AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ; ಏನಿರಬಹುದು ಇದರ ಹಿಂದಿನ ಕಥೆ?

ಶನಿವಾರ ನೋಡಿದಾಗ ಸಿಂಕ್​ಹೋಲ್​ ತುಂಬಾ ಚಿಕ್ಕದಾಗಿತ್ತು. ಆದರೆ ಕ್ರಮೇಣವಾಗಿ 70,000 ಚದರ ಅಡಿಯಷ್ಟು ವಿಸ್ತಾರಗೊಂಡಿದೆ. ಆದರೆ ಅದೃಷ್ಟವಶಾತ್​ ಯಾರಿಗೂ ಕೂಡಾ ಹಾನಿಯಾಗಿಲ್ಲ.

Viral Video: ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ; ಏನಿರಬಹುದು ಇದರ ಹಿಂದಿನ ಕಥೆ?
ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ
TV9 Web
| Edited By: |

Updated on: Jun 06, 2021 | 4:38 PM

Share

ಕೃಷಿಭೂಮಿಯೊಂದರಲ್ಲಿ ಇದ್ದಕ್ಕಿದ್ದಂತೆಯೇ ದೈತ್ಯಾಕಾರದ ಗುಂಡಿಯೊಂದು ಕಂಡು ಬಂದಿದೆ. ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಗುಂಡಿ ಸಮಯ ಕಳೆಯುತ್ತಿದ್ದಂತೆಯೇ ದೈತ್ಯಾಕಾರದಲ್ಲಿ ವಿಸ್ತಾರಗೊಂಡಿದೆ. ಅಕ್ಕ-ಪಕ್ಕದಲ್ಲಿರುವ ಮನೆಗಳನ್ನೂ ನುಂಗುವಷ್ಟರ ಮಟ್ಟಿಗೆ ಗುಂಡಿ ವಿಸ್ತಾರಗೊಳ್ಳುತ್ತಲೇ ಇದೆ. ಒಂದು ಕ್ಷಣ ವಿಡಿಯೋ ನೋಡುತ್ತಿದ್ದಂತೆಯೇ ಆಶ್ಚರ್ಯದ ಜೊತೆಗೆ ಮೈ ಜುಂ ಅನ್ನುವುದಂತೂ ಸತ್ಯ.

ಮೆಕ್ಸಿಕೊದ ಪ್ಯೂಬ್ಲಾ ರಾಜ್ಯದ ಕೃಷಿಭೂಮಿಯಲ್ಲಿ ಸುಮಾರು 300 ಅಡಿ ವಿಸ್ತಾರದ ಬೃಹತ್​ ಸಿಂಕ್​ಹೋಲ್​ ಕಂಡು ಬಂದಿದೆ. ಅಧಿಕಾರಿಗಳು ಸ್ಥಳದ ಪರಿಶೀಲನೆಗೆ ಬಂದಿದ್ದು ಈ ಸಿಂಕ್​ಹೋಲ್​ ಸುಮಾರು 60 ಅಡಿ ಆಳವಾಗಿದೆ ಎಂದು ಪರಿಶೀಲಿಸಿದ್ದಾರೆ. ಯಾರೂ ಕೂಡಾ ಸಿಂಕ್​ಹೋಲ್​ನ ಹತ್ತಿರಕ್ಕೆ ಹೋಗದಂತೆ ಸೂಚನೆ ನೀಡಿದ್ದಾರೆ.

ಶನಿವಾರ ನೋಡಿದಾಗ ಸಿಂಕ್​ಹೋಲ್​ ತುಂಬಾ ಚಿಕ್ಕದಾಗಿತ್ತು. ಆದರೆ ಕ್ರಮೇಣವಾಗಿ 70,000 ಚದರ ಅಡಿಯಷ್ಟು ವಿಸ್ತಾರಗೊಂಡಿದೆ. ಆದರೆ ಅದೃಷ್ಟವಶಾತ್​ ಯಾರಿಗೂ ಕೂಡಾ ಹಾನಿಯಾಗಿಲ್ಲ. ಇದೀಗ ಆ ಗುಂಡಿ ಅಂತರ್ಜಲದಿಂದ ಆವೃತವಾಗಿದೆ. ಸುತ್ತಲಿನ ಜನರನ್ನು ಸುರಕ್ಷಿತವಾಗಿರಿಸಲು ಬೇರೆ ಸ್ಥಳಗೆ ಕರೆದೊಯ್ಯಲಾಗಿದೆ ಎಂದು ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ.

ಸಿಂಕ್​ಹೋಲ್​ ಕಾಣಿಸಿಕೊಳ್ಳುವ ಮೊದಲು ಜೋರಾದ ಗುಡುಗಿನ ಶಬ್ದ ಕೇಳಿದೆ. ಸುಮಾರು 6 ಗಂಟೆಯ ವೇಳೆಗೆ ಗುಡುಗಿನ ಶಬ್ದ ಕೇಳಿದ್ದೇವೆ. ಏನಾಯಿತು ಎಂದು ಹೊರಗಡೆ ಬಂದಾಕ್ಷಣ ಸಿಂಕ್​ಹೋಲ್​ ಕಾಣಿಸಿಕೊಂಡಿದೆ. ಸಮಯವಾಗುತ್ತಿದ್ದಂತೆ ವಿಸ್ತರಿಸುತ್ತಾ ದೊಡ್ಡದಾಗಿದೆ. ಇಂದರಿಂದ ಒಂದು ಕ್ಷಣ ಭಯಭೀತರಾದೆವು ಎಂದು ಸ್ಥಳೀಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

Viral Video: ಕಾಲಡಿ ಸಿಕ್ಕಿ ನರಳಾಡುತ್ತಿದ್ದ ಜಿರಳೆಯನ್ನು ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿ! ಮುಂದೇನಾಯ್ತು?

Viral Video: ಪಾನಿಪುರಿ ಮಹಿಮೆಯೆ ಹೀಗೆ.. ನೋಡಿದಾಕ್ಷಣ ಹಸುಗಳ ಬಾಯಲ್ಲೂ ನೀರು! ವಿಡಿಯೋ ನೋಡಿ

Follow Us
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ