನ್ನಡೆಸಿದರು, ಮೋದಿ ಮತ್ತೆ ಕತ್ತಲೆಯೆಡೆ ಕೊಂಡೊಯ್ಯುತ್ತಿದ್ದಾರೆ' ಎಂದೆನ್ನುತ್ತಿದ್ದಾರೆ ನೆಟ್ಟಿಗರು.

Viral Video: ಕೈಲಾಸ ಪರ್ವತದಲ್ಲಿ ಶಿವ; 'ಈಕೆ ಪಾರ್ವತಿಯ ಅವತಾರ, ಗಾಢನಿದ್ರೆಯಿಂದ ನಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ'
ಕೈಲಾಸ ಪರ್ವತದ ಮೇಲೆ ಶಿವನ ವದನ ಮೂಡಿರುವುದು!?
ಶ್ರೀದೇವಿ ಕಳಸದ
|

Updated on: Jul 27, 2023 | 12:45 PM

Share

Kailash Parvat: ‘ಕಳೆದ 21,000 ವರ್ಷಗಳಿಂದ ಕೈಲಾಸ ಪರ್ವತದಲ್ಲಿ ಶಿವನು ಪಾರ್ವತಿಯೊಂದಿಗೆ ಧ್ಯಾನಮಗ್ನನಾಗಿದ್ದಾನೆ. 2016ರಲ್ಲಿ ನಾಸಾ ಉಪಗ್ರಹದ (Nasa) ಮೂಲಕ ಆ ಪರ್ವತದ ಫೋಟೋ ತೆಗೆದಾಗ ಶಿವನ ಮುಖಮುದ್ರೆಯು ಮೂಡಿಬಂದಿದೆ. ಇಡೀ ಜಗತ್ತಿನ ಅಧ್ಯಾತ್ಮ ಕೇಂದ್ರವೆನ್ನಿಸಿರುವ ಈ ಪರ್ವತದಿಂದ ಉತ್ತರ ಧೃವವು 6,666 ಕಿ.ಮೀ ದೂರದಲ್ಲಿದೆ. ಅಂದರೆ ಇದು ದಕ್ಷಿಣ ಧೃವದಿಂದ ಎರಡು ಪಟ್ಟು, 13, 332 ಕಿ.ಮೀ. ದೂರದಲ್ಲಿದೆ. ಈ ಪರ್ವತದಲ್ಲಿ ಅಧ್ಯಾತ್ಮಿಕ ಸಾಕ್ಷಾತ್ಕಾರವಾಗುವ ಜಾಗವನ್ನು ಮುಂಡಿ ಎನ್ನುತ್ತಾರೆ. ರಾಮಾಯಣದಲ್ಲಿಯೂ ಈ ಜಾಗದ ಬಗ್ಗೆ ಇದೇ ರೀತಿ ಅತ್ಯಂತ ನಿಖರವಾಗಿ ಉಲ್ಲೇಖಿಸಲಾಗಿದೆ.’ ಹೀಗೆಂದು ಈ ವಿಡಿಯೋದಲ್ಲಿರುವ ಯುವತಿ ಪಾಠ ಒಪ್ಪಿಸುತ್ತಿದ್ದಾರೆ. ನೆಟ್ಟಿಗರ ಕಥೆ ಕೇಳಬೇಕೆ!?

NASA satellite confirms Shiv ji and Parvati meditating on mount Kailash pic.twitter.com/1l5PLCNmRg

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋದಲ್ಲಿರುವ ಬುದ್ಧಿವಂತೆ ನಾನಲ್ಲ, ಈಕೆಯ ಪುರಾಣ ವಿಜ್ಞಾನವನ್ನು ನಾನು ಬೆಂಬಲಿಸುವುದಿಲ್ಲ ಎಂದಿದ್ದಾರೆ ಒಬ್ಬರು. ಅಬ್ಬಾ ಇಂಥ ಸುಂದರವಾದ ಮೀಮ್​ ಈತನಕ ನೋಡಿರಲೇ ಇಲ್ಲ ಎಂದಿದ್ದಾರೆ ಇನ್ನೊಬ್ಬರು. ಹಿಂದೂ ದೇವತೆಗಳು ಧ್ಯಾನಕ್ಕೆ ಕುಳಿತಿರುವುದನ್ನು ಸಾಬೀತುಗೊಳಿಸುವ ದಿಕ್ಕಿನಲ್ಲಿ ನಾಸಾ ಗಂಭೀರವಾಗಿ ತೊಡಗಿಕೊಂಡಿದೆ. ಮುಂದಿನ ದಿನಗಳಲ್ಲಿ ಉತ್ತರ ಧೃವದಲ್ಲಿ ಸಾಂತಾಕ್ಲಾಸ್ ಸಾಕ್ಷಾತ್ಕಾರಗೊಳ್ಳುತ್ತಾನೆ ಎಂಬುದನ್ನು ನಾಸಾ ದೃಢೀಕರಿಸಲೂಬಹುದು. ನೋಡೋಣ ನನ್ನ ಈ ಊಹೆ ನಿಜವಾಗುವುದೋ ಏನೋ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ‘ಮಾಂಸಾಹಾರ ಸಸ್ಯಾಹಾರಕ್ಕೆ ಒಂದೇ ಚಮಚ ಬಳಸಿದ್ದರೆ!’ ಸುಧಾ ಮೂರ್ತಿಯ ಮೇಲೆ ಮತ್ತೆ ಮುಗಿಬಿದ್ದ ನೆಟ್ಟಿಗರು

ಇತ್ತೀಚಿನ ದಿನಮಾನಗಳಲ್ಲಿ ಇಂಗ್ಲಿಷ್​ನಲ್ಲಿ ಏನನ್ನಾದರೂ ಹೇಳಿದರೆ ಭಾರತೀಯರು ಅದನ್ನು ಹೆಚ್ಚು ನಂಬುತ್ತಾರೆ ಎನ್ನುವುದು ಇಂಥವರಿಗೆ ತಿಳಿದಿದೆ ಎಂದಿದ್ದಾರೆ ಒಬ್ಬರು. ಹೌದು, ಇದು ಆಲ್ಬರ್ಟ್​ ಐನ್​ಸ್ಟಿನ್​​​ನ ಪುನರ್ಜನ್ಮ ಎಂದು ನನ್ನ ಟೋಸ್ಟರ್​ ದೃಢಪಡಿಸಿದೆ ಹಾಗಾಗಿ ಸತ್ಯಸಂಗತಿಗಳನ್ನು ಇವರಿಂದ ನೇರವಾಗಿ ಪಡೆಯಿರಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ನಿಮಗೆ ಬಾಯ್​ಫ್ರೆಂಡ್​ ಇದ್ದಾರಾ? ಡೆಲಿವರಿ ಏಜೆಂಟ್ ಗ್ರಾಹಕಿಯನ್ನು ಕೇಳಿದಾಗ

ಮೇಡಮ್​, ಈ ವಿಷಯದ ಬಗ್ಗೆ ನಿಖರತೆ ಮತ್ತು ಆತ್ಮವಿಶ್ವಾಸವನ್ನು ಹೊಂದಿಲ್ಲ. ಹಾಗಾಗಿ ನಾಸಾದ ಹೆಸರನ್ನು ಬಳಸಿಕೊಂಡು ವಿಶ್ವಾಸಾರ್ಹತೆ ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ನಿಮಗಿನ್ನೂ ಅರ್ಥವಾಗಿಲ್ಲವೆ? ಎಂದು ಕೇಳಿದ್ದಾರೆ ಒಬ್ಬರು. ಗಣಿತ ವೆಕೇಷನ್​ಗೆ ಹೋಗಿದೆಯೇ? ಎಂದು ಮಗದೊಬ್ಬರು ಕೇಳಿದ್ದಾರೆ. ಏನೇ ಆಗಲಿ ಇಂಗ್ಲಿಷ್​ನಲ್ಲಿ ಹೇಳುತ್ತಿದ್ದಾರೆಂದ ಮೇಲೆ ಇದು ನಿಜಕ್ಕೂ ಸತ್ಯವೇ! ಎಂದು ಮಗದೊಬ್ಬರು ಕಾಲೆಳೆದಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!