AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷ್ ಏರ್​ವೇಸ್​​ ಪ್ರಯಾಣಿಕರ ಊಟದಲ್ಲಿ ಕೃತಕ ಹಲ್ಲು ಪತ್ತೆ

British Airways : ‘ಅಕ್ಟೋಬರ್ 25ರಂದು ಲಂಡನ್​ನಿಂದ ನಾನು ದುಬೈಗೆ ಪ್ರಯಾಣಿಸುತ್ತಿದ್ಧಾಗ ನೀವು ಕೊಟ್ಟ ಊಟದಲ್ಲಿ ಈ ಕೃತಕ ಹಲ್ಲು ಕಾಣಿಸಿಕೊಂಡಿದೆ. ಇದು ನನ್ನ ಹಲ್ಲು ಅಲ್ಲ, ನನ್ನ ಹಲ್ಲುಗಳೆಲ್ಲವೂ ಸುಸ್ಥಿತಿಯಲ್ಲಿವೆ’ ಎಂದಿದ್ದಾರೆ ಆಕೆ.

ಬ್ರಿಟಿಷ್ ಏರ್​ವೇಸ್​​ ಪ್ರಯಾಣಿಕರ ಊಟದಲ್ಲಿ ಕೃತಕ ಹಲ್ಲು ಪತ್ತೆ
ಬ್ರಿಟಿಷ್ ಏರ್​ವೇಸ್ ಪೂರಿಸಿದ ಊಟದಲ್ಲಿ ಪ್ರಯಾಣಿಕರಿಗೆ ಸಿಕ್ಕ ಕೃತಕ ಹಲ್ಲು
TV9 Web
| Edited By: ಶ್ರೀದೇವಿ ಕಳಸದ|

Updated on:Dec 10, 2022 | 2:24 PM

Share

Viral : ವಿಮಾನದಲ್ಲಿ ಪೂರೈಸುವ ಆಹಾರ ಎಲ್ಲವೂ ಶುದ್ಧವಾಗಿರುತ್ತದೆ ಎಂಬ ಭ್ರಮೆಯನ್ನು ಆಗಾಗ ಇಂಥ ವರದಿಗಳು ಕಳಚುತ್ತವೆ. ಇದೀಗ ವೈರಲ್ ಆಗಿರುವ ಈ ವರದಿಯ ಪ್ರಕಾರ, ಬ್ರಿಟಿಷ್​ ಏರ್​ವೇಸ್​ನ ಪ್ರಯಾಣಿಕರಿಗೆ ಏರ್​ವೇಸ್​ ಪೂರೈಸಿದ ಊಟದಲ್ಲಿ ಕೃತಕ ಹಲ್ಲೊಂದು ಪತ್ತೆಯಾಗಿದೆ. ಇದರಿಂದ ವಿಚಲಿತರಾದ ಪ್ರಯಾಣಿಕರು @British_Airways ಟ್ಯಾಗ್​ ಮಾಡಿ ಫೋಟೋ ಟ್ವೀಟ್ ಮಾಡಿದ್ದಾರೆ.

‘ಅಕ್ಟೋಬರ್ 25ರಂದು BA107 ಲಂಡನ್​ನಿಂದ ದುಬೈಗೆ ಪ್ರಯಾಣಿಸುವಾಗ ನೀವು ಕೊಟ್ಟ ಊಟದಲ್ಲಿ ಈ ಕೃತಕ ಹಲ್ಲು ಕಾಣಿಸಿಕೊಂಡಿದೆ (ಇದು ನನ್ನ ಹಲ್ಲು ಅಲ್ಲ, ನನ್ನ ಹಲ್ಲುಗಳೆಲ್ಲವೂ ಸುಸ್ಥಿತಿಯಲ್ಲಿವೆ). ಇದನ್ನು ನೋಡಿ ನಿಜಕ್ಕೂ ನನಗೆ ಭಯವಾಗಿದೆ. ಕಾಲ್​ ಸೆಂಟರ್​ಗೆ ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇದ್ದೇನೆ, ಸಾಧ್ಯವಾಗುತ್ತಿಲ್ಲ’ ಎಂದು ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಎಂಟು ತಾಸಿನ ವಿಮಾನ ಪ್ರಯಾಣದಲ್ಲಿ ಈ ಮಗು ಅವರಿಗೆಲ್ಲ ದುಃಸ್ವಪ್ನದಂತೆ ಕಾಡಿತೆ?

‘ಈ ವಿಷಯವಾಗಿ ನಿಜವಾಗಲೂ ವಿಷಾದಿಸುತ್ತೇವೆ’ ಎಂದು ತಕ್ಷಣವೇ ಟ್ವೀಟ್ ಮೂಲಕ ಉತ್ತರಿಸಿದೆ ಬ್ರಿಟೀಷ್ ಏರ್​ವೇಸ್. ಅನ್ನ ಮತ್ತು ತರಕಾರಿಯುಳ್ಳ ಊಟದಲ್ಲಿ ಈ ಹಲ್ಲು ಪತ್ತೆಯಾಗಿದೆ. ಈ ಮಹಿಳೆ ಟ್ವೀಟ್ ಮಾಡುತ್ತಿದ್ದಂತೆ ಏರ್​ವೇಸ್​ ಆಕೆಯ ವಿವರಗಳನ್ನು ಪಡೆದುಕೊಂಡು ಕ್ಷಮೆ ಕೇಳಿದೆ. ಈ ಕುರಿತು ಅವಶ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ

ನೆಟ್ಟಿಗರು ಈ ಪೋಸ್ಟ್​ ನೋಡಿ ಎಂಥ ಅಸಹ್ಯವಿದು ಎನ್ನುತ್ತಿದ್ದಾರೆ. ನಾನು ಡೆಂಟಲ್​ ಇಂಪ್ಲ್ಯಾಂಟ್​ ಸ್ಪೆಷಲಿಸ್ಟ್ ಈ ಪ್ರಕರಣದ ಬಗ್ಗೆ ನನಗೆ ನಿಜಕ್ಕೂ ಕುತೂಹಲವಿದೆ ಎಂದಿದ್ದಾರೆ ಒಬ್ಬರು. ಇದು ಜೋಳದಂತೆ ಕಾಣುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಾನು ನಿಯಮಿತವಾಗಿ ಇದೇ ಏರ್​ವೇಸ್​ ಮೂಲಕ ಪ್ರಯಾಣಿಸುತ್ತೇನೆ. ಈ ವಿಷಯ ತಿಳಿದು ನನಗೆ ಅಸಹ್ಯವೆನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಈ ವರದಿ ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 2:24 pm, Sat, 10 December 22

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್