Viral Video: ಅಪಹರಿಸಲು ಬಂದ ಕಿಡ್ನಾಪರ್​ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ​ 11 ವರ್ಷದ ಬಾಲಕಿ!

30 ವರ್ಷದ ಜೇರೆಡ್​ ಪಾಲ್​ ಸ್ಟಂಗಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆಯೂ ಕೆಲವು ಅಪರಾಧಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಬಾಲಕಿಗೆ ಯಾವುದೇ ಗಂಭೀರವಾದ ಗಾಯವಾಗಿಲ್ಲ ಎಂಬುದು ತಿಳಿದು ಬಂದಿದೆ.

Viral Video: ಅಪಹರಿಸಲು ಬಂದ ಕಿಡ್ನಾಪರ್​ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ​ 11 ವರ್ಷದ ಬಾಲಕಿ!
ಬಾಲಕಿಯನ್ನು ಅಪಹರಿಸುತ್ತಿರುವ ದೃಶ್ಯ
Follow us
| Updated By: shruti hegde

Updated on: Jun 07, 2021 | 10:26 AM

ಅಮೆರಿಕದಲ್ಲಿ ಅಪಹರಿಸಲು ಯತ್ನಿಸುತ್ತಿದ್ದ ಕಿಡ್ನಾಪರ್​ ವಿರುದ್ಧ 11 ವರ್ಷದ ಬಾಲಕಿಯು ಹೋರಾಡುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ. ಇಂತಹ ಭಯಾನಕ ದೃಶ್ಯ ನೋಡಿನ ನೆಟ್ಟಿಗರು ಚಿಕ್ಕ ಬಾಲಕಿಯನ್ನು ಹಾಡಿ ಹೊಗಳಿದ್ದಾರೆ. ಬಾಲಕಿಗೆ ಆ ಸಮಯದಲ್ಲಿದ್ದ ಧೈರ್ಯವನ್ನು ಮೆಚ್ಚಲೇ ಬೇಕು ಎಂದು ಶ್ಲಾಘಿಸಿದ್ದಾರೆ.

ಬಾಲಕಿ ಶಾಲೆಗೆ ಹೊರಡಲು ಸಿದ್ಧಳಾಗಿ ರಸ್ತೆಯಲ್ಲಿ ಬಸ್​ಗಾಗಿ ಕಾಯುತ್ತಾ ನಿಂತಿದ್ದಳು. ಎದುರಿಗೆ ಬಂದ ಕಾರೊಂದು ರಸ್ತೆಯ ಪಕ್ಕದಲ್ಲಿ ನಿಂತಿತು. ಕೈಯಲ್ಲಿ ಚಾಕು ಹಿಡಿದ ಓರ್ವ ಬಾಲಕಿಯ ಹತ್ತಿರ ಬಂದು ಅವಳನ್ನು ಕಿಡ್ನಾಪ್​ ಮಾಡಲು ಪ್ರಯತ್ನಿಸುತ್ತಾನೆ. ಹಾಗೂ ಅವಳನ್ನು ಕೈಯಲ್ಲಿ ಎತ್ತಿಕೊಂಡು ಕಾರಿನೆಡೆಗೆ ಕರೆದೊಯ್ಯಲು ಪ್ರಯತ್ನಿಸುತ್ತಾನೆ. ಆದರೆ ಬಾಲಕಿಯು ಅವನಿಂದ ಹೇಗೋ ತಪ್ಪಿಸಿಕೊಂಡು ದೂರದಲ್ಲಿ ಬಿದ್ದಿದ್ದ ಶಾಲೆಯ ಬ್ಯಾಗ್​ ಹಿಡಿದು ಮನೆಯತ್ತ ಓಡುತ್ತಾಳೆ. ಇಂತಹ ಭಯಾನಕ ದೃಶ್ಯವೊಂದು ಸೆರೆಯಾಗಿದೆ.

30 ವರ್ಷದ ಜೇರೆಡ್​ ಪಾಲ್​ ಸ್ಟಂಗಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆಯೂ ಕೆಲವು ಅಪರಾಧಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಬಾಲಕಿಗೆ ಯಾವುದೇ ಗಂಭೀರವಾದ ಗಾಯವಾಗಿಲ್ಲ ಎಂಬುದರ ಕುರಿತಾಗಿ ದಿ ವಾಷಿಂಗಟನ್​ ಪೋಸ್ಟ್​ ವರದಿ ಮಾಡಿದೆ.

ಬಾಲಕಿಯ ಹತ್ತಿರ ಬಂದ ವ್ಯಕ್ತಿಯನ್ನು ನೋಡಿ ಅವಳು ಹೆದರಿ ಸುಮ್ಮನಾಗಿ ಬಿಟ್ಟಿದ್ದರೆ ಅಥವಾ ಬಿಟ್ಟುಕೊಡಲು ಪ್ರಯತ್ನಿಸಿದ್ದರೆ ಘಟನೆ ಭಯಂಕರವಾಗಿರುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ನಾನು ತಪ್ಪಿಸಿಕೊಳ್ಳುವಾಗ ವ್ಯಕ್ತಿಯ ಕೈಗಳ ತೋಳಿನ ಮೇಲೆ ಗುರುತನ್ನು ಹಾಕಿದೆ. ಹಾಗಾಗಿ ವ್ಯಕ್ತಿಯನ್ನು ಹುಡುಕಲು ಸಾಕ್ಷಿ ಸಿಕ್ಕಂತಾಯಿತು ಎಂದು 11 ವರ್ಷದ ಬಾಲಕಿ ಅಲಿಸಾ ಸಂದರ್ಶನವೊಂದರಲ್ಲಿ ಹೇಳಿದ್ದಾಳೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಬಾಲಕಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಮಗು ತುಂಬಾ ಧೈರ್ಯವಂತೆ, ಅಂತಹ ಗಾಬರಿಯ ಸಮಯದಲ್ಲಿ ಏನು ಮಾಡಬೇಕೆಂದ ಯೋಚನೆ ಯಾರಿಗೂ ಬಾರದು. ಭಯಾನಕ ಸಂದರ್ಭದಲ್ಲಿಯೂ ಅಷ್ಟು ಚಿಕ್ಕ ಬಾಲಕಿ ಭಯಗೊಳ್ಳದೇ ಬಚಾವ್​ ಆಗಲು ಪ್ರಯತ್ನಿಸಿದ್ದಾಳೆ ಎಂದು ಅನಿಕೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

Shah Rukh Khan: ಈ ಶಾರುಖ್​ ಖಾನ್​ ಅಸಲಿಯೋ ನಕಲಿಯೋ? ಫ್ಯಾನ್ಸ್​ಗೆ ದಂಗು ಬಡಿಸಿದ ಫೋಟೋ, ವಿಡಿಯೋಗಳು ವೈರಲ್​

Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು