AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಬರ್ನಿಂಗ್ ಮ್ಯಾನ್​ ಉತ್ಸವ; ಅಮೆರಿಕದಲ್ಲಿ 8 ಗಂಟೆಗಳ ಕಾಲ​ ಟ್ರಾಫಿಕ್ ಜಾಮ್

Burning Man Festival : ಅಮೆರಿಕದಲ್ಲಿ ಆಯೋಜನೆಗೊಂಡಿದ್ದ ಬರ್ನಿಂಗ್​ ಮ್ಯಾನ್​ ಫೆಸ್ಟಿವಲ್​ಗೆ ಜಗತ್ತಿನಾದ್ಯಂತ ಸುಮಾರು 80,000 ಜನರು ಪಾಲ್ಗೊಂಡಿದ್ದರು. ಆಗ ಹೀಗೆ ಭಯಂಕರ ಟ್ರಾಫಿಕ್​ ಜಾಮ್ ಉಂಟಾಗಿತ್ತು.

Trending : ಬರ್ನಿಂಗ್ ಮ್ಯಾನ್​ ಉತ್ಸವ; ಅಮೆರಿಕದಲ್ಲಿ 8 ಗಂಟೆಗಳ ಕಾಲ​ ಟ್ರಾಫಿಕ್ ಜಾಮ್
ಬರ್ನಿಂಗ್​ ಮ್ಯಾನ್​ ಫೆಸ್ಟಿವಲ್​ನಿಂದಾಗಿ ಉಂಟಾದ ಟ್ರಾಫಿಕ್
TV9 Web
| Edited By: |

Updated on:Sep 07, 2022 | 11:11 AM

Share

Trending : ಕಾರ್ಮಿಕ ದಿನಾಚರಣೆ ಅಂಗವಾಗಿ ಅಮೆರಿಕದ ನೆವಾಡಾದಲ್ಲಿ ಆಯೋಜನೆಗೊಂಡ ಬರ್ನಿಂಗ್ ಮ್ಯಾನ್ ಉತ್ಸವಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಜಗತ್ತಿನ ಮೂಲೆಮೂಲೆಗಳಿಂದ ಆಗಮಿಸಿದ್ದರು. ಒಂಬತ್ತು ದಿನಗಳ ಕಾಲ ನಡೆದ ಈ ಸಂಗೀತ-ಸಂಸ್ಕೃತಿ ಉತ್ಸವವು ಸೋಮವಾರದಂದು ಮುಕ್ತಾಯವಾಯಿತು. ಆದರೆ ಬ್ಯ್ಲಾಕ್ ರಾಕ್​ ಮರುಭೂಮಿಯ ಸುತ್ತಮುತ್ತಲಿನ ಪ್ರದೇಶಗಳ ಮಾರ್ಗವಾಗಿ ತೆರಳುವವರು ಸುಮಾರು 8 ಗಂಟೆಗಳ ಕಾಲ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತೆಂದು ನ್ಯೂಯಾರ್ಕ್ ಪೋಸ್ಟ್‌ನ ವರದಿ ತಿಳಿಸಿದೆ. ಮೂರು ವರ್ಷಗಳ ಕೊವಿಡ್​ ಅವಧಿಯ ನಂತರ ಏರ್ಪಡಿಸಿದ ಬರ್ನಿಂಗ್​ ಮ್ಯಾನ್ ಉತ್ಸವ ಇದಾಗಿತ್ತು. ಮೋಜು, ಮಸ್ತಿಯ ನಂತರ ಉಂಟಾದ ಇಂಥ ದೈತ್ಯ ಟ್ರಾಫಿಕ್​ಗೆ ಸಂಬಂಧಿಸಿದ ಫೋಟೋಗಳು ಆನ್​ಲೈನ್​ನಲ್ಲಿ ಇದೀಗ ವೈರಲ್ ಆಗುತ್ತಿವೆ.

‘ಬರ್ನಿಂಗ್​ ಮ್ಯಾನ್​ ಪ್ರಾಜೆಕ್ಟ್’ ತನ್ನ ಟ್ವಿಟರ್​ ಖಾತೆಯಲ್ಲಿ ಈ ವಿಷಯವನ್ನು ಟ್ವೀಟ್ ಮಾಡಿದೆ, ‘ಸುಮಾರು ಎಂಟುಗಂಟೆಗಳ ಕಾಲ ಟ್ರಾಫಿಕ್​ನ ಪರಿಸ್ಥಿತಿ ಹೀಗೆಯೇ ಇರುತ್ತದೆ. ಆದ್ದರಿಂದ ನಿಮ್ಮ ಪ್ರಯಾಣ ತಡವಾಗಬಹುದು’ ಎಂದು.

ಒಂಬತ್ತು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಸುಮಾರು 80,000 ಜನರು ಪಾಲ್ಗೊಂಡಿದ್ದರು. ಹೀಗೆ ಉಂಟಾದ ಟ್ರಾಫಿಕ್​ನಿಂದಾಗಿ ಮತ್ತು ಹವಾಮಾನದ ಅಡ್ಡಪರಿಣಾಮಗಳನ್ನು ಅನೇಕರು ಅನೇಕ ರೀತಿಯಲ್ಲಿ ಅನುಭವಿಸಬೇಕಾಯಿತು.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:04 am, Wed, 7 September 22

Follow Us
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?