AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ

Traffic Police : ಪಾಪ, ಕೀಲುಗೊಂಬೆಗಳಂತಾಡುತ್ತ ಇಡೀ ದಿನ ಇವರು ಹೀಗೆ ರಸ್ತೆಯಲ್ಲಿರಬೇಕು. ‘ನಿನಗೆ ನೀನೇ ಗೆಳೆಯ’ ಎನ್ನುವುದು ಈ ಸಂಚಾರಿ ಪೊಲೀಸರಿಗೆ ಅರ್ಥವಾಗಿದೆ. ಇವರು​ ವೃತ್ತಿಪರ ಗಾಯಕರಂತೆ ತೋರುತ್ತಾರೆ. ನೋಡಿ ಈ ವಿಡಿಯೋ.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ
Chandigarh cop sings song inspired by Daler Mehndi about no parking
TV9 Web
| Edited By: ಶ್ರೀದೇವಿ ಕಳಸದ|

Updated on: Oct 26, 2022 | 11:55 AM

Share

Viral Video : ಯಾಂತ್ರಿಕವಾಗಿ ಬದುಕುವುದರಿಂದ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಎಷ್ಟೋ ಸಲ ಖಿನ್ನತೆಗೆ ಜಾರುತ್ತೇವೆ. ಆದರೆ ಮನುಷ್ಯ ಮೂಲತಃ ಸೃಜನಶೀಲಜೀವಿ. ತನ್ನ ಮನಸ್ಸನ್ನು ಆಹ್ಲಾದವಾಗಿರಿಸಿಕೊಳ್ಳಲು ಅವನಲ್ಲಿಯೇ ಸಾಕಷ್ಟು ಉಪಾಯಗಳುಂಟು. ಆ ಉಪಾಯಗಳಲ್ಲಿ ಕಲೆಯೂ ಒಂದು. ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ. ಗಗನ್ ಖುರಾನಾ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಚಂಡೀಘಡದ ರಸ್ತೆಬದಿ ನಿಂತು ಹಾಡುತ್ತಿರುವ ಈ ಸಂಚಾರಿ ಪೊಲೀಸರ ಉತ್ಸಾಹವನ್ನು ನೋಡಿ ಮತ್ತು ಅವರ ಹಾಡನ್ನು ಕೇಳಿ.

ಗಾಯಕ ದಲೇರ್ ಮೆಹಂದಿಯ ಬೋಲೋ ತಾರಾರಾರಾ ಹಾಡು ನೆನಪಾಯಿತಾ? 23 ವರ್ಷಗಳಿಂದಲೂ ಈ ಹಾಡನ್ನು ಇನ್ನೂ ಜನ ಆನಂದಿಸುತ್ತಿದ್ದಾರೆ, ಹಾಗಿದೆ ಈ ಟ್ಯೂನ್​. ಚಂಡೀಗಢದ ಈ ಸಂಚಾರಿ ಪೊಲೀಸ್​ ಮೈಕ್​ ಹಿಡಿದುಕೊಂಡು ಸಂಚಾರಿ ನಿಯಮ ಪಾಲಿಸಲು ಈ ಹಾಡಿನ ಮೂಲಕ ಸಲಹೆಗಳನ್ನು ಕೊಡುತ್ತಿದ್ದಾರೆ. ರಸ್ತೆಯಲ್ಲಿ ನಡೆಯುತ್ತಿರುವ ಆರ್ಕೆಸ್ಟ್ರಾದಂತೆ ಗೋಚರಿಸುತ್ತದೆ ಈ ದೃಶ್ಯ. ಪಾರ್ಕಿಂಗ್​ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು ಎನ್ನುವ ಸಂದೇಶವನ್ನು ಈ ಹಾಡು ನೀಡುತ್ತಿದೆ. ಈ ವಿಡಿಯೋ ಅನ್ನು ಈತನಕ 1,50,000 ಜನರು ನೋಡಿದ್ದಾರೆ ಮತ್ತು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ನಿಮಗೇನು ಅನ್ನಿಸುತ್ತೆ ಈ ವಿಡಿಯೋ ನೋಡುತ್ತಿದ್ದಂತೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Follow Us
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ