Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?

Music : ಆ ಬಟ್ಟಲುಗಣ್ಣುಗಳು, ಗುಳಿಕೆನ್ನೆ ಮತ್ತು ಎಳೇಬೆರಳುಗಳಿಂದ ಪಕ್ವವಾಗಿ ಹೊಮ್ಮುವ ಆ ನಾದ ಆಹಾ... ಈ ವಾರಾಂತ್ಯಕ್ಕೆ ಇದಕ್ಕಿಂತ ನಶೆ ಬೇಕೆ? ಎಷ್ಟು ಸಲ ನೋಡುತ್ತೀರಿ ಮತ್ತು ಕೇಳುತ್ತೀರಿ ಈ ವಿಡಿಯೋ? ಲೆಕ್ಕ ಒಪ್ಪಿಸಿ!

Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?
ಕನುನ್​ ಎಂಬ ತಂತೀ ವಾದ್ಯ ನುಡಿಸುತ್ತಿರುವ ಬಾಲಕ
Follow us
|

Updated on: Jul 14, 2023 | 4:10 PM

Child Prodigy : ಎಳವೆಯೆಂದರೆ ನೀರಿನಂತೆ. ನೀವು ಯಾವ ಆಕಾರದ ಪಾತ್ರೆಗೆ ನೀರು ಹಾಕುತ್ತೀರೋ ಆ ಆಕಾರವನ್ನು ನೀರು ಪಡೆದುಕೊಳ್ಳುತ್ತದೆ. ಮಕ್ಕಳ ವಿಷಯದಲ್ಲಿಯೂ ಇದು ಅಷ್ಟೇ ಸತ್ಯ. ಇದೀಗ ಇಲ್ಲೊಬ್ಬ ಛೋಟಾ ಉಸ್ತಾದ್​ರನ್ನು ನಿಮಗಾಗಿ ಕರೆದುಕೊಂಡು ಬಂದಿದ್ದೇವೆ. ಇವರಿಗೆ ವಯಸ್ಸು ಆರರ ಮೇಲೆ ದಾಟಿರಲಿಕ್ಕಿಲ್ಲ. ಆದರೆ ಇವರು ವೃತ್ತಿಪರರಂತೆ ಈ ವಾದ್ಯವನ್ನು ನುಡಿಸುವುದನ್ನು ಕೇಳುತ್ತಿದ್ದರೆ, ಈಗಲೇ ಹೋಗಿ ಇವರನ್ನು ಕಿಡ್ನ್ಯಾಪ್​ (Kidnap) ಮಾಡಬೇಕು ಎಂದೆನಿಸದೇ ಇರದು!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Eduardo Ihidoype (@ihidoype_music)

ಮ್ಯೂಸಿಕ್​ ಪ್ರೊಡ್ಯೂಸರ್​ Eduardo Ihidoype ಈ ಛೋಟಾಉಸ್ತಾದನ ವಿಡಿಯೋ  ಹಂಚಿಕೊಂಡಿದ್ದಾರೆ. ಈ ತನಕ ಈ ವಿಡಿಯೋ ಅನ್ನು 1.8 ಲಕ್ಷ ಜನರು ಲೈಕ್ ಮಾಡಿದ್ದು, 4 ಮಿಲಿಯನ್​ಗಿಂತಲೂ ಹೆಚ್ಚು ಜನರು ಇದನ್ನು ಕೇಳಿ ಆನಂದಿಸಿದ್ದಾರೆ. ಸಾವಿರಾರು ಜನರು ಛೋಟೆ ಉಸ್ತಾದರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಇವರು ನಮಗೆ ಈ ವಾದ್ಯವನ್ನು ಕಲಿಸುತ್ತಾರೆಯೇ? ಎಂದು ಕೇಳಿದ್ದಾರೆ ಅನೇಕರು.

ಇದನ್ನೂ ಓದಿ : Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ

ಕನುನ್ (Qanun, Kanun) ಎಂದು ಕರೆಯುವ ಈ ವಾದ್ಯವನ್ನು ಭಾರತದಲ್ಲಿ ಸ್ವರಮಂಡಲವೆನ್ನುತ್ತಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರು ಈ ವಾದ್ಯವನ್ನು ನುಡಿಸಿಕೊಂಡು ಹಾಡುವ ಪದ್ಧತಿ ಇದೆ. ಈ ವಾದ್ಯದ ಮೂಲ ಈಜಿಪ್ತ್​ ಮತ್ತು ಸಿರಿಯಾ, 18ನೇ ಶತಮಾನದಲ್ಲಿ ಇದು ಬೆಳಕಿಗೆ ಬಂದಿತು ನಂತರ ಏಷ್ಯಾದಲ್ಲಿ ವಿಸ್ತರಿಸಿಕೊಂಡಿತು ಎನ್ನುತ್ತದೆ ಒಂದು ಮೂಲ. ಇನ್ನೊಂದು ಮೂಲದ ಪ್ರಕಾರ 10ನೇ ಶರಮಾನದಲ್ಲಿ ಅರಬ್ಬರು ಈ ವಾದ್ಯವನ್ನು ಶೋಧಿಸಿದರೆಂದು ಇದೆ.

ಇದನ್ನೂ ಓದಿ : Viral: ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ ಇಷ್ಟೇ! 

ನೆಟ್ಟಿಗರಂತೂ ಈ ಛೋಟೆ ಉಸ್ತಾದರ ನುಡಿಸಾಣಿಕೆಗೆ ಫಿದಾ ಆಗಿದ್ದಾರೆ, ನೀವು? ಆ ಬಟ್ಟಲುಗಣ್ಣುಗಳು,  ಗುಳಿಕೆನ್ನೆ ಮತ್ತು ಎಳೇಬೆರಳುಗಳಿಂದ ಪಕ್ವವಾಗಿ ಹೊಮ್ಮಿಸುವ ಆ ನಾದ ಆಹಾ… ಈ ವಾರಾಂತ್ಯಕ್ಕೆ ಇದಕ್ಕಿಂತ ನಶೆ ಬೇಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು