Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಹೆಂಡತಿಯನ್ನು 7 ವರ್ಷದ ನಂತರ ಆಕೆಯ ಬಾಯ್​ಫ್ರೆಂಡ್​​ಗೆ ಮದುವೆ ಮಾಡಿಸಿಕೊಟ್ಟ ಗಂಡ; ಇದು ಸಿನಿಮಾ ಅಲ್ಲ, ರಿಯಲ್​

ಇಂಥ ಒಂದು ವಿಚಿತ್ರ ಮದುವೆ ನಡೆಯುತ್ತಿದೆ ಎಂದು ಸುದ್ದಿ ಹಬ್ಬುತ್ತಿದ್ದಂತೆಯೇ ನೂರಾರು ಜನರು ಆ ಮದುವೆ ನೋಡಲು ಬಂದು ಜಮಾಯಿಸಿದರು. ದೇವಸ್ಥಾನದಲ್ಲಿ ಸಪ್ನಾ ಕುಮಾರಿ ಮತ್ತು ರಾಜು ಕುಮಾರ್​ ವಿವಾಹ ನೆರವೇರಿಸಲಾಯಿತು.

ತನ್ನ ಹೆಂಡತಿಯನ್ನು 7 ವರ್ಷದ ನಂತರ ಆಕೆಯ ಬಾಯ್​ಫ್ರೆಂಡ್​​ಗೆ ಮದುವೆ ಮಾಡಿಸಿಕೊಟ್ಟ ಗಂಡ; ಇದು ಸಿನಿಮಾ ಅಲ್ಲ, ರಿಯಲ್​
‘ಹಮ್ ದಿಲ್ ದೇ ಚುಕೇ ಸನಮ್’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Apr 27, 2021 | 12:19 PM

ಪ್ರೀತಿ ಕುರುಡು ಅಂತಾರೆ. ಅದು ಏನನ್ನು ಬೇಕಾದರೂ ಮಾಡಿಸುತ್ತದೆ. ಪ್ರೀತಿ ನಿಜವೇ ಆಗಿದ್ದರೆ ಪ್ರೇಮಿಗಳು ಎಷ್ಟೇ ದೂರ ಇದ್ದರೂ ಕೂಡ ಒಂದಾಗುತ್ತಾರೆ. ಬೇರೆ ಯಾರೂ ಕೂಡ ಅವರನ್ನು ತಡೆಯಲಾರರು. ಆದರೆ ಇಂಥ ಮಾತುಗಳನ್ನು ಸಿನಿಮಾದಲ್ಲಿ ಹೇಳಿದರೆ ಕೇಳಬಹುದು. ನಿಜ ಜೀವನದಲ್ಲಿ ಸ್ವಲ್ಪ ಕಷ್ಟ. ಆದರೂ ಇಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ತನ್ನ ಹೆಂಡತಿಯನ್ನು ಬರೋಬ್ಬರಿ 7 ವರ್ಷಗಳ ಬಳಿಕ ಆಕೆಯ ಬಾಯ್​ಫ್ರೆಂಡ್​ ಜೊತೆಗೆ ಮದುವೆ ಮಾಡಿಸಿಕೊಟ್ಟಿದ್ದಾನೆ ಪತಿರಾಯ!

ಈ ಘಟನೆ ನಡೆದಿರುವುದು ಬಿಹಾರದಲ್ಲಿ. ಇದನ್ನು ನೋಡುತ್ತಿದ್ದರೆ ಬಾಲಿವುಡ್​ನ ‘ಹಮ್​ ದಿಲ್​ ದೇ ಚುಕೇ ಸನಮ್​’ ಸಿನಿಮಾ ನೆನಪಾಗುತ್ತದೆ. ಆ ಸಿನಿಮಾದಲ್ಲಿ ಅಜಯ್​ ದೇವಗನ್​ ಮತ್ತು ಐಶ್ವರ್ಯಾ ರೈ ಗಂಡ-ಹೆಂಡತಿ ಆಗಿರುತ್ತಾರೆ. ಆದರೆ ಐಶ್ವರ್ಯಾ ಮನಸ್ಸು ಪ್ರಿಯಕರ ಸಲ್ಮಾನ್​ ಖಾನ್​ಗಾಗಿ ಪರಿತಪಿಸುತ್ತ ಇರುತ್ತದೆ. ಹಾಗಾಗಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನ ಜೊತೆಗೆ ಮರಳಿ ಸೇರಿದಲು ಅಜಯ್​ ದೇವಗನ್​ ಪ್ರಯತ್ನಿಸುತ್ತಾರೆ. ಈ ಘಟನೆ ಈಗ ರಿಯಲ್​ ಆಗಿ ನಡೆದಿದೆ.

ಬಿಹಾರದಲ್ಲಿ ಸಪ್ನಾ ಕುಮಾರಿ ಮತ್ತು ಉತ್ತಮ್​ ಮಂಡಲ್​ ಎಂಬುವವರು ಮದುವೆ ಆಗಿದ್ದರು. ಇಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಸಾಗುತ್ತಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ರಾಜು​ ಕುಮಾರ್​ ಎಂಬ ಯುವಕನನ್ನು ಸಪ್ನಾ ಪ್ರೀತಿಸುತ್ತಿದ್ದರು! ಈ ವಿಚಾರ ಆಕೆಯ ಗಂಡ ಉತ್ತಮ್​ಗೆ ತಿಳಿದ ಬಳಿಕ ಸಂಸಾರದಲ್ಲಿ ಬಿರುಗಾಳಿ ಎದ್ದಿತು. ಪ್ರತಿದಿನ ಅವರ ನಡುವೆ ಜಗಳ ಆಗುತ್ತಿತ್ತು. ಏನು ಮಾಡಿದರೂ ತನ್ನ ಹೆಂಡತಿಯು ಪ್ರಿಯಕರನ ಗುಂಗಿನಿಂದ ಹೊರಬರುವುದಿಲ್ಲ ಎಂದು ಗೊತ್ತಾಗ ಬಳಿಕ ಉತ್ತಮ್​ ಮಂಡಲ್​ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡರು.

ತನ್ನ ಹೆಂಡತಿಯನ್ನು ಆಕೆಯ ಬಾಯ್​ಫ್ರೆಂಡ್​ ಜೊತೆಗೆ ಮದುವೆ ಮಾಡಿಸಿಬಿಡುವುದೇ ಉತ್ತಮ ಎಂದು ಉತ್ತಮ್​ ಮಂಡಲ್​ ತೀರ್ಮಾನಿಸಿದರು. ಸಮೀಪದ ದೇವಸ್ಥಾನದಲ್ಲಿ ಸಪ್ನಾ ಕುಮಾರಿ ಮತ್ತು ರಾಜು ಕುಮಾರ್​ ವಿವಾಹ ನೆರವೇರಿಸಲಾಯಿತು. ಇಂಥ ಒಂದು ವಿಚಿತ್ರ ಮದುವೆ ನಡೆಯುತ್ತಿದೆ ಎಂದು ಸುದ್ದಿ ಹಬ್ಬುತ್ತಿದ್ದಂತೆಯೇ ನೂರಾರು ಜನರು ಆ ಮದುವೆ ನೋಡಲು ಬಂದು ಜಮಾಯಿಸಿದರು. ತನ್ನ ಪತ್ನಿಯನ್ನು ಆಕೆಯ ಬಾಯ್​ಫ್ರೆಂಡ್​ಗೆ ಬಿಟ್ಟುಕೊಟ್ಟ ಬಳಿಕ ಆಶೀರ್ವಾದ ಮಾಡಿದ ಉತ್ತಮ್​ ಮಂಡಲ್​ ಅವರು ‘ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚಯ ಆಗಿರುತ್ತವೆ’ ಅಂತ ಹೇಳಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಸ್ಟಾರ್ ನಟಿಗೆ ಮೋಸ; ಲಾಕ್​​ಡೌನ್ ವೇಳೆ ಹೊರಬಿತ್ತು ಎರಡನೇ ಗಂಡನ ಅನೈತಿಕ ಸಂಬಂಧ

ರಕ್ಷಿತ್​ ಶೆಟ್ಟಿ ಜೊತೆ ರಮ್ಯಾ ಮದುವೆ ಆಗ್ಬೇಕು; ಫ್ಯಾನ್ಸ್​ ಬಯಕೆಗೆ ಉತ್ತರ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್​

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್