AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?

Music : ಆ ಬಟ್ಟಲುಗಣ್ಣುಗಳು, ಗುಳಿಕೆನ್ನೆ ಮತ್ತು ಎಳೇಬೆರಳುಗಳಿಂದ ಪಕ್ವವಾಗಿ ಹೊಮ್ಮುವ ಆ ನಾದ ಆಹಾ... ಈ ವಾರಾಂತ್ಯಕ್ಕೆ ಇದಕ್ಕಿಂತ ನಶೆ ಬೇಕೆ? ಎಷ್ಟು ಸಲ ನೋಡುತ್ತೀರಿ ಮತ್ತು ಕೇಳುತ್ತೀರಿ ಈ ವಿಡಿಯೋ? ಲೆಕ್ಕ ಒಪ್ಪಿಸಿ!

Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?
ಕನುನ್​ ಎಂಬ ತಂತೀ ವಾದ್ಯ ನುಡಿಸುತ್ತಿರುವ ಬಾಲಕ
ಶ್ರೀದೇವಿ ಕಳಸದ
|

Updated on: Jul 14, 2023 | 4:10 PM

Share

Child Prodigy : ಎಳವೆಯೆಂದರೆ ನೀರಿನಂತೆ. ನೀವು ಯಾವ ಆಕಾರದ ಪಾತ್ರೆಗೆ ನೀರು ಹಾಕುತ್ತೀರೋ ಆ ಆಕಾರವನ್ನು ನೀರು ಪಡೆದುಕೊಳ್ಳುತ್ತದೆ. ಮಕ್ಕಳ ವಿಷಯದಲ್ಲಿಯೂ ಇದು ಅಷ್ಟೇ ಸತ್ಯ. ಇದೀಗ ಇಲ್ಲೊಬ್ಬ ಛೋಟಾ ಉಸ್ತಾದ್​ರನ್ನು ನಿಮಗಾಗಿ ಕರೆದುಕೊಂಡು ಬಂದಿದ್ದೇವೆ. ಇವರಿಗೆ ವಯಸ್ಸು ಆರರ ಮೇಲೆ ದಾಟಿರಲಿಕ್ಕಿಲ್ಲ. ಆದರೆ ಇವರು ವೃತ್ತಿಪರರಂತೆ ಈ ವಾದ್ಯವನ್ನು ನುಡಿಸುವುದನ್ನು ಕೇಳುತ್ತಿದ್ದರೆ, ಈಗಲೇ ಹೋಗಿ ಇವರನ್ನು ಕಿಡ್ನ್ಯಾಪ್​ (Kidnap) ಮಾಡಬೇಕು ಎಂದೆನಿಸದೇ ಇರದು!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Eduardo Ihidoype (@ihidoype_music)

ಮ್ಯೂಸಿಕ್​ ಪ್ರೊಡ್ಯೂಸರ್​ Eduardo Ihidoype ಈ ಛೋಟಾಉಸ್ತಾದನ ವಿಡಿಯೋ  ಹಂಚಿಕೊಂಡಿದ್ದಾರೆ. ಈ ತನಕ ಈ ವಿಡಿಯೋ ಅನ್ನು 1.8 ಲಕ್ಷ ಜನರು ಲೈಕ್ ಮಾಡಿದ್ದು, 4 ಮಿಲಿಯನ್​ಗಿಂತಲೂ ಹೆಚ್ಚು ಜನರು ಇದನ್ನು ಕೇಳಿ ಆನಂದಿಸಿದ್ದಾರೆ. ಸಾವಿರಾರು ಜನರು ಛೋಟೆ ಉಸ್ತಾದರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಇವರು ನಮಗೆ ಈ ವಾದ್ಯವನ್ನು ಕಲಿಸುತ್ತಾರೆಯೇ? ಎಂದು ಕೇಳಿದ್ದಾರೆ ಅನೇಕರು.

ಇದನ್ನೂ ಓದಿ : Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ

ಕನುನ್ (Qanun, Kanun) ಎಂದು ಕರೆಯುವ ಈ ವಾದ್ಯವನ್ನು ಭಾರತದಲ್ಲಿ ಸ್ವರಮಂಡಲವೆನ್ನುತ್ತಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರು ಈ ವಾದ್ಯವನ್ನು ನುಡಿಸಿಕೊಂಡು ಹಾಡುವ ಪದ್ಧತಿ ಇದೆ. ಈ ವಾದ್ಯದ ಮೂಲ ಈಜಿಪ್ತ್​ ಮತ್ತು ಸಿರಿಯಾ, 18ನೇ ಶತಮಾನದಲ್ಲಿ ಇದು ಬೆಳಕಿಗೆ ಬಂದಿತು ನಂತರ ಏಷ್ಯಾದಲ್ಲಿ ವಿಸ್ತರಿಸಿಕೊಂಡಿತು ಎನ್ನುತ್ತದೆ ಒಂದು ಮೂಲ. ಇನ್ನೊಂದು ಮೂಲದ ಪ್ರಕಾರ 10ನೇ ಶರಮಾನದಲ್ಲಿ ಅರಬ್ಬರು ಈ ವಾದ್ಯವನ್ನು ಶೋಧಿಸಿದರೆಂದು ಇದೆ.

ಇದನ್ನೂ ಓದಿ : Viral: ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ ಇಷ್ಟೇ! 

ನೆಟ್ಟಿಗರಂತೂ ಈ ಛೋಟೆ ಉಸ್ತಾದರ ನುಡಿಸಾಣಿಕೆಗೆ ಫಿದಾ ಆಗಿದ್ದಾರೆ, ನೀವು? ಆ ಬಟ್ಟಲುಗಣ್ಣುಗಳು,  ಗುಳಿಕೆನ್ನೆ ಮತ್ತು ಎಳೇಬೆರಳುಗಳಿಂದ ಪಕ್ವವಾಗಿ ಹೊಮ್ಮಿಸುವ ಆ ನಾದ ಆಹಾ… ಈ ವಾರಾಂತ್ಯಕ್ಕೆ ಇದಕ್ಕಿಂತ ನಶೆ ಬೇಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ