AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶಾಂತಿಮಂತ್ರದ ನಂತರವೇ ಊಟಮಾಡುವ ಸನಾತನ ಸಂಸ್ಕಾರದ ಶ್ವಾನ

Sanatan : “ಶಾಂತಿ ಮಂತ್ರವನ್ನು ತಪ್ಪಾಗಿ ಉಚ್ಚರಿಸಿದ್ದಾರೆ. ಇಷ್ಟಕ್ಕೂ ಇದನ್ನು ಭೋಜನದ ವೇಳೆಯಲ್ಲಿ ಹೇಳುವುದೇ? “ಇದು ಸಂಸ್ಕಾರವೂ ಅಲ್ಲ, ಏನೂ ಅಲ್ಲ, ಆ ನಾಯಿಯೇನು ತನ್ನ ಸಂತತಿಗೆ ಸನಾತನಧರ್ಮವನ್ನು ಕಲಿಸಿಕೊಡುವುದೇ?”

Viral Video: ಶಾಂತಿಮಂತ್ರದ ನಂತರವೇ ಊಟಮಾಡುವ ಸನಾತನ ಸಂಸ್ಕಾರದ ಶ್ವಾನ
ಓಂ ಶಾಂತಿಃ ಎಂದು ಹೇಳುವ ತನಕ ಊಟ ಮಾಡಬಾರದು!
ಶ್ರೀದೇವಿ ಕಳಸದ
|

Updated on:Jul 14, 2023 | 5:46 PM

Share

Dog Lover : ಇಲ್ಲೊಂದು ವಿಶೇಷ ಊಟದ ಪಂಕ್ತಿಯಿದೆ. ಮನೆಯೊಂದರ ಪಡಸಾಲೆಯಂತೆ ಕಾಣುವ ಕೋಣೆಯಲ್ಲಿ ನೆಲದ ಮೇಲೆ ಇಬ್ಬಿಬ್ಬರಂತೆ ಎದುರಾಗಿ ನಾಲ್ವರು ಊಟದ ತಟ್ಟೆಯೆದುರು ಕೂತಿದ್ದಾರೆ. ಎಡಗಡೆ ಒಬ್ಬ ಎಳೆಯ ಹುಡುಗಿ ಹಾಗೂ ಹುಡುಗ, ಅಕ್ಕ ತಮ್ಮ ಇರಬೇಕು. ಅವರೆದುರು ಹದಿವಯದ ಅವರಣ್ಣ ಹಾಗೂ ಅವನ ಪಕ್ಕದಲ್ಲಿ ಪವಡಿಸಿದ ಒಂದು ನಾಯಿಮರಿ (Puppy). ಮೂವರೂ ಮಕ್ಕಳು ತಟ್ಟೆಯೆದುರು ಕೈಜೋಡಿಸಿ “ಓಂ ಸಹನಾವವತು ಸಹನೌಭುನಕ್ತು..” ಎಂದು ಹಿರಿಯರೊಬ್ಬರು ಹೇಳಿಕೊಡುತ್ತಿರುವ ಶಾಂತಿಮಂತ್ರವನ್ನು ಸ್ತುತಿಸುತ್ತಿದ್ದಾರೆ. ತನ್ನ ತಟ್ಟೆಯನ್ನು ಆಸೆಕಣ್ಣುಗಳಿಂದ ನೋಡುತ್ತ ನಾಯಿ ಮುಖವನ್ನು ನೆಲಕ್ಕೆ ಹಚ್ಚಿ ವಿಶ್ರಾಮ ಭಂಗಿಯಲ್ಲಿದೆ. ಕೊನೆಯ “ಶಾಂತಿಃ” ಕಿವಿಗೆ ಬಿದ್ದಕೂಡಲೇ ಚುರುಕಾದ ಅದು ಎದ್ದು ನಿಲ್ಲುತ್ತದೆ. “ಹಾಂ… ತಿನ್ನು..” ಎಂಬಪ್ಪಣೆ ಬಂದ ಕೂಡಲೇ ತನ್ನ ತಟ್ಟೆಗೆ ಬಾಯಿ ಹಾಕುತ್ತದೆ.

ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಚಕಿತರಾಗಿದ್ದಾರೆ. “ವೈದಿಕ ಸಂಸ್ಕಾರ,” “ಒಂದು ಸನಾತನಿ ಕುಟುಂಬದ ಶಿಸ್ತು ಮತ್ತು ಪ್ರಭಾವವೆಂದರೆ ಇದೇ!” “ಜ್ಞಾನಿ ನಾಯಿ” ಎಂದೆಲ್ಲ ಹೊಗಳಿದ್ದಾರೆ. ಎಂದಿನಂತೆ ಕೆಲವರು ತಕರಾರನ್ನೂ ತೆಗೆದಿದ್ದಾರೆ. “ಶಾಂತಿ ಮಂತ್ರವನ್ನು ತಪ್ಪಾಗಿ ಉಚ್ಚರಿಸಿದ್ದಾರೆ. ಇಷ್ಟಕ್ಕೂ ಇದನ್ನು ಭೋಜನದ ವೇಳೆಯಲ್ಲಿ ಹೇಳುವುದೇ? ಛೇ ಛೇ..”, “ಇದು ಸಂಸ್ಕಾರವೂ ಅಲ್ಲ, ಏನೂ ಅಲ್ಲ, ಆ ನಾಯಿಯೇನು ತನ್ನ ಸಂತತಿಗೆ ಸನಾತನಧರ್ಮವನ್ನು ಕಲಿಸಿಕೊಡುವುದೇ?” “ಅಯ್ಯೋ, ಇದು ಪ್ರಾಣಿಸಹಜ ಪ್ರತಿಸ್ಪಂದನೆ. ಈ ಮಂತ್ರದ ಬದಲು ಮತ್ತೇನೋ ಹಾಳುಮೂಳು ದನಿ ತೆಗೆದಿದ್ದರೂ ಅದು ಹೀಗೆಯೇ ಮಾಡುತ್ತಿತ್ತು” ಎಂದು ಒಂದಿಬ್ಬರು ಅಧಿಕಪ್ರಸಂಗಿಗಳು ತಮ್ಮ ಅಗಾಧ ಪಾಂಡಿತ್ಯ ಪ್ರದರ್ಶನ ಮಾಡಿದ್ದಾರೆ.

ಏನೇ ಆಗಲಿ ನಾಯಿಯ ತಾಳ್ಮೆ, ಶಿಸ್ತು ಮೆಚ್ಚಬೇಕಾದದ್ಧೇ. ಈ ವಿಡಿಯೋದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:38 pm, Fri, 14 July 23

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ