AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಹೆಂಡತಿಯನ್ನು 7 ವರ್ಷದ ನಂತರ ಆಕೆಯ ಬಾಯ್​ಫ್ರೆಂಡ್​​ಗೆ ಮದುವೆ ಮಾಡಿಸಿಕೊಟ್ಟ ಗಂಡ; ಇದು ಸಿನಿಮಾ ಅಲ್ಲ, ರಿಯಲ್​

ಇಂಥ ಒಂದು ವಿಚಿತ್ರ ಮದುವೆ ನಡೆಯುತ್ತಿದೆ ಎಂದು ಸುದ್ದಿ ಹಬ್ಬುತ್ತಿದ್ದಂತೆಯೇ ನೂರಾರು ಜನರು ಆ ಮದುವೆ ನೋಡಲು ಬಂದು ಜಮಾಯಿಸಿದರು. ದೇವಸ್ಥಾನದಲ್ಲಿ ಸಪ್ನಾ ಕುಮಾರಿ ಮತ್ತು ರಾಜು ಕುಮಾರ್​ ವಿವಾಹ ನೆರವೇರಿಸಲಾಯಿತು.

ತನ್ನ ಹೆಂಡತಿಯನ್ನು 7 ವರ್ಷದ ನಂತರ ಆಕೆಯ ಬಾಯ್​ಫ್ರೆಂಡ್​​ಗೆ ಮದುವೆ ಮಾಡಿಸಿಕೊಟ್ಟ ಗಂಡ; ಇದು ಸಿನಿಮಾ ಅಲ್ಲ, ರಿಯಲ್​
‘ಹಮ್ ದಿಲ್ ದೇ ಚುಕೇ ಸನಮ್’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Apr 27, 2021 | 12:19 PM

Share

ಪ್ರೀತಿ ಕುರುಡು ಅಂತಾರೆ. ಅದು ಏನನ್ನು ಬೇಕಾದರೂ ಮಾಡಿಸುತ್ತದೆ. ಪ್ರೀತಿ ನಿಜವೇ ಆಗಿದ್ದರೆ ಪ್ರೇಮಿಗಳು ಎಷ್ಟೇ ದೂರ ಇದ್ದರೂ ಕೂಡ ಒಂದಾಗುತ್ತಾರೆ. ಬೇರೆ ಯಾರೂ ಕೂಡ ಅವರನ್ನು ತಡೆಯಲಾರರು. ಆದರೆ ಇಂಥ ಮಾತುಗಳನ್ನು ಸಿನಿಮಾದಲ್ಲಿ ಹೇಳಿದರೆ ಕೇಳಬಹುದು. ನಿಜ ಜೀವನದಲ್ಲಿ ಸ್ವಲ್ಪ ಕಷ್ಟ. ಆದರೂ ಇಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ತನ್ನ ಹೆಂಡತಿಯನ್ನು ಬರೋಬ್ಬರಿ 7 ವರ್ಷಗಳ ಬಳಿಕ ಆಕೆಯ ಬಾಯ್​ಫ್ರೆಂಡ್​ ಜೊತೆಗೆ ಮದುವೆ ಮಾಡಿಸಿಕೊಟ್ಟಿದ್ದಾನೆ ಪತಿರಾಯ!

ಈ ಘಟನೆ ನಡೆದಿರುವುದು ಬಿಹಾರದಲ್ಲಿ. ಇದನ್ನು ನೋಡುತ್ತಿದ್ದರೆ ಬಾಲಿವುಡ್​ನ ‘ಹಮ್​ ದಿಲ್​ ದೇ ಚುಕೇ ಸನಮ್​’ ಸಿನಿಮಾ ನೆನಪಾಗುತ್ತದೆ. ಆ ಸಿನಿಮಾದಲ್ಲಿ ಅಜಯ್​ ದೇವಗನ್​ ಮತ್ತು ಐಶ್ವರ್ಯಾ ರೈ ಗಂಡ-ಹೆಂಡತಿ ಆಗಿರುತ್ತಾರೆ. ಆದರೆ ಐಶ್ವರ್ಯಾ ಮನಸ್ಸು ಪ್ರಿಯಕರ ಸಲ್ಮಾನ್​ ಖಾನ್​ಗಾಗಿ ಪರಿತಪಿಸುತ್ತ ಇರುತ್ತದೆ. ಹಾಗಾಗಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನ ಜೊತೆಗೆ ಮರಳಿ ಸೇರಿದಲು ಅಜಯ್​ ದೇವಗನ್​ ಪ್ರಯತ್ನಿಸುತ್ತಾರೆ. ಈ ಘಟನೆ ಈಗ ರಿಯಲ್​ ಆಗಿ ನಡೆದಿದೆ.

ಬಿಹಾರದಲ್ಲಿ ಸಪ್ನಾ ಕುಮಾರಿ ಮತ್ತು ಉತ್ತಮ್​ ಮಂಡಲ್​ ಎಂಬುವವರು ಮದುವೆ ಆಗಿದ್ದರು. ಇಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಸಾಗುತ್ತಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ರಾಜು​ ಕುಮಾರ್​ ಎಂಬ ಯುವಕನನ್ನು ಸಪ್ನಾ ಪ್ರೀತಿಸುತ್ತಿದ್ದರು! ಈ ವಿಚಾರ ಆಕೆಯ ಗಂಡ ಉತ್ತಮ್​ಗೆ ತಿಳಿದ ಬಳಿಕ ಸಂಸಾರದಲ್ಲಿ ಬಿರುಗಾಳಿ ಎದ್ದಿತು. ಪ್ರತಿದಿನ ಅವರ ನಡುವೆ ಜಗಳ ಆಗುತ್ತಿತ್ತು. ಏನು ಮಾಡಿದರೂ ತನ್ನ ಹೆಂಡತಿಯು ಪ್ರಿಯಕರನ ಗುಂಗಿನಿಂದ ಹೊರಬರುವುದಿಲ್ಲ ಎಂದು ಗೊತ್ತಾಗ ಬಳಿಕ ಉತ್ತಮ್​ ಮಂಡಲ್​ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡರು.

ತನ್ನ ಹೆಂಡತಿಯನ್ನು ಆಕೆಯ ಬಾಯ್​ಫ್ರೆಂಡ್​ ಜೊತೆಗೆ ಮದುವೆ ಮಾಡಿಸಿಬಿಡುವುದೇ ಉತ್ತಮ ಎಂದು ಉತ್ತಮ್​ ಮಂಡಲ್​ ತೀರ್ಮಾನಿಸಿದರು. ಸಮೀಪದ ದೇವಸ್ಥಾನದಲ್ಲಿ ಸಪ್ನಾ ಕುಮಾರಿ ಮತ್ತು ರಾಜು ಕುಮಾರ್​ ವಿವಾಹ ನೆರವೇರಿಸಲಾಯಿತು. ಇಂಥ ಒಂದು ವಿಚಿತ್ರ ಮದುವೆ ನಡೆಯುತ್ತಿದೆ ಎಂದು ಸುದ್ದಿ ಹಬ್ಬುತ್ತಿದ್ದಂತೆಯೇ ನೂರಾರು ಜನರು ಆ ಮದುವೆ ನೋಡಲು ಬಂದು ಜಮಾಯಿಸಿದರು. ತನ್ನ ಪತ್ನಿಯನ್ನು ಆಕೆಯ ಬಾಯ್​ಫ್ರೆಂಡ್​ಗೆ ಬಿಟ್ಟುಕೊಟ್ಟ ಬಳಿಕ ಆಶೀರ್ವಾದ ಮಾಡಿದ ಉತ್ತಮ್​ ಮಂಡಲ್​ ಅವರು ‘ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚಯ ಆಗಿರುತ್ತವೆ’ ಅಂತ ಹೇಳಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಸ್ಟಾರ್ ನಟಿಗೆ ಮೋಸ; ಲಾಕ್​​ಡೌನ್ ವೇಳೆ ಹೊರಬಿತ್ತು ಎರಡನೇ ಗಂಡನ ಅನೈತಿಕ ಸಂಬಂಧ

ರಕ್ಷಿತ್​ ಶೆಟ್ಟಿ ಜೊತೆ ರಮ್ಯಾ ಮದುವೆ ಆಗ್ಬೇಕು; ಫ್ಯಾನ್ಸ್​ ಬಯಕೆಗೆ ಉತ್ತರ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್​

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!