AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಹೆಲ್ಮೆಟ್​ದೇವೋಭವ! ಈತ ಒಂದಲ್ಲ, ಎರಡು ಸಲ ಬದುಕಿದ ಕ್ಷಣಾರ್ಧದಲ್ಲಿ

Accident : ಫುಲ್ ಹೆಲ್ಮೆಟ್​ ಇಲ್ಲದಿದ್ದರೆ ಖಂಡಿತ ಈತ ಬದುಕುಳಿಯುತ್ತಿರಲಿಲ್ಲ. ದೆಹಲಿ ಪೊಲೀಸರು ಟ್ವೀಟ್ ಮಾಡಿದ ಈ ವಿಡಿಯೋ ಅನ್ನು 9 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ.

Viral Video : ಹೆಲ್ಮೆಟ್​ದೇವೋಭವ! ಈತ ಒಂದಲ್ಲ, ಎರಡು ಸಲ ಬದುಕಿದ ಕ್ಷಣಾರ್ಧದಲ್ಲಿ
ಹೆಲ್ಮೆಟ್​ ಇದ್ದಿದ್ದಕ್ಕೆ ಬಚಾವ್
TV9 Web
| Updated By: ಶ್ರೀದೇವಿ ಕಳಸದ|

Updated on:Sep 16, 2022 | 12:50 PM

Share

Viral Video : ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಫುಲ್ ಹೆಲ್ಮೆಟ್​ಗಳನ್ನು ಧರಿಸುವುದರಿಂದ ಶೇ. 64ರಷ್ಟು ತೀವ್ರ ಗಾಯಗಳಿಂದಾಗುವ ಮರಣ ಮತ್ತು ಶೇ. 74 ರಷ್ಟು ಮೆದುಳಿಗೆ ಆಗುವ ಗಾಯಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ಇಲ್ಲಿ ಪ್ರಸ್ತುಪಡಿಸುತ್ತಿರುವುದರ ಹಿನ್ನೆಲೆ, ಇಲ್ಲಿರುವ ವಿಡಿಯೋ ನೋಡಿದ ಮೇಲೆ ತಿಳಿಯುತ್ತದೆ.  ದೆಹಲಿ ಪೊಲೀಸರು ಟ್ವೀಟ್​ ಮಾಡಿರುವ ಅಪಘಾತದ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾರು ಮತ್ತು ಬೀದಿದೀಪದ ನಡುವೆ ರಭಸದಿಂದ ಹಾಯ್ದು ಹೋಗುವ ಬೈಕ್ ಸವಾರನೊಬ್ಬ ಅಪಘಾತಕ್ಕೆ ಈಡಾಗುತ್ತಾನೆ.  ಕ್ಷಣ ಮಾತ್ರದಲ್ಲಿ ಎರಡು ಸಲ ಅಪಘಾತಕ್ಕೆ ಒಳಗಾದರೂ ಬದುಕುಳಿಯುತ್ತಾನೆ!

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೆಲ್ಮೆಟ್ ಧರಿಸುವುದರಿಂದ ಒಮ್ಮೆ, ಎರಡು, ಮೂರು ಮತ್ತು ಅನೇಕ ಬಾರಿ ಜೀವ ಉಳಿಸಿಕೊಳ್ಳಬಹುದಾಗಿದೆ ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತದೆ. 15 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಕಾರಿನಿಂದ ತಪ್ಪಿಸಿಕೊಂಡು ಹೋದ ಬೈಕ್​ ಸವಾರ ಮೊದಲು ಡಿವೈಡರ್​ಗೆ ಅಪ್ಪಳಿಸುತ್ತಾನೆ. ನಂತರ ಎದ್ದೇಳುತ್ತಿದ್ದಂತೆ ಬೀದಿದೀಪ ನೇರ ಅವನ ತಲೆಗೇ ಅಪ್ಪಳಿಸುತ್ತದೆ. ಹೀಗೆ ಕ್ಷಣಾರ್ಧದಲ್ಲಿ ತಲೆಗೆ ಬಲವಾಗಿ ಎರಡು ಹೊಡೆತಗಳು ಬಿದ್ದರೂ ಈತ ಬದುಕುಳಿಯುತ್ತಾನೆ ಎಂದರೆ ಅದು ಅವನು ಧರಿಸಿದ ಫುಲ್​ ಹೆಲ್ಮೆಟ್​ನಿಂದಾಗಿ.

ಈ ವಿಡಿಯೋ ಅನ್ನು 9 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 33,000ಕ್ಕೂ ಹೆಚ್ಚು ಲೈಕ್ಸ್​ ಮತ್ತು 6,000ಕ್ಕೂ ಹೆಚ್ಚು ರೀಟ್ವೀಟ್​ ಆಗಿದೆ.

ನೆನಪಿರಲಿ ಫುಲ್​ ಹೆಲ್ಮೆಟ್​ ಧರಿಸುವುದು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:45 pm, Fri, 16 September 22

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ