AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗುತ್ತಿರುವ ಖುಷಿಗೆ ಸ್ನೇಹಿತರ ಜತೆ ಸೇರಿ ಕಂಠಪೂರ್ತಿ ಕುಡಿದ ವರ; ಈ ಸಂಬಂಧವೇ ಬೇಡ ಎಂದು ವಿವಾಹ ನಿಲ್ಲಿಸಿದ ವಧು

Viral News: ಮದ್ಯದ ಅಮಲು ತಲೆಗೇರಿದ್ದ ಕಾರಣ ಸಮಾರಂಭದ ಆರಂಭದಿಂದಲೂ ವರ ಕಿರಿಕಿರಿ ಮಾಡಿದ್ದಾನೆ. ಆದರೆ, ಯುವತಿ ಅದೆಲ್ಲವನ್ನೂ ಕೆಲ ಹೊತ್ತು ಸಹಿಸಿಕೊಂಡಿದ್ದಳು. ಅಷ್ಟಾದ ನಂತರವೂ ಎಲ್ಲರೆದುರು ಕುಣಿಯಬೇಕೆಂದು ವರ ಪಟ್ಟು ಹಿಡಿದಾಗ ಆಕೆ ಸಾಧ್ಯವೇ ಇಲ್ಲವೆಂದು ನಿರಾಕರಿಸಿದ್ದಾಳೆ.

ಮದುವೆ ಆಗುತ್ತಿರುವ ಖುಷಿಗೆ ಸ್ನೇಹಿತರ ಜತೆ ಸೇರಿ ಕಂಠಪೂರ್ತಿ ಕುಡಿದ ವರ; ಈ ಸಂಬಂಧವೇ ಬೇಡ ಎಂದು ವಿವಾಹ ನಿಲ್ಲಿಸಿದ ವಧು
ಪ್ರಾತಿನಿಧಿಕ
TV9 Web
| Updated By: Digi Tech Desk|

Updated on:Jun 07, 2021 | 12:33 PM

Share

ಲಕ್ನೋ: ಮದುವೆಯ ಸಂಭ್ರಮದಲ್ಲಿ ಮೈಮರೆತ ವರ ತನ್ನ ಸ್ನೇಹಿತರ ಜತೆ ಸೇರಿ ಮದ್ಯಪಾನ ಮಾಡಿದ ಪರಿಣಾಮ ಆತನ ವಿವಾಹವೇ ರದ್ದಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ವಿವಾಹ ಸಮಾರಂಭದ ಸಂದರ್ಭದಲ್ಲಿ ವರ ಕಂಠಪೂರ್ತಿ ಕುಡಿದಿದ್ದನ್ನು ಕಂಡ ಯುವತಿ ತನಗೆ ಈ ಮದುವೆಯೇ ಬೇಡವೆಂದು ನಿರಾಕರಿಸಿದ್ದು, ಸಕಲ ಸಂಧಾನ ಪ್ರಯತ್ನಗಳ ನಂತರವೂ ಮನವೊಲಿಸುವುದು ಸಾಧ್ಯವಾಗದಿದ್ದಾಗ ಅಂತಿಮವಾಗಿ ವಿವಾಹವನ್ನೇ ರದ್ದುಪಡಿಸಲಾಗಿದೆ.

ಪ್ರಯಾಗ್​ರಾಜ್​ನ ಪ್ರತಾಪ್​ಘರ್​ ಬಳಿಯ ಟಿಕ್ರಿ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಗೆ ಬೇಸರವಾಗಿ ವಿವಾಹ ನಿಂತುಹೋದ ಕಾರಣ ಎರಡೂ ಕುಟುಂಬಗಳ ಮಧ್ಯೆ ಒಂದಷ್ಟು ಗೊಂದಲಗಳು ಮೂಡಿ ಮನಸ್ತಾಪಕ್ಕೆ ಕಾರಣವಾಗಿದೆ. ವರ ಮತ್ತು ಆತನ ಸ್ನೇಹಿತರು ಮದ್ಯದ ಅಮಲಿನೊಂದಿಗೆ ತೋರಿದ ವರ್ತನೆಯೇ ಯುವತಿ ವಿವಾಹದ ದಿನ ಈ ನಿರ್ಧಾರಕ್ಕೆ ಬರಲು ಕಾರಣ ಹೀಗಾಗಿ ವರನ ಕುಟುಂಬಸ್ಥರು ಆ ಮೊದಲು ಪಡೆದಿದ್ದ ಉಡುಗೊರೆ ಹಾಗೂ ಇನ್ನಿತರ ವಸ್ತುಗಳನ್ನು ಹಿಂತಿರುಗಿಸಬೇಕೆಂದು ಯುವತಿಯ ಮನೆಯವರು ಪಟ್ಟುಹಿಡಿದಿದ್ದಾರೆ.

22 ವರ್ಷದ ಯುವತಿಯ ತಂದೆ ಟಿಕ್ರಿ ಗ್ರಾಮದಲ್ಲಿ ವ್ಯವಸಾಯ ನೋಡಿಕೊಳ್ಳುತ್ತಿದ್ದು, ಮಗಳ ಮದುವೆಯನ್ನು ಚೆನ್ನಾಗಿ ಮಾಡಕೊಡಬೇಕೆಂದು ನಿರ್ಧರಿಸಿದ್ದರು. ಆದರೆ, ವರ ಮತ್ತು ಆತನ ಸ್ನೇಹಿತರು ಮದ್ಯಪಾನ ಮಾಡಿಕೊಂಡು ಬಂದ ಸಂಗತಿ ಅರಿವಿಗೆ ಬರುತ್ತಿದ್ದಂತೆಯೇ ಪರಿಸ್ಥಿತಿ ಬದಲಾಗತೊಡಗಿದೆ. ಮೊದಮೊದಲು ವಧುವಿನ ಕಡೆಯವರು ಮದುಮಗ ಹಾಗೂ ಆತನ ಸ್ನೇಹಿತರ ವರ್ತನೆಯನ್ನು ಕಡೆಗಣಿಸಲೆತ್ನಿಸಿದರಾದರೂ ಕೊನೆಗೆ ಅದು ಮಿತಿಮೀರುತ್ತಿದೆ ಎಂದಾದಾಗ ಯುವತಿಯೇ ಧ್ವನಿ ಎತ್ತಿದ್ದಾಳೆ.

ಮದ್ಯದ ಅಮಲು ತಲೆಗೇರಿದ್ದ ಕಾರಣ ಸಮಾರಂಭದ ಆರಂಭದಿಂದಲೂ ವರ ಕಿರಿಕಿರಿ ಮಾಡಿದ್ದಾನೆ. ಆದರೆ, ಯುವತಿ ಅದೆಲ್ಲವನ್ನೂ ಕೆಲ ಹೊತ್ತು ಸಹಿಸಿಕೊಂಡಿದ್ದಳು. ಅಷ್ಟಾದ ನಂತರವೂ ಎಲ್ಲರೆದುರು ಕುಣಿಯಬೇಕೆಂದು ವರ ಪಟ್ಟು ಹಿಡಿದಾಗ ಆಕೆ ಸಾಧ್ಯವೇ ಇಲ್ಲವೆಂದು ನಿರಾಕರಿಸಿದ್ದಾಳೆ. ತನನ್ನು ಮದುವೆಯಾಗುತ್ತಿರುವವಳು ಮಾತು ಕೇಳುತ್ತಿಲ್ಲವೆಂದು ಅಸಮಾಧಾನಗೊಂಡ ವರ ಸ್ಥಳದಲ್ಲೇ ಗಲಾಟೆ ಶುರು ಮಾಡಿದ್ದಾನೆ. ಆತನ ವರ್ತನೆಯಿಂದ ಬೇಸತ್ತ ಯುವತಿ ಈ ಮದುವೆಯೇ ಬೇಡವೆಂದು ತಿರಸ್ಕರಿಸಿ ಸಂಬಂಧ ಕಡಿದುಕೊಂಡಿದ್ದಾಳೆ.

ಘಟನೆಯ ಸಂಬಂಧ ಸ್ಥಳೀಯ ಪೊಲೀಸರನ್ನು ಕರೆಯಿಸಿ ರಾಜಿ ಸಂಧಾನ ಮಾಡಲು ಪ್ರಯತ್ನಿಸಿದರೂ ಯುವತಿ ಪಟ್ಟು ಸಡಿಲಿಸಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಎರಡೂ ಕುಟುಂಬದವರು ವಿವಾಹ ರದ್ದುಪಡಿಸಲು ಸಮ್ಮತಿಸಿದ್ದು, ಯುವತಿಯ ಪೋಷಕರಿಗೆ ವರನ ಕಡೆಯವರು ತಾವು ಪಡೆದಿದ್ದನ್ನೆಲ್ಲಾ ಹಿಂತಿರುಗಿಸಿದ ನಂತರ ವಿವಾದ ಬಗೆಹರಿದಿದೆ.

ಇದನ್ನೂ ಓದಿ: ಮದುವೆಗಳನ್ನು ಬ್ಯಾನ್ ಮಾಡದಿದ್ದರೆ ಗರ್ಲ್​ಫ್ರೆಂಡ್​ ವಿವಾಹ ಬೇರೆಯವನೊಂದಿಗೆ ಆಗುತ್ತದೆ: ನೀತಿಷ್ ಕುಮಾರ್​ಗೆ ಪ್ರಿಯಕರನ ಮೊರೆ! 

ಮಹಿಳೆಯನ್ನು ವಂಚಿಸಿದ ಆರೋಪ ಹೊತ್ತಿರುವ ಪಾಕ್ ಕ್ರಿಕೆಟಿಗನಿಗೆ ಮದುವೆ; ಸೋದರ ಸಂಬಂಧಿ ಜತೆ ವಿವಾಹ

Published On - 11:38 am, Mon, 7 June 21

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ