AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ; ಏನಿರಬಹುದು ಇದರ ಹಿಂದಿನ ಕಥೆ?

ಶನಿವಾರ ನೋಡಿದಾಗ ಸಿಂಕ್​ಹೋಲ್​ ತುಂಬಾ ಚಿಕ್ಕದಾಗಿತ್ತು. ಆದರೆ ಕ್ರಮೇಣವಾಗಿ 70,000 ಚದರ ಅಡಿಯಷ್ಟು ವಿಸ್ತಾರಗೊಂಡಿದೆ. ಆದರೆ ಅದೃಷ್ಟವಶಾತ್​ ಯಾರಿಗೂ ಕೂಡಾ ಹಾನಿಯಾಗಿಲ್ಲ.

Viral Video: ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ; ಏನಿರಬಹುದು ಇದರ ಹಿಂದಿನ ಕಥೆ?
ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ
TV9 Web
| Edited By: |

Updated on: Jun 06, 2021 | 4:38 PM

Share

ಕೃಷಿಭೂಮಿಯೊಂದರಲ್ಲಿ ಇದ್ದಕ್ಕಿದ್ದಂತೆಯೇ ದೈತ್ಯಾಕಾರದ ಗುಂಡಿಯೊಂದು ಕಂಡು ಬಂದಿದೆ. ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಗುಂಡಿ ಸಮಯ ಕಳೆಯುತ್ತಿದ್ದಂತೆಯೇ ದೈತ್ಯಾಕಾರದಲ್ಲಿ ವಿಸ್ತಾರಗೊಂಡಿದೆ. ಅಕ್ಕ-ಪಕ್ಕದಲ್ಲಿರುವ ಮನೆಗಳನ್ನೂ ನುಂಗುವಷ್ಟರ ಮಟ್ಟಿಗೆ ಗುಂಡಿ ವಿಸ್ತಾರಗೊಳ್ಳುತ್ತಲೇ ಇದೆ. ಒಂದು ಕ್ಷಣ ವಿಡಿಯೋ ನೋಡುತ್ತಿದ್ದಂತೆಯೇ ಆಶ್ಚರ್ಯದ ಜೊತೆಗೆ ಮೈ ಜುಂ ಅನ್ನುವುದಂತೂ ಸತ್ಯ.

ಮೆಕ್ಸಿಕೊದ ಪ್ಯೂಬ್ಲಾ ರಾಜ್ಯದ ಕೃಷಿಭೂಮಿಯಲ್ಲಿ ಸುಮಾರು 300 ಅಡಿ ವಿಸ್ತಾರದ ಬೃಹತ್​ ಸಿಂಕ್​ಹೋಲ್​ ಕಂಡು ಬಂದಿದೆ. ಅಧಿಕಾರಿಗಳು ಸ್ಥಳದ ಪರಿಶೀಲನೆಗೆ ಬಂದಿದ್ದು ಈ ಸಿಂಕ್​ಹೋಲ್​ ಸುಮಾರು 60 ಅಡಿ ಆಳವಾಗಿದೆ ಎಂದು ಪರಿಶೀಲಿಸಿದ್ದಾರೆ. ಯಾರೂ ಕೂಡಾ ಸಿಂಕ್​ಹೋಲ್​ನ ಹತ್ತಿರಕ್ಕೆ ಹೋಗದಂತೆ ಸೂಚನೆ ನೀಡಿದ್ದಾರೆ.

ಶನಿವಾರ ನೋಡಿದಾಗ ಸಿಂಕ್​ಹೋಲ್​ ತುಂಬಾ ಚಿಕ್ಕದಾಗಿತ್ತು. ಆದರೆ ಕ್ರಮೇಣವಾಗಿ 70,000 ಚದರ ಅಡಿಯಷ್ಟು ವಿಸ್ತಾರಗೊಂಡಿದೆ. ಆದರೆ ಅದೃಷ್ಟವಶಾತ್​ ಯಾರಿಗೂ ಕೂಡಾ ಹಾನಿಯಾಗಿಲ್ಲ. ಇದೀಗ ಆ ಗುಂಡಿ ಅಂತರ್ಜಲದಿಂದ ಆವೃತವಾಗಿದೆ. ಸುತ್ತಲಿನ ಜನರನ್ನು ಸುರಕ್ಷಿತವಾಗಿರಿಸಲು ಬೇರೆ ಸ್ಥಳಗೆ ಕರೆದೊಯ್ಯಲಾಗಿದೆ ಎಂದು ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ.

ಸಿಂಕ್​ಹೋಲ್​ ಕಾಣಿಸಿಕೊಳ್ಳುವ ಮೊದಲು ಜೋರಾದ ಗುಡುಗಿನ ಶಬ್ದ ಕೇಳಿದೆ. ಸುಮಾರು 6 ಗಂಟೆಯ ವೇಳೆಗೆ ಗುಡುಗಿನ ಶಬ್ದ ಕೇಳಿದ್ದೇವೆ. ಏನಾಯಿತು ಎಂದು ಹೊರಗಡೆ ಬಂದಾಕ್ಷಣ ಸಿಂಕ್​ಹೋಲ್​ ಕಾಣಿಸಿಕೊಂಡಿದೆ. ಸಮಯವಾಗುತ್ತಿದ್ದಂತೆ ವಿಸ್ತರಿಸುತ್ತಾ ದೊಡ್ಡದಾಗಿದೆ. ಇಂದರಿಂದ ಒಂದು ಕ್ಷಣ ಭಯಭೀತರಾದೆವು ಎಂದು ಸ್ಥಳೀಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

Viral Video: ಕಾಲಡಿ ಸಿಕ್ಕಿ ನರಳಾಡುತ್ತಿದ್ದ ಜಿರಳೆಯನ್ನು ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿ! ಮುಂದೇನಾಯ್ತು?

Viral Video: ಪಾನಿಪುರಿ ಮಹಿಮೆಯೆ ಹೀಗೆ.. ನೋಡಿದಾಕ್ಷಣ ಹಸುಗಳ ಬಾಯಲ್ಲೂ ನೀರು! ವಿಡಿಯೋ ನೋಡಿ

Follow Us
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ