AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗುತ್ತಿರುವ ಖುಷಿಗೆ ಸ್ನೇಹಿತರ ಜತೆ ಸೇರಿ ಕಂಠಪೂರ್ತಿ ಕುಡಿದ ವರ; ಈ ಸಂಬಂಧವೇ ಬೇಡ ಎಂದು ವಿವಾಹ ನಿಲ್ಲಿಸಿದ ವಧು

Viral News: ಮದ್ಯದ ಅಮಲು ತಲೆಗೇರಿದ್ದ ಕಾರಣ ಸಮಾರಂಭದ ಆರಂಭದಿಂದಲೂ ವರ ಕಿರಿಕಿರಿ ಮಾಡಿದ್ದಾನೆ. ಆದರೆ, ಯುವತಿ ಅದೆಲ್ಲವನ್ನೂ ಕೆಲ ಹೊತ್ತು ಸಹಿಸಿಕೊಂಡಿದ್ದಳು. ಅಷ್ಟಾದ ನಂತರವೂ ಎಲ್ಲರೆದುರು ಕುಣಿಯಬೇಕೆಂದು ವರ ಪಟ್ಟು ಹಿಡಿದಾಗ ಆಕೆ ಸಾಧ್ಯವೇ ಇಲ್ಲವೆಂದು ನಿರಾಕರಿಸಿದ್ದಾಳೆ.

ಮದುವೆ ಆಗುತ್ತಿರುವ ಖುಷಿಗೆ ಸ್ನೇಹಿತರ ಜತೆ ಸೇರಿ ಕಂಠಪೂರ್ತಿ ಕುಡಿದ ವರ; ಈ ಸಂಬಂಧವೇ ಬೇಡ ಎಂದು ವಿವಾಹ ನಿಲ್ಲಿಸಿದ ವಧು
ಪ್ರಾತಿನಿಧಿಕ
TV9 Web
| Edited By: |

Updated on:Jun 07, 2021 | 12:33 PM

Share

ಲಕ್ನೋ: ಮದುವೆಯ ಸಂಭ್ರಮದಲ್ಲಿ ಮೈಮರೆತ ವರ ತನ್ನ ಸ್ನೇಹಿತರ ಜತೆ ಸೇರಿ ಮದ್ಯಪಾನ ಮಾಡಿದ ಪರಿಣಾಮ ಆತನ ವಿವಾಹವೇ ರದ್ದಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ವಿವಾಹ ಸಮಾರಂಭದ ಸಂದರ್ಭದಲ್ಲಿ ವರ ಕಂಠಪೂರ್ತಿ ಕುಡಿದಿದ್ದನ್ನು ಕಂಡ ಯುವತಿ ತನಗೆ ಈ ಮದುವೆಯೇ ಬೇಡವೆಂದು ನಿರಾಕರಿಸಿದ್ದು, ಸಕಲ ಸಂಧಾನ ಪ್ರಯತ್ನಗಳ ನಂತರವೂ ಮನವೊಲಿಸುವುದು ಸಾಧ್ಯವಾಗದಿದ್ದಾಗ ಅಂತಿಮವಾಗಿ ವಿವಾಹವನ್ನೇ ರದ್ದುಪಡಿಸಲಾಗಿದೆ.

ಪ್ರಯಾಗ್​ರಾಜ್​ನ ಪ್ರತಾಪ್​ಘರ್​ ಬಳಿಯ ಟಿಕ್ರಿ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಗೆ ಬೇಸರವಾಗಿ ವಿವಾಹ ನಿಂತುಹೋದ ಕಾರಣ ಎರಡೂ ಕುಟುಂಬಗಳ ಮಧ್ಯೆ ಒಂದಷ್ಟು ಗೊಂದಲಗಳು ಮೂಡಿ ಮನಸ್ತಾಪಕ್ಕೆ ಕಾರಣವಾಗಿದೆ. ವರ ಮತ್ತು ಆತನ ಸ್ನೇಹಿತರು ಮದ್ಯದ ಅಮಲಿನೊಂದಿಗೆ ತೋರಿದ ವರ್ತನೆಯೇ ಯುವತಿ ವಿವಾಹದ ದಿನ ಈ ನಿರ್ಧಾರಕ್ಕೆ ಬರಲು ಕಾರಣ ಹೀಗಾಗಿ ವರನ ಕುಟುಂಬಸ್ಥರು ಆ ಮೊದಲು ಪಡೆದಿದ್ದ ಉಡುಗೊರೆ ಹಾಗೂ ಇನ್ನಿತರ ವಸ್ತುಗಳನ್ನು ಹಿಂತಿರುಗಿಸಬೇಕೆಂದು ಯುವತಿಯ ಮನೆಯವರು ಪಟ್ಟುಹಿಡಿದಿದ್ದಾರೆ.

22 ವರ್ಷದ ಯುವತಿಯ ತಂದೆ ಟಿಕ್ರಿ ಗ್ರಾಮದಲ್ಲಿ ವ್ಯವಸಾಯ ನೋಡಿಕೊಳ್ಳುತ್ತಿದ್ದು, ಮಗಳ ಮದುವೆಯನ್ನು ಚೆನ್ನಾಗಿ ಮಾಡಕೊಡಬೇಕೆಂದು ನಿರ್ಧರಿಸಿದ್ದರು. ಆದರೆ, ವರ ಮತ್ತು ಆತನ ಸ್ನೇಹಿತರು ಮದ್ಯಪಾನ ಮಾಡಿಕೊಂಡು ಬಂದ ಸಂಗತಿ ಅರಿವಿಗೆ ಬರುತ್ತಿದ್ದಂತೆಯೇ ಪರಿಸ್ಥಿತಿ ಬದಲಾಗತೊಡಗಿದೆ. ಮೊದಮೊದಲು ವಧುವಿನ ಕಡೆಯವರು ಮದುಮಗ ಹಾಗೂ ಆತನ ಸ್ನೇಹಿತರ ವರ್ತನೆಯನ್ನು ಕಡೆಗಣಿಸಲೆತ್ನಿಸಿದರಾದರೂ ಕೊನೆಗೆ ಅದು ಮಿತಿಮೀರುತ್ತಿದೆ ಎಂದಾದಾಗ ಯುವತಿಯೇ ಧ್ವನಿ ಎತ್ತಿದ್ದಾಳೆ.

ಮದ್ಯದ ಅಮಲು ತಲೆಗೇರಿದ್ದ ಕಾರಣ ಸಮಾರಂಭದ ಆರಂಭದಿಂದಲೂ ವರ ಕಿರಿಕಿರಿ ಮಾಡಿದ್ದಾನೆ. ಆದರೆ, ಯುವತಿ ಅದೆಲ್ಲವನ್ನೂ ಕೆಲ ಹೊತ್ತು ಸಹಿಸಿಕೊಂಡಿದ್ದಳು. ಅಷ್ಟಾದ ನಂತರವೂ ಎಲ್ಲರೆದುರು ಕುಣಿಯಬೇಕೆಂದು ವರ ಪಟ್ಟು ಹಿಡಿದಾಗ ಆಕೆ ಸಾಧ್ಯವೇ ಇಲ್ಲವೆಂದು ನಿರಾಕರಿಸಿದ್ದಾಳೆ. ತನನ್ನು ಮದುವೆಯಾಗುತ್ತಿರುವವಳು ಮಾತು ಕೇಳುತ್ತಿಲ್ಲವೆಂದು ಅಸಮಾಧಾನಗೊಂಡ ವರ ಸ್ಥಳದಲ್ಲೇ ಗಲಾಟೆ ಶುರು ಮಾಡಿದ್ದಾನೆ. ಆತನ ವರ್ತನೆಯಿಂದ ಬೇಸತ್ತ ಯುವತಿ ಈ ಮದುವೆಯೇ ಬೇಡವೆಂದು ತಿರಸ್ಕರಿಸಿ ಸಂಬಂಧ ಕಡಿದುಕೊಂಡಿದ್ದಾಳೆ.

ಘಟನೆಯ ಸಂಬಂಧ ಸ್ಥಳೀಯ ಪೊಲೀಸರನ್ನು ಕರೆಯಿಸಿ ರಾಜಿ ಸಂಧಾನ ಮಾಡಲು ಪ್ರಯತ್ನಿಸಿದರೂ ಯುವತಿ ಪಟ್ಟು ಸಡಿಲಿಸಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಎರಡೂ ಕುಟುಂಬದವರು ವಿವಾಹ ರದ್ದುಪಡಿಸಲು ಸಮ್ಮತಿಸಿದ್ದು, ಯುವತಿಯ ಪೋಷಕರಿಗೆ ವರನ ಕಡೆಯವರು ತಾವು ಪಡೆದಿದ್ದನ್ನೆಲ್ಲಾ ಹಿಂತಿರುಗಿಸಿದ ನಂತರ ವಿವಾದ ಬಗೆಹರಿದಿದೆ.

ಇದನ್ನೂ ಓದಿ: ಮದುವೆಗಳನ್ನು ಬ್ಯಾನ್ ಮಾಡದಿದ್ದರೆ ಗರ್ಲ್​ಫ್ರೆಂಡ್​ ವಿವಾಹ ಬೇರೆಯವನೊಂದಿಗೆ ಆಗುತ್ತದೆ: ನೀತಿಷ್ ಕುಮಾರ್​ಗೆ ಪ್ರಿಯಕರನ ಮೊರೆ! 

ಮಹಿಳೆಯನ್ನು ವಂಚಿಸಿದ ಆರೋಪ ಹೊತ್ತಿರುವ ಪಾಕ್ ಕ್ರಿಕೆಟಿಗನಿಗೆ ಮದುವೆ; ಸೋದರ ಸಂಬಂಧಿ ಜತೆ ವಿವಾಹ

Published On - 11:38 am, Mon, 7 June 21

‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್