Viral Video: ನಿಮಗೆ ಇಂಥವರ ಕಥೆ ಗೊತ್ತಿಲ್ಲ, ದೂರವಿಡುವ ಮುನ್ನ ದಯವಿಟ್ಟು ಯೋಚಿಸಿ

Helping : ಒಂದು ಘಟನೆಯಿಂದಲೋ, ವರ್ತನೆಯಿಂದಲೋ ಅವರು ಹೀಗೆಯೇ ಎಂಬ ಹಣೆಪಟ್ಟಿ ಹಚ್ಚಿಬಿಡುತ್ತೇವೆ. ಆದರೆ ಅವರು ಹಾಗಿರಲು ಕಾರಣವಿರುತ್ತದೆ. ಅವರಿಗೆ ನಮ್ಮಿಂದ ಸಹಾಯವಾಗಬೇಕಿರುತ್ತದೆ. ನೋಡಿ ಈ ವಿಡಿಯೋ.

Viral Video: ನಿಮಗೆ ಇಂಥವರ ಕಥೆ ಗೊತ್ತಿಲ್ಲ, ದೂರವಿಡುವ ಮುನ್ನ ದಯವಿಟ್ಟು ಯೋಚಿಸಿ
ಕರುಣೆ ಇರಲಿ ಎನ್ನುವುದನ್ನು ಈ ಪರಿಕಲ್ಪನೆಯಲ್ಲಿ ಅರ್ಥ ಮಾಡಿಸುತ್ತಿರುವ ಯುವಕ.
Follow us
|

Updated on:Jul 14, 2023 | 4:59 PM

Be Kind : ಯಾವಾಗಲೂ ಅವನದು ಗೋಳೇ. ಆಕೆಯೋ ಯಾರೊಂದಿಗೂ ಮಾತನಾಡುವುದಿಲ್ಲ. ಅವನಂತೂ ಸಣ್ಣಪುಟ್ಟದಕ್ಕೆ ಸಿಟ್ಟು ಮಾಡಿಕೊಳ್ತಾನೆ. ಆಕೆ ಮನೆಯಿಂದ ಹೊರಗೇ ಬರುವುದಿಲ್ಲ. ಅವನು ರಸ್ತೆಯಲ್ಲಿಯೇ ಜಗಳಕ್ಕೆ ನಿಂತ. ಆಕೆ ಬರೀ ಹೆದರ್ತಾಳೆ. ಎಷ್ಟೊತ್ತಿನಿಂದ ಅದೇ ಕೆಲಸವನ್ನೇ ಮಾಡ್ತಿದಾನೆ ಅವ. ನೆಟ್ಟಗೆ ಅವನಿಗೆ ಮಾತನಾಡೋಕೆ ಬರುವುದಿಲ್ಲ. ಅವ ಯಾರ ಜೊತೆನೂ ಹೊಂದಿಕೊಳ್ಳಲ್ಲ. ಒಂದು ಕಂಪೆನಿಯಲ್ಲಿ ನೆಲೆಯೂರಲ್ಲ. ಮುಟ್ಟಿದರೆ ಈಕೆ ಭಯ ಬೀಳ್ತಾಳೆ. ಕಂಡಕಂಡವರನ್ನೆಲ್ಲಾ ಹಚ್ಚಿಕೊಳ್ಳೋಕೆ ನೋಡ್ತಾನೆ ಅವ. ಡೆಡ್​ಲೈನ್​ ಮೀಟ್ ಮಾಡೋದಕ್ಕೆ ಆಕೆಗೆ ಯಾಕೆ ಆಗಲ್ವೋ. ಆಫೀಸಲ್ಲೂ (Office) ಮಲಗ್ತಾನೆ ಇವ… ಇಂಥವರು ನಮ್ಮೊಂದಿಗೆ ಅಥವಾ ನಮ್ಮ ಸುತ್ತಮುತ್ತಲೂ ಇರುತ್ತಾರೆ. ಯಾಕೆ ಹೀಗೆ? ಈ ವಿಡಿಯೋ ನೋಡಿ.

ಅರ್ಥವಾಯಿತೆ? ಪ್ರತಿಯೊಬ್ಬರಿಗೂ ಅವರದೇ ಆದ ಹಿನ್ನೆಲೆ ಇರುತ್ತದೆ. ಎಷ್ಟೋ ಜನಕ್ಕೆ ಬಾಲ್ಯದ ಆಘಾತಗಳು ಅವರ ಮನಸಿನಲ್ಲಿ ಅಚ್ಚೊತ್ತಿರಬಹುದು; ದೌರ್ಜನ್ಯ, ಒತ್ತಡ, ಆಘಾತ, ಪ್ರೀತಿಯ ಕೊರತೆ, ಒಂಟಿತನ, ಅಭದ್ರತೆ ಮತ್ತು ಇನ್ನೂ ಏನೇನೋ ಸಂಗತಿಗಳು. ಕೆಲವರ ಪಾಲಿಗೆ ಬದುಕು ಬಹಳ ಕಠಿಣವೂ ಕ್ರೂರಿಯೂ ಆಗಿರುತ್ತದೆ. ಯಾವುದ್ಯಾವುದೋ ಕಾರಣಗಳಿಗಾಗಿ ಮತ್ತು ಯಾರಿಂದಲೋ ಕೆಲವೊಮ್ಮೆ ನಮ್ಮ ಹೊಳಪನ್ನೇ ಕಳೆದುಕೊಂಡುಬಿಡುತ್ತೇವೆ. ಆಗ ಕತ್ತಲಾದ ನಮ್ಮ ದಾರಿಗೆ ಬೆಳಕನ್ನು ಹಿಡಿಯಲು ಮತ್ತೊಬ್ಬರ ಸಹಾಯ ಬೇಕಾಗುತ್ತದೆ. ಹಾಗಾಗಿ ಹೃದಯದಲ್ಲಿ ಕರುಣೆ ಇರಲಿ ಎನ್ನುವುದೇ ಈ ವಿಡಿಯೋದ ಸಾರ.

ಇದನ್ನೂ ಓದಿ : Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?

ಈ ವಿಡಿಯೋ ನೋಡಿದವರ ಸಂಖ್ಯೆ ಇನ್ನೇನು 10 ಮಿಲಿಯನ್​ ಆಗುತ್ತದೆ. ಇದನ್ನು ಲೈಕ್ ಮಾಡಿದವರ ಸಂಖ್ಯೆ 2 ಲಕ್ಷ ತಲುಪುತ್ತದೆ. 60 ಸಾವಿರ ಜನರು ಇದನ್ನು ರೀಟ್ವೀಟ್ ಮಾಡಿದ್ದಾರೆ. ಇಷ್ಟೊಂದು ಪವರ್​ಫುಲ್​ ಆದ ಮೆಸೇಜ್​ ಅನ್ನು ಈತನಕ ನಾನು ನೋಡಿರಲಿಲ್ಲ. ಇದರ ಕರ್ತೃವಿಗೆ ಧನ್ಯವಾದ ಎಂದು ಹೇಳಿದ್ದಾರೆ ಅನೇಕರು. ಅಬ್ಬಾ! ಈ ವಿಡಿಯೋ ನನ್ನ ಹೃದಯವನ್ನೇ ಕರಗಿಸಿಬಿಟ್ಟಿತು, ಎಷ್ಟು ಸರಳವಾಗಿ ಈ ಪರಿಕಲ್ಪನೆಯ ಮೂಲಕ ಮನಮುಟ್ಟುವಂತೆ ಹೇಳಿದ್ದಾನೆ! ಈ ಯುವಕನಿಗೆ ಒಳ್ಳೆಯದಾಗಲಿ ಎಂದಿದ್ದಾರೆ ಕೆಲವರು.

ನೀವೇನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:55 pm, Fri, 14 July 23

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು