Viral Video: ಬೆಳೆ ತಪಾಸಣೆಗೆ ಬಂದಿದ್ದ ಹುಲಿ; ಸದ್ಯ ಉತ್ತರಪ್ರದೇಶ, ಮುಂದೆ?

Tiger : ಉತ್ತರ ಪ್ರದೇಶದ ಪಿಲಿಭಿತ್​ ಹೊಲದಲ್ಲಿ ಈ ಹುಲಿ ತಿರುಗಾಡುತ್ತಿದೆ. ಅನತಿ ದೂರದಲ್ಲಿ ರೈತ ಹೊಲ ಉಳುತ್ತಿದ್ದಾನೆ. ಪಕ್ಕದ ಹೊಲದ ರೈತ ಈ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಹೇಗಿದೆ ನೋಡಿ ಈ ದೃಶ್ಯ...

Viral Video: ಬೆಳೆ ತಪಾಸಣೆಗೆ ಬಂದಿದ್ದ ಹುಲಿ; ಸದ್ಯ ಉತ್ತರಪ್ರದೇಶ, ಮುಂದೆ?
ಉತ್ತರ ಪ್ರದೇಶದ ಪಿಲಿಭಿತ್​ನ ಹೊಲದಲ್ಲಿ ಕಾಣಿಸಿಕೊಂಡ ಹುಲಿ
Follow us
|

Updated on: Jul 14, 2023 | 2:01 PM

Uttar Pradesh : ಭಾರೀ ಮಳೆಯಿಂದ ಹಳ್ಳಿಗಳು ಮುಳುಗೇಳುತ್ತಿವೆ, ಕೆಲವು ತೇಲುತ್ತಿವೆ. ಪಾಪ ರೈತ ಹೇಗಿದ್ದಾನೋ ಏನೋ ಎಂದು ನೋಡಲು ಈ ಹುಲಿರಾಯ ಇಲ್ಲಿ ಬಂದಿದ್ದಾನೋ ಏನೋ. ಇಂಥ ಮಳೆಯಲ್ಲಿ ರೈತನ ಬೆಳೆ ಏನಾಗಿದೆ, ಅವನ ಕುಟುಂಬಕ್ಕೇನಾದರೂ ಸಹಾಯ ಬೇಕೆ? ಎಂದುಕೊಂಡು ಘನಗಂಭೀರವಾದ ತಪಾಸಣೆಯಲ್ಲಿ ತೊಡಗಿದಂತಿದೆ ಇದು. ಈ ಟ್ವೀಟ್​ನ ಪ್ರಕಾರ ಈ ಹುಲಿ ಉತ್ತರ ಪ್ರದೇಶದ ಪಿಲಿಭಿತ್​ನ (Pilibhit) ಹೊಲದಲ್ಲಿ ಸುತ್ತಾಡಿಕೊಂಡಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗದಲ್ಲಿ ಸುತ್ತಾಡುತ್ತಿದೆ.

ಈ ಹುಲಿ ತನ್ನ ಪಾಡಿಗೆ ತಾನು ಸಾಗುತ್ತಿದೆ. ಅನತಿ ದೂರದಲ್ಲಿ ಟ್ರ್ಯಾಕ್ಟರ್​ ಮೂಲಕ ಈ ಹೊಲದ ರೈತ ಉಳುತ್ತಿದ್ದಾನೆ. ಇದನ್ನು ತನ್ನ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾನೆ ಪಕ್ಕದ ಹೊಲದ ರೈತ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು 1 ಲಕ್ಷಕ್ಕಿಂತಲೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. ಸುಮಾರು 500 ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ನನ್ನ ಈ ದೇಶವನ್ನು ಮತ್ತೆ ಕಟ್ಟುತ್ತೇನೆ; ನನಸಾದೀತೇ ಅಫ್ಘನ್ ಬಾಲೆಯ ಕನಸು?

ಈ ಹೊಲ ದುಧ್ವಾ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರಬೇಕು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳಿವೆ ಎಂದಿದ್ದಾರೆ ಒಬ್ಬರು. ಪಂಕಜ್ ತ್ರಿಪಾಠಿಯ Sherdil: The Pilibhit Saga ಚಿತ್ರವನ್ನು ನೆನಪಿಸಿತು ಎಂದು ಮತ್ತೊಬ್ಬರು ಹೇಳಿದ್ದಾರೆ. ಅರೆ ಅಲ್ಲಿ ಮಕ್ಕಳೂ ಇರಬೇಕಲ್ಲ? ತುಸು ಗಾಬರಿ ಮತ್ತು ಕಾಳಜಿಯಿಂದ ಹೇಳಿದ್ದಾರೆ ಮಗದೊಬ್ಬರು. ಮಾತಾರಾಣಿಯ ವಾಹನ ಎಂದು ಭಕ್ತಿಪರವಶತೆಯಿಂದ ಪ್ರತಿಕ್ರಿಯಿಸಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ನನ್ನ ಈ ದೇಶವನ್ನು ಮತ್ತೆ ಕಟ್ಟುತ್ತೇನೆ; ನನಸಾದೀತೇ ಅಫ್ಘನ್ ಬಾಲೆಯ ಕನಸು?

ಇದು ಉತ್ತರ ಪ್ರದೇಶ, ಯೋಗಿಯ ಹೆದರಿಕೆ ಇದೆ ಇಲ್ಲಿ, ಹೊಡೆದಾಟ ಮತ್ತು ಕೊಲೆಗೆ ಅವಕಾಶವೇ ಇಲ್ಲ ಇಲ್ಲಿ ಎಂದಿದ್ದಾರೆ ಇನ್ನೂ ಒಬ್ಬರು. ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಒಂದೆಡೆ ಇದು ಸಹಬಾಳ್ವೆಯ ಪ್ರಯತ್ನದಂತೆ ತೋರುತ್ತಿದೆ. ಇನ್ನೊಂದೆಡೆ ಮನುಷ್ಯರು ಇವುಗಳ ವಾಸಸ್ಥಾನವನ್ನು ಆಕ್ರಮಿಸಿಕೊಂಡ ಸೂಚನೆ ಸ್ಪಷ್ಟವಾಗಿ ಕಾಣುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಏನೂ ಸಿಗದಿದ್ದರೆ ಹುಲಿಯೂ ಹುಲ್ಲನ್ನೂ ತಿನ್ನುತ್ತದೆ ಎಂಬ ಗಾದೆ ನೆನಪಾಗುತ್ತಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು