Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?

Music : ಆ ಬಟ್ಟಲುಗಣ್ಣುಗಳು, ಗುಳಿಕೆನ್ನೆ ಮತ್ತು ಎಳೇಬೆರಳುಗಳಿಂದ ಪಕ್ವವಾಗಿ ಹೊಮ್ಮುವ ಆ ನಾದ ಆಹಾ... ಈ ವಾರಾಂತ್ಯಕ್ಕೆ ಇದಕ್ಕಿಂತ ನಶೆ ಬೇಕೆ? ಎಷ್ಟು ಸಲ ನೋಡುತ್ತೀರಿ ಮತ್ತು ಕೇಳುತ್ತೀರಿ ಈ ವಿಡಿಯೋ? ಲೆಕ್ಕ ಒಪ್ಪಿಸಿ!

Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?
ಕನುನ್​ ಎಂಬ ತಂತೀ ವಾದ್ಯ ನುಡಿಸುತ್ತಿರುವ ಬಾಲಕ
Follow us
ಶ್ರೀದೇವಿ ಕಳಸದ
|

Updated on: Jul 14, 2023 | 4:10 PM

Child Prodigy : ಎಳವೆಯೆಂದರೆ ನೀರಿನಂತೆ. ನೀವು ಯಾವ ಆಕಾರದ ಪಾತ್ರೆಗೆ ನೀರು ಹಾಕುತ್ತೀರೋ ಆ ಆಕಾರವನ್ನು ನೀರು ಪಡೆದುಕೊಳ್ಳುತ್ತದೆ. ಮಕ್ಕಳ ವಿಷಯದಲ್ಲಿಯೂ ಇದು ಅಷ್ಟೇ ಸತ್ಯ. ಇದೀಗ ಇಲ್ಲೊಬ್ಬ ಛೋಟಾ ಉಸ್ತಾದ್​ರನ್ನು ನಿಮಗಾಗಿ ಕರೆದುಕೊಂಡು ಬಂದಿದ್ದೇವೆ. ಇವರಿಗೆ ವಯಸ್ಸು ಆರರ ಮೇಲೆ ದಾಟಿರಲಿಕ್ಕಿಲ್ಲ. ಆದರೆ ಇವರು ವೃತ್ತಿಪರರಂತೆ ಈ ವಾದ್ಯವನ್ನು ನುಡಿಸುವುದನ್ನು ಕೇಳುತ್ತಿದ್ದರೆ, ಈಗಲೇ ಹೋಗಿ ಇವರನ್ನು ಕಿಡ್ನ್ಯಾಪ್​ (Kidnap) ಮಾಡಬೇಕು ಎಂದೆನಿಸದೇ ಇರದು!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Eduardo Ihidoype (@ihidoype_music)

ಮ್ಯೂಸಿಕ್​ ಪ್ರೊಡ್ಯೂಸರ್​ Eduardo Ihidoype ಈ ಛೋಟಾಉಸ್ತಾದನ ವಿಡಿಯೋ  ಹಂಚಿಕೊಂಡಿದ್ದಾರೆ. ಈ ತನಕ ಈ ವಿಡಿಯೋ ಅನ್ನು 1.8 ಲಕ್ಷ ಜನರು ಲೈಕ್ ಮಾಡಿದ್ದು, 4 ಮಿಲಿಯನ್​ಗಿಂತಲೂ ಹೆಚ್ಚು ಜನರು ಇದನ್ನು ಕೇಳಿ ಆನಂದಿಸಿದ್ದಾರೆ. ಸಾವಿರಾರು ಜನರು ಛೋಟೆ ಉಸ್ತಾದರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಇವರು ನಮಗೆ ಈ ವಾದ್ಯವನ್ನು ಕಲಿಸುತ್ತಾರೆಯೇ? ಎಂದು ಕೇಳಿದ್ದಾರೆ ಅನೇಕರು.

ಇದನ್ನೂ ಓದಿ : Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ

ಕನುನ್ (Qanun, Kanun) ಎಂದು ಕರೆಯುವ ಈ ವಾದ್ಯವನ್ನು ಭಾರತದಲ್ಲಿ ಸ್ವರಮಂಡಲವೆನ್ನುತ್ತಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರು ಈ ವಾದ್ಯವನ್ನು ನುಡಿಸಿಕೊಂಡು ಹಾಡುವ ಪದ್ಧತಿ ಇದೆ. ಈ ವಾದ್ಯದ ಮೂಲ ಈಜಿಪ್ತ್​ ಮತ್ತು ಸಿರಿಯಾ, 18ನೇ ಶತಮಾನದಲ್ಲಿ ಇದು ಬೆಳಕಿಗೆ ಬಂದಿತು ನಂತರ ಏಷ್ಯಾದಲ್ಲಿ ವಿಸ್ತರಿಸಿಕೊಂಡಿತು ಎನ್ನುತ್ತದೆ ಒಂದು ಮೂಲ. ಇನ್ನೊಂದು ಮೂಲದ ಪ್ರಕಾರ 10ನೇ ಶರಮಾನದಲ್ಲಿ ಅರಬ್ಬರು ಈ ವಾದ್ಯವನ್ನು ಶೋಧಿಸಿದರೆಂದು ಇದೆ.

ಇದನ್ನೂ ಓದಿ : Viral: ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ ಇಷ್ಟೇ! 

ನೆಟ್ಟಿಗರಂತೂ ಈ ಛೋಟೆ ಉಸ್ತಾದರ ನುಡಿಸಾಣಿಕೆಗೆ ಫಿದಾ ಆಗಿದ್ದಾರೆ, ನೀವು? ಆ ಬಟ್ಟಲುಗಣ್ಣುಗಳು,  ಗುಳಿಕೆನ್ನೆ ಮತ್ತು ಎಳೇಬೆರಳುಗಳಿಂದ ಪಕ್ವವಾಗಿ ಹೊಮ್ಮಿಸುವ ಆ ನಾದ ಆಹಾ… ಈ ವಾರಾಂತ್ಯಕ್ಕೆ ಇದಕ್ಕಿಂತ ನಶೆ ಬೇಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ