AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್

ಇಸ್ರೆಲ್​ ಬಗ್ಗೆ ಆ್ಯಂಕರ್​ ಸುದ್ದಿ ಓದುತ್ತಿರುತ್ತಾರೆ. ನ್ಯೂಸ್​ ರೂಮ್​ನ ವಿಶಾಲ ನೋಟವನ್ನು ಸೆರೆ ಹಿಡಿಯಲು ಕ್ಯಾಮರಾವನ್ನು ಪ್ಯಾನ್​ ಮಾಡಲಾಗುತ್ತದೆ. ಈ ವೇಳೆ ಆ್ಯಂಕರ್​ ಶಾರ್ಟ್ಸ್​ ಧರಿಸಿ ಕುಳಿತಿರುವ ದೃಶ್ಯ ಸೆರೆಯಾಗಿದೆ.

Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್
ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್
TV9 Web
| Edited By: |

Updated on: Jun 07, 2021 | 11:06 AM

Share

ಬೇಸಿಗೆಯ ತಿಂಗಳಿನಲ್ಲಿ ತಾಳಲಾರದಷ್ಟು ಸೆಕೆ. ಫ್ಯಾನ್​​ ಗಾಳಿ ಎಷ್ಟು ಜೋರಾಗಿದ್ದರೂ ಗಾಳಿ ಮಾತ್ರ ತಾಗುವುದೇ ಇಲ್ಲ. ಇಂತಹ ಘೋರಾಕಾರದ ಸೆಕೆಯಲ್ಲಿ ಬಿಬಿಸಿ ನ್ಯೂಸ್​ ಆ್ಯಂಕರ್​ ಓರ್ವರು ಕ್ಯಾಮರಾಕ್ಕೆ ಕಾಣುವಷ್ಟು ಕೋಟ್​ ಶರ್ಟ್​ಅನ್ನು ಶಿಸ್ತಾಗಿ ಧರಿಸಿ. ಸೊಂಟದ ಕೆಳಗೆ ಶಾರ್ಟ್​ ಧರಿಸಿ ಕುಳಿತಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಗಮನಿಸುವಂತೆ ಅವರ ಎದುರಿಗೆ ದೊಡ್ಡದಾದ ಮೇಜನ್ನು ಇರಿಸಲಾಗಿದೆ. ಬಿಳಿ ಬಣ್ಣದ ಶರ್ಟ್​ ಹಾಗೂ ಕಪ್ಪು ಬಣ್ಣದ ಕೋಟ್​ ಧರಿಸಿ ಆ್ಯಂಕರ್​ ಕುಳಿತಿದ್ದಾರೆ. ಆದರೂ ಸಹ ಕ್ಯಾಮದಲ್ಲಿ ಅವರು ಶಾರ್ಟ್​ ಧರಿಸಿರುವ ದೃಶ್ಯ ಸೆರೆಯಾಗಿದೆ. ಇಸ್ರೆಲ್​ ಬಗ್ಗೆ ಆ್ಯಂಕರ್​ ಸುದ್ದಿ ಓದುತ್ತಿರುತ್ತಾರೆ. ನ್ಯೂಸ್​ ರೂಮ್​ನ ವಿಶಾಲ ನೋಟವನ್ನು ಸೆರೆ ಹಿಡಿಯಲು ಕ್ಯಾಮರಾವನ್ನು ಪ್ಯಾನ್​ ಮಾಡಲಾಗುತ್ತದೆ. ಈ ವೇಳೆ ಆ್ಯಂಕರ್​ ಶಾರ್ಟ್ಸ್​ ಧರಿಸಿ ಕುಳಿತಿರುವ ದೃಶ್ಯ ಸೆರೆಯಾಗಿದೆ.

ಆನ್​ಲೈನ್​ನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ವಿಡಿಯೋ ವೈರಲ್​ ಆಗಿದೆ. ಕೆಲವರು ನಗುವ ಇಮೋಜಿಗಳನ್ನು ಕಳುಹಿಸಿ ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ಬೇಸಿಗಾಲವಾದ್ದರಿಂದ ಆ್ಯಂಕರ್​ ಹೀಗೆ ಮಾಡಿದ್ದಾರೆ ಎಂದು ಅವರ ಪರ ನಿಂತಿದ್ದಾರೆ. ‘ಇದು ಜೂಮ್​ ಮೀಟಿಂಗ್​ ಅಲ್ಲ! ಬಿಬಿಸಿ ನ್ಯೂಸ್​ ಆ್ಯಂಕರ್​ಗೆ ಹೇಳಲು ಯಾರಾದರೂ ಮರೆತಿದ್ದೀರಾ?’ ಎಂದು ಇನ್ನೋರ್ವರು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ‘ಸುದೀರ್ಘವಾದ ವಿಷಯವನ್ನು ಹೇಳಲು ಹೊರಟಾಗ ಅವರು ಏನು ಧರಿಸಿದ್ದಾರೆ ಎಂಬುದು ಮುಖ್ಯವಲ್ಲ’ ಎಂಬ ಅನಿಸಿಕೆಗಳೂ ಕೇಳಿಬಂದಿವೆ.

ಇದನ್ನೂ ಓದಿ:

Viral Video: ಅಪಹರಿಸಲು ಬಂದ ಕಿಡ್ನಾಪರ್​ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ​ 11 ವರ್ಷದ ಬಾಲಕಿ!

Viral Video: ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಡಿದ ಹುಡುಗಿ; ನೆಟ್ಟಿಗರಿಂದ ಅಚ್ಚರಿಯ ರಿಯಾಕ್ಷನ್!

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್