Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ

Delivery Agent : ಜೀವವನ್ನೂ ಲೆಕ್ಕಿಸದೆ ಈ ಜೋರುಮಳೆಯಲ್ಲಿ ಕರ್ತವ್ಯನಿಷ್ಠರಾಗಿರುವ ಡೆಲಿವರಿ ಏಜೆಂಟರುಗಳ ಆಸರೆ ಬೇಸರಕ್ಕೆ ಹೀಗೊಂದು ರಿಲ್ಯಾಕ್ಸ್​ ಸ್ಟೇಷನ್​ ಶುರುಮಾಡಿದ್ದಾರೆ ಈ ಉತ್ಸಾಹಿ ಯುವಕ. ನೆಟ್ಟಿಗರು ಇವರ ಬೆನ್ನು ತಟ್ಟುತ್ತಿದ್ದಾರೆ.

Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ
ರಿಲ್ಯಾಕ್ಸ್​ ಸ್ಟೇಷನ್​ಗೆ ಡೆಲಿವರಿ ಏಜೆಂಟರುಗಳನ್ನು ಆಹ್ವಾನಿಸುತ್ತಿರುವ ಸಿದ್ದೇಶ ಲೋಕರೆ
Follow us
|

Updated on:Jul 14, 2023 | 3:19 PM

Maharashtra : ಧೋ ಎಂದು ಸುರಿಯುವ ಮಳೆಯಲ್ಲೂ, ರಣಬಿಸಿಲಿನಲ್ಲೂ, ಕಡುಚಳಿಯಲ್ಲೂ, ಬಿರುಗಾಳಿಯಲ್ಲೂ ಡೆಲಿವರಿ ಏಜೆಂಟರುಗಳು ಶಕ್ತಿಮಾನ್​ನಂತೆ, ಸೂಪರ್​ಮ್ಯಾನ್​ನಂತೆ ಗೋಚರಿಸುತ್ತಾರೆ. ಸಮಯಕ್ಕೆ ಸರಿಯಾಗಿ ಬಿಸಿಬಿಸಿ ತಿಂಡಿ ತಿನಿಸುಗಳನ್ನು ಮನೆಮನೆಗೆ ತಲುಪಿಸುವ ಇವರೂ ಮನುಷ್ಯರೇ. ಇವರಿಗೂ ಬಾಯಾರಿಕೆ, ಹಸಿವೆ ಎನ್ನುವುದಿದೆ ಮತ್ತು ತುಸು ಹೊತ್ತಾದರೂ ವಿಶ್ರಮಿಸಬೇಕು ಎನ್ನಿಸುತ್ತಿರುತ್ತದೆ. ಆದರೆ ಇವರ ಆಸರ ಬೇಸರವನ್ನು ಕೇಳುವವರು ಮತ್ತು ವಿಶ್ರಾಂತಿಗಾಗಿ ಅನುಕೂಲ ಕಲ್ಪಿಸುವವರು ಯಾರಿದ್ದಾರೆ? ಇದ್ದಾರೆ. ಇವರಿಗಾಗಿಯೇ ರಿಲ್ಯಾಕ್ಸ್ ಸ್ಟೇಷನ್ (Relax Station)​ ಶುರುಮಾಡಿದ ಸಿದ್ಧೇಶ ಲೋಕರೆ (Siddhesh Lokare) ಎಂಬ ಸೋಶಿಯಲ್ ಮೀಡಿಯಾ ಇನ್​​ಫ್ಲ್ಯೂಯೆನ್ಸರ್​ ಇದೀಗ ಸಾಮಾಜಿಕ ಜಾಲತಾಣಿಗರ ಮನಸೂರೆಗೊಳ್ಳುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Siddhesh Lokare??‍♂️ (@sidiously_)

”ಮಳೆಯಲ್ಲಿ ನೆನೆದುಕೊಂಡು ಕೆಲಸ ಮಾಡುತ್ತಿದ್ದ ಡೆಲಿವರಿ ಏಜೆಂಟರುಗಳನ್ನು ನೋಡಿ ಬೇಸರವಾಗುತ್ತಿತ್ತು. ಹಾಗಾಗಿ ಅವರು ದಣಿವಾರಿಸಿಕೊಳ್ಳಲು ಏನಾದರೂ ಮಾಡಬೇಕೆಂದಾಗ ಈ ಆಲೋಚನೆ ಹೊಳೆಯಿತು. ಸಮೋಸಾ, ಭಜ್ಜಿ ಮುಂತಾದ ತಿನಿಸುಗಳನ್ನು ಮತ್ತು ಚಹಾ, ಕಾಫಿ, ನೀರನ್ನು ಅವರಿಗೆ ಉಚಿತವಾಗಿ ಕೊಡುವುದೆಂದು ನಿರ್ಧರಿಸಿದೆ” ಎನ್ನುತ್ತಾರೆ ಮುಂಬೈನ ಸಿದ್ಧೇಶ.

ಇದನ್ನೂ ಓದಿ : Viral: ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ ಇಷ್ಟೇ!

ಈ ಪೋಸ್ಟ್​ ಅನ್ನು ಎರಡು ದಿನಗಳ ಹಿಂದೆ ಇನ್​ಸ್ಟಾನಲ್ಲಿ ಹಂಚಿಕೊಳ್ಳಲಾಗಿದೆ. 5 ಮಿಲಿಯನ್​ನಷ್ಟು ಮಂದಿ ಇದನ್ನು ನೋಡಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಇವರ ಈ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಖಂಡಿತ ಡೆಲಿವರಿ ಏಜೆಂಟರನ್ನು ನಾವು ಗೌರವಿಸಬೇಕು ಮತ್ತು ಅವರ ಅನುವು ಆಪತ್ತುಗಳಿಗೆ ಹೆಗಲು ಕೊಡಬೇಕು. ಕೊರೊನಾ ಸಮಯದಲ್ಲಿ ಇವರ ಸಹಾಯವನ್ನು ಮರೆಯುವಂತಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ.

ಇದನ್ನೂ ಓದಿ : Viral Video: ನನ್ನ ಈ ದೇಶವನ್ನು ಮತ್ತೆ ಕಟ್ಟುತ್ತೇನೆ; ನನಸಾದೀತೇ ಅಫ್ಘನ್ ಬಾಲೆಯ ಕನಸು?

ಡೆಲಿವರಿ ಏಜೆಂಟರುಗಳ ಬಗ್ಗೆ ನಮ್ಮ ಸರ್ಕಾರಗಳಂತೂ ಯೋಚಿಸುವುದಿಲ್ಲ, ಈ ಯುವಕನಾದರೂ ಕಾಳಜಿ ವಹಿಸುತ್ತಿದ್ದಾನಲ್ಲ, ಸರ್ಕಾರಕ್ಕಿಂತಲೂ ಈ ವ್ಯವಸ್ಥೆಯನ್ನು ಈತ ಚೆನ್ನಾಗಿ ಮಾಡುತ್ತಾನೆ ಎನ್ನುವ ಭರವಸೆ ಇದೆ ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:18 pm, Fri, 14 July 23

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು