AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಕ್​ ಬರುತ್ತಿದ್ದಂತೆ ಮೂರ್ಛೆಯ ನಾಟಕವಾಡುವ ಈ ಆಡುಗಳು

Goat : ಹುಲ್ಲು ಮೇಯುತ್ತ ನಿಂತುಕೊಂಡಿದ್ದ ಈ ಆಡುಗಳು, ಸಾಗಣೆ ಟ್ರಕ್ ಬರುತ್ತಿದ್ದಂತೆ ಒಂದೇ ಸಲಕ್ಕೆ ಮೂರ್ಛೆ ಬೀಳುತ್ತವೆ. ಆಹಾ ಎಂಥ ನಾಟಕವಿದು! ಎಂದು ನೆಟ್ಟಿಗರು ನಗುತ್ತಿದ್ದಾರೆ. ವಿಡಿಯೋ ನೋಡಿ.

ಟ್ರಕ್​ ಬರುತ್ತಿದ್ದಂತೆ ಮೂರ್ಛೆಯ ನಾಟಕವಾಡುವ ಈ ಆಡುಗಳು
Tribe of Goats Pretending to Faint on seeing a truck
TV9 Web
| Edited By: |

Updated on:Oct 26, 2022 | 11:15 AM

Share

Viral Video : ಅದೆಷ್ಟೋ ಪ್ರಾಣಿಪಕ್ಷಿಗಳ ವಿಡಿಯೋ ಅನ್ನು ನೋಡುತ್ತಿರುತ್ತೀರಿ. ವಿವಿಧ ಭಾವ, ಭಂಗಿಗಳಿಂದ ಕೂಡಿದ ಈ ವಿಡಿಯೋಗಳು ನಿಮ್ಮ ಮನಸ್ಸನ್ನು ಅರಳಿಸುತ್ತಿರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ಆಡುಗಳು ಭಾರೀ ನಾಟಕವಾಡುತ್ತಿವೆ. ಸರಕು ತುಂಬಿದ ಟ್ರಕ್ ಹಾದು ಹೋಗುತ್ತಿದ್ದಂತೆ ಮೂರ್ಛೆ ಬಿದ್ದವರಂತೆ ನಟಿಸುತ್ತವೆ. ನೆಟ್ಟಿಗರು ಈ ವಿಡಿಯೋ ನೋಡಿ ನಗುತ್ತಲೇ ಇದ್ದಾರೆ. ತಮ್ಮ ಪಾಡಿಗೆ ತಾವು ಮೇಯುತ್ತಿದ್ದವು ಇದ್ದಕ್ಕಿದ್ದಂತೆ ಹೀಗೆ ಹೇಗೆ ಎಲ್ಲವೂ ಒಟ್ಟಿಗೇ ಬಿದ್ದವು? ಈ ಅಚ್ಚರಿ ಬಿಡಿಸದ ಒಗಟಿನಂತೆ ತೋರುತ್ತಿದೆ.

ಈ ವಿಡಿಯೋ ಈತನಕ 56,000ಕ್ಕೂ ಹೆಚ್ಚು ಜನರನ್ನು ತಲುಪಿದೆ.  ಈ ವಿಡಿಯೋ ಅನ್ನು @ViralHog ಎಂಬ ಟ್ವಿಟರ್ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ‘ಎಲೆಕ್ಟ್ರಿಕ್ ಶಾಕ್​ ಇದು. ಕೆಲ ಸೆಕೆಂಡುಗಳವರೆಗೆ ಈ ಸ್ಥಿತಿಯಲ್ಲಿದ್ದು ಮತ್ತೆ ಎದ್ದೇಳುತ್ತವೆ. ಎಲೆಕ್ಟ್ರಿಕ್​ ತಂತಿಬೇಲಿಯನ್ನು ಟ್ರಕ್​ ಸ್ಪರ್ಷಿಸಿದ್ದೇ ಇದಕ್ಕೆ ಕಾರಣ. ಆದರೆ ಆಡುಗಳಿಗೆ ಇದರಿಂದ ತೊಂದರೆಯಾಗದು’ ಎಂದಿದ್ದಾರೆ ಒಬ್ಬರು. ‘ಈ ಮೇಕೆಗಳಲ್ಲಿ ಮನುಷ್ಯರಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು. ‘ಕೀ ಕೊಟ್ಟಂತೆ ಎಲ್ಲವೂ ಒಮ್ಮೆಲೆ ಬಿದ್ದು ಹೋಗುವುದನ್ನು ನೋಡಲು ಬಹಳ ತಮಾಷೆ ಎನ್ನಿಸುತ್ತದೆ’ ಎಂದಿದ್ದಾರೆ ಮಗದೊಬ್ಬರು.

ಈ ಹಿಂದೆ ಡೇವಿಡ್ ಜಾನ್ಸನ್ ಎನ್ನುವವರು ಮೇಕೆಯೊಂದು ಶಿವನ ದೇವಸ್ಥಾನದಲ್ಲಿ ತನ್ನ ಮುಂಗಾಲುಗಳನ್ನೂರಿ ಪ್ರಾರ್ಥಿಸುವ ವಿಡಿಯೋ ಪೋಸ್ಟ್ ಮಾಡಿದ್ದು ನೆನಪಿರಬಹುದು.

ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:14 am, Wed, 26 October 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ