Viral Video: ‘ಹುಷಾರ್​! ನಾನು ಟೊಮ್ಯಾಟೋ ಕಾವಲುಗಾರ ನಾಗರಾಜ’

Cobra : ಹೊಲವೊಂದರಲ್ಲಿ ಟೊಮ್ಯಾಟೋ ಕಳ್ಳತನದ ಪ್ರಕರಣ ನಾಗರಾಜನ ಕಿವಿಗೂ ಬಿತ್ತೆ? ತಾನೇ ಸ್ವತಃ ಟೊಮ್ಯಾಟೋ ಕಾಯಲು ಬಂದಿದ್ದಾನೆ. ನೋಡಿ ವೈರಲ್ ಆಗುತ್ತಿರುವ ಈ ವಿಡಿಯೋ.

Viral Video: 'ಹುಷಾರ್​! ನಾನು ಟೊಮ್ಯಾಟೋ ಕಾವಲುಗಾರ ನಾಗರಾಜ'
ಟೊಮ್ಯಾಟೋ ಕಾಯುತ್ತಿದ್ದಾನೆಯೇ ನಾಗರಾಜ?
Follow us
|

Updated on:Jul 15, 2023 | 10:32 AM

Tomato : ಎರಡು ತಿಂಗಳ ಹಿಂದೆಯಷ್ಟೇ ಒಂದು ಕಿ. ಗ್ರಾಂಗೆ ರೂ. 20 ಇದ್ದ ಟೊಮ್ಯಾಟೋ ಇದೀಗ ರೂ. 150 ದಾಟಿದೆ. ಏರಿದ ಬೆಲೆ ಇಳಿಯದ ಕಾರಣ ಹತಾಶೆಗೊಂಡ ಜನರು ಸಾಮಾಜಿಕ ಜಾಲತಾಣದಲ್ಲಿ (Social Media) ಹೆಚ್ಚು ಸೃಜನಶೀಲರಾಗುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸಹೋದರನೊಬ್ಬ ಸಹೋದರಿಯ ಹುಟ್ಟುಹಬ್ಬಕ್ಕೆ 4 ಕಿ. ಗ್ರಾಂ ಟೊಮ್ಯಾಟೋ ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಎಲ್ಲದರ ಮಧ್ಯೆ ಹೊಲವೊಂದರಲ್ಲಿ ಟೊಮ್ಯಾಟೋ ಕಳ್ಳತನವಾದ ಪ್ರಕರಣವೂ ಬೆಳಕಿಗೆ ಬಂದಿದೆ. ಈ ಸುದ್ದಿ ನಾಗರಾಜನಿಗೂ (Cobra) ತಲುಪಿತೋ ಏನೋ, ಅವನು ಸ್ವತಃ ಟೊಮ್ಯಾಟೊ ಕಾಯಲು ಪಣ ತೊಟ್ಟು ನಿಂತಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Mirza Md Arif (@mirzamdarif1)

ತಟ್ಟೆಗಳಲ್ಲಿ ತುಂಬಿಟ್ಟಿರುವ ಟೊಮ್ಯಾಟೊಗಳ ಹಿಂದೆ ಕುಳಿತಿರುವ ನಾಗರಾಜ ಹೆಡೆಬಿಚ್ಚಿ ಹಿಸ್​ ಹಿಸ್​ ಎನ್ನುತ್ತಿದ್ದಾನೆ. ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನ ಮಿರ್ಜಾ ಎಂಡಿ ಆರೀಫ್​ ಎಂಬ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಹಾಸ್ಯದ ಚಟಾಕಿ ಹಾರಿಸುತ್ತಿದ್ದಾರೆ. ಮಾವಿನಕಾಯಿಗಿಂತಲೂ ಟೊಮ್ಯಾಟೋ ತುಟ್ಟಿಯಾಗಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಶಾಂತಿಮಂತ್ರದ ನಂತರವೇ ಊಟಮಾಡುವ ಸನಾತನ ಸಂಸ್ಕಾರದ ಶ್ವಾನ

ನಾಗದೇವರು ನಿಧಿಯನ್ನು ಹೇಗೆ ಕಾಪಾಡುತ್ತಾನೋ ಹಾಗೆ ಇದೀಗ ಬಂಗಾರದಂತಿರುವ ಟೊಮ್ಯಾಟೋವನ್ನು ಕಾಯುತ್ತಿದ್ದಾನೆ ಎಂದು ಒಬ್ಬರು ಹೇಳಿದ್ದಾರೆ. ನಮ್ಮ ಊರಲ್ಲಿ 1 ಕಿ.ಗ್ರಾಂಗೆ ರೂ. 130 ಎಂದಿದ್ದಾರೆ ಮತ್ತೊಬ್ಬರು. ಅಲ್ಲದೆ, ಮಧ್ಯಪ್ರದೇಶದ ಅಶೋಕನಗರದ ಅಂಗಡಿಯೊಂದರಲ್ಲಿ ಮೊಬೈಲ್​ ಖರೀದಿಸಿದರೆ 2 ಕಿ. ಗ್ರಾಂ ಟೊಮ್ಯಾಟೋವನ್ನು ಉಚಿತ ಉಡುಗೊರೆಯಂತೆ ಕೊಡಲಾಗುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ : Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ

ನಿಮ್ಮೂರಲ್ಲಿ ಟೊಮ್ಯಾಟೋ ಬೆಲೆ ಏನು? ಎಷ್ಟು ದಿನದಿಂದ ನಿಮ್ಮ ಮನೆಗೆ ಟೊಮ್ಯಾಟೋ ತಂದಿಲ್ಲ? ಟೊಮ್ಯಾಟೋ ಇಲ್ಲದ ಅಡುಗೆ ರುಚಿಸುತ್ತಿದೆಯೇ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:27 am, Sat, 15 July 23

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು