AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷ್ ಏರ್​ವೇಸ್​​ ಪ್ರಯಾಣಿಕರ ಊಟದಲ್ಲಿ ಕೃತಕ ಹಲ್ಲು ಪತ್ತೆ

British Airways : ‘ಅಕ್ಟೋಬರ್ 25ರಂದು ಲಂಡನ್​ನಿಂದ ನಾನು ದುಬೈಗೆ ಪ್ರಯಾಣಿಸುತ್ತಿದ್ಧಾಗ ನೀವು ಕೊಟ್ಟ ಊಟದಲ್ಲಿ ಈ ಕೃತಕ ಹಲ್ಲು ಕಾಣಿಸಿಕೊಂಡಿದೆ. ಇದು ನನ್ನ ಹಲ್ಲು ಅಲ್ಲ, ನನ್ನ ಹಲ್ಲುಗಳೆಲ್ಲವೂ ಸುಸ್ಥಿತಿಯಲ್ಲಿವೆ’ ಎಂದಿದ್ದಾರೆ ಆಕೆ.

ಬ್ರಿಟಿಷ್ ಏರ್​ವೇಸ್​​ ಪ್ರಯಾಣಿಕರ ಊಟದಲ್ಲಿ ಕೃತಕ ಹಲ್ಲು ಪತ್ತೆ
ಬ್ರಿಟಿಷ್ ಏರ್​ವೇಸ್ ಪೂರಿಸಿದ ಊಟದಲ್ಲಿ ಪ್ರಯಾಣಿಕರಿಗೆ ಸಿಕ್ಕ ಕೃತಕ ಹಲ್ಲು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 10, 2022 | 2:24 PM

Viral : ವಿಮಾನದಲ್ಲಿ ಪೂರೈಸುವ ಆಹಾರ ಎಲ್ಲವೂ ಶುದ್ಧವಾಗಿರುತ್ತದೆ ಎಂಬ ಭ್ರಮೆಯನ್ನು ಆಗಾಗ ಇಂಥ ವರದಿಗಳು ಕಳಚುತ್ತವೆ. ಇದೀಗ ವೈರಲ್ ಆಗಿರುವ ಈ ವರದಿಯ ಪ್ರಕಾರ, ಬ್ರಿಟಿಷ್​ ಏರ್​ವೇಸ್​ನ ಪ್ರಯಾಣಿಕರಿಗೆ ಏರ್​ವೇಸ್​ ಪೂರೈಸಿದ ಊಟದಲ್ಲಿ ಕೃತಕ ಹಲ್ಲೊಂದು ಪತ್ತೆಯಾಗಿದೆ. ಇದರಿಂದ ವಿಚಲಿತರಾದ ಪ್ರಯಾಣಿಕರು @British_Airways ಟ್ಯಾಗ್​ ಮಾಡಿ ಫೋಟೋ ಟ್ವೀಟ್ ಮಾಡಿದ್ದಾರೆ.

‘ಅಕ್ಟೋಬರ್ 25ರಂದು BA107 ಲಂಡನ್​ನಿಂದ ದುಬೈಗೆ ಪ್ರಯಾಣಿಸುವಾಗ ನೀವು ಕೊಟ್ಟ ಊಟದಲ್ಲಿ ಈ ಕೃತಕ ಹಲ್ಲು ಕಾಣಿಸಿಕೊಂಡಿದೆ (ಇದು ನನ್ನ ಹಲ್ಲು ಅಲ್ಲ, ನನ್ನ ಹಲ್ಲುಗಳೆಲ್ಲವೂ ಸುಸ್ಥಿತಿಯಲ್ಲಿವೆ). ಇದನ್ನು ನೋಡಿ ನಿಜಕ್ಕೂ ನನಗೆ ಭಯವಾಗಿದೆ. ಕಾಲ್​ ಸೆಂಟರ್​ಗೆ ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇದ್ದೇನೆ, ಸಾಧ್ಯವಾಗುತ್ತಿಲ್ಲ’ ಎಂದು ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಎಂಟು ತಾಸಿನ ವಿಮಾನ ಪ್ರಯಾಣದಲ್ಲಿ ಈ ಮಗು ಅವರಿಗೆಲ್ಲ ದುಃಸ್ವಪ್ನದಂತೆ ಕಾಡಿತೆ?

‘ಈ ವಿಷಯವಾಗಿ ನಿಜವಾಗಲೂ ವಿಷಾದಿಸುತ್ತೇವೆ’ ಎಂದು ತಕ್ಷಣವೇ ಟ್ವೀಟ್ ಮೂಲಕ ಉತ್ತರಿಸಿದೆ ಬ್ರಿಟೀಷ್ ಏರ್​ವೇಸ್. ಅನ್ನ ಮತ್ತು ತರಕಾರಿಯುಳ್ಳ ಊಟದಲ್ಲಿ ಈ ಹಲ್ಲು ಪತ್ತೆಯಾಗಿದೆ. ಈ ಮಹಿಳೆ ಟ್ವೀಟ್ ಮಾಡುತ್ತಿದ್ದಂತೆ ಏರ್​ವೇಸ್​ ಆಕೆಯ ವಿವರಗಳನ್ನು ಪಡೆದುಕೊಂಡು ಕ್ಷಮೆ ಕೇಳಿದೆ. ಈ ಕುರಿತು ಅವಶ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ

ನೆಟ್ಟಿಗರು ಈ ಪೋಸ್ಟ್​ ನೋಡಿ ಎಂಥ ಅಸಹ್ಯವಿದು ಎನ್ನುತ್ತಿದ್ದಾರೆ. ನಾನು ಡೆಂಟಲ್​ ಇಂಪ್ಲ್ಯಾಂಟ್​ ಸ್ಪೆಷಲಿಸ್ಟ್ ಈ ಪ್ರಕರಣದ ಬಗ್ಗೆ ನನಗೆ ನಿಜಕ್ಕೂ ಕುತೂಹಲವಿದೆ ಎಂದಿದ್ದಾರೆ ಒಬ್ಬರು. ಇದು ಜೋಳದಂತೆ ಕಾಣುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಾನು ನಿಯಮಿತವಾಗಿ ಇದೇ ಏರ್​ವೇಸ್​ ಮೂಲಕ ಪ್ರಯಾಣಿಸುತ್ತೇನೆ. ಈ ವಿಷಯ ತಿಳಿದು ನನಗೆ ಅಸಹ್ಯವೆನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಈ ವರದಿ ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 2:24 pm, Sat, 10 December 22

ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್
‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್