Sign In

By signing in or creating an account, you agree with Associated Broadcasting Company's Terms & Conditions and Privacy Policy.

Noor Jahan Mango: ಒಂದು ಮಾವಿನ ಹಣ್ಣಿಗೆ 500ರಿಂದ ಸಾವಿರ ರೂಪಾಯಿ! ಅಬ್ಬಬ್ಬಾ, ಎಲ್ಲಿ ಸಿಗುತ್ತದೆ ಈ ಮಾವು?

ಪಕ್ಕದ ರಾಜ್ಯ ಗುಜರಾತ್​ನಿಂದಲೂ ಗ್ರಾಹಕರು ಮುಂಗಡ ಬುಕಿಂಗ್ ಮಾಡಿದ್ದಾರೆ ಎನ್ನುತ್ತಾರವರು. ಅಂದಹಾಗೆ ಒಂದು ನೂರ್​ಜಹಾನ್ ಮಾವಿನ ಹಣ್ಣು 2ರಿಂದ 3.5ಕೆಜಿಯವರೆಗೂ ತೂಗುತ್ತದಂತೆ. 2.75 ಕೆಜಿ ತೂಕ ಬಂದಿದ್ದ ಒಂದು ಮಾವಿನಹಣ್ಣಿಗೆ ₹1200ವರೆಗೂ ಪಾವತಿಸಿ ಗಿರಾಕಿಗಳು ಖರೀದಿಸಿದ್ದರು.

Noor Jahan Mango: ಒಂದು ಮಾವಿನ ಹಣ್ಣಿಗೆ 500ರಿಂದ ಸಾವಿರ ರೂಪಾಯಿ! ಅಬ್ಬಬ್ಬಾ, ಎಲ್ಲಿ ಸಿಗುತ್ತದೆ ಈ ಮಾವು?
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on: Jun 06, 2021 | 9:45 PM

ಇಂದೋರ್: ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಏನೇ ಮೂಗಿನ ಮೇಲೆ ಕುತೂಹಲದ ಬೆರಳಿಡುವಂತೆ ಮಾಡುವ ಈ ಸುದ್ದಿಯಂತೂ ಸತ್ಯ. ಮಧ್ಯಪ್ರದೇಶದ ಅಲಿರಾಜ್​ಪುರ್ ಜಿಲ್ಲೆಯ ಈ ತಳಿಯ ಒಂದು ಮಾವಿನ ಹಣ್ಣಿಗೆ ಬರೋಬ್ಬರಿ 500ರಿಂದ 1,000 ಸಾವಿರ. ಅಬ್ಬಾ! ಅನಿಸಿತಾ? ಹೌದು, ನೂರ್​ಜಹಾನ್ ತಳಿಯ ಈ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆ.

ನೂರ್​ಜಹಾನ್ ತಳಿ ಅಫ್ಘಾನಿಸ್ತಾನ ಮೂಲದ್ದೆಂದೂ, ಅಲಿರಾಜ್​ಪುರ್ ಜಿಲ್ಲೆಯ ಕಾಥಿವಾಡ ಪ್ರಾಂತ್ಯದಲ್ಲೊಂದೇ ಬೆಳೆಯಲಾಗುವುದು ಎಂದು ತಿಳಿಸುತ್ತಾರೆ ಇಲ್ಲಿನ ರೈತರು. ಹಿಂದಿನ ವರ್ಷಕ್ಕಿಂತ ಈ ವರ್ಷ ಇನ್ನೂ ತ್ತಮ ಬೆಳೆ ಕೈಗೆ ದೊರೆತಿದೆ. ಆದರೂ ಬೆಲೆ ತುಂಬಾ ಚೆನ್ನಾಗಿದೆ ನೂರ್​ಜಹಾನ್ ಮಾವನ್ನು ಬೆಳೆದ ರೈತರು ತಿಳಿಸಿದ್ದಾರೆ. ಓರ್ವ ರೈತನ ಜಮೀನಿನಲ್ಲಿ ಇರುವುದು ಕೇವಲ ಮೂರು ಮಾವಿನ ಮರವಷ್ಟೇ. ಮೂರು ಮರಗಳಿಂದ ಒಟ್ಟು 250 ಮಾವಿನ ಕಾಯಿಗಳು. ಆದರೆ ಒಂದು ಮಾವಿನ ಕಾಯಿಗೆ 500ರಿಂದ ಸಾವಿರದವರೆಗೂ ಬೆಲೆಯಿದೆ. ಈಗಾಗಲೇ ಎಲ್ಲಾ ಕಾಯಿಗಳನ್ನೂ ಗ್ರಾಹಕರು ಮುಂಗಡವಾಗಿ ಕಾಯ್ದಿರಿಸಿದ್ದಾರೆ.ಹೀಗಾಗಿ ಈ ವರ್ಷ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಶಿವ್ರಾನ್ ಸಿಂಗ್ ಜಾಧವ್.

ಪಕ್ಕದ ರಾಜ್ಯ ಗುಜರಾತ್​ನಿಂದಲೂ ಗ್ರಾಹಕರು ಮುಂಗಡ ಬುಕಿಂಗ್ ಮಾಡಿದ್ದಾರೆ ಎನ್ನುತ್ತಾರವರು. ಅಂದಹಾಗೆ ಒಂದು ನೂರ್​ಜಹಾನ್ ಮಾವಿನ ಹಣ್ಣು 2ರಿಂದ 3.5ಕೆಜಿಯವರೆಗೂ ತೂಗುತ್ತದಂತೆ. 2.75 ಕೆಜಿ ತೂಕ ಬಂದಿದ್ದ ಒಂದು ಮಾವಿನಹಣ್ಣಿಗೆ ₹1200ವರೆಗೂ ಪಾವತಿಸಿ ಗಿರಾಕಿಗಳು ಖರೀದಿಸಿದ್ದರು.

ಹೀಗೆ ಎಲ್ಲರಿಗೂ ಇಷ್ಟವಾದ ಮಾವಿನಲ್ಲೂ ಬಹು ವೈವಿಧ್ಯತೆಯನ್ನು ಕಾಣಬಹುದು. ಒಂದಕ್ಕಿಮತ ಒಂದು ಸಿಹಿ, ಒಂದಕ್ಕಿಂತ ಇನ್ನೊಂದು ರುಚಿ ಎಂದು ನಾವು ಇಲ್ಲಿಂದಲೇ ನೂರ್​ಜಹಾನ್ ತಳಿಯ ಮಾವಿನ ಹಣ್ಣಿನ ಕನಸು ಕಾಣಬಹುದು. ಕೊವಿಡ್ ಪಿಡುಗು ಸಂಪೂರ್ಣವಾಗಿ ಕಡಿಮೆಯಾದ ನಂತರ ಮಧ್ಯ ಪ್ರದೇಶದ ಪ್ರವಾಸಕ್ಕೆ ತೆರಳಿ, ಅದರಲ್ಲೂ ಮಾವಿನ ಹಣ್ಣಿನ ಈ ಸೀಸನ್​ನಲ್ಲೇ ಪ್ರವಾಸ ಮಾಡಿ ನೂರ್​ಜಹಾನ್ ಮಾವಿನಹಣ್ಣನ್ನು ಸವಿಯಬಹುದು.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ

Shah Rukh Khan: ಈ ಶಾರುಖ್​ ಖಾನ್​ ಅಸಲಿಯೋ ನಕಲಿಯೋ? ಫ್ಯಾನ್ಸ್​ಗೆ ದಂಗು ಬಡಿಸಿದ ಫೋಟೋ, ವಿಡಿಯೋಗಳು ವೈರಲ್​

(Noor Jahan Mango from Madhya Pradesh rate up to 1 thousand for on one piece)

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ