AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಗಡಗಡ; ನಾ ಬೆಚ್ಚಗಿಡ್ತೀನಿ ನಿನ್ನ, ಸುಮ್ನಿರು ಮೇಕೆ

Viral Video : ‘ತುಂಬಾ ಚಳಿ ಇದೆ. ಬಾ ನಾನು ನಿನಗೆ ಬೆಚ್ಚಗೆ ಮಾಡ್ತೀನಿ’ ಪುಟ್ಟಪುಟ್ಟ ಕೈಗಳಿಂದ ಮೇಕೆಯ ಕೈಕಾಲುಗಳನ್ನು ಬೆಚ್ಚಗಾಗಿಸುತ್ತಿದ್ದಾನೆ ಈ ಪುಟ್ಟಣ್ಣ. ಎಷ್ಟು ಸಲ ನೋಡಿದರೂ ನೋಡಬೇಕೆನ್ನಿಸುತ್ತದೆ ಈ ವಿಡಿಯೋ.

ಗಡಗಡಗಡ; ನಾ ಬೆಚ್ಚಗಿಡ್ತೀನಿ ನಿನ್ನ, ಸುಮ್ನಿರು ಮೇಕೆ
ನೀ ಬೆಚ್ಚಗಿರಬೇಕು ಮೇಕೆ
TV9 Web
| Edited By: |

Updated on:Dec 08, 2022 | 4:39 PM

Share

Viral Video : ಹೊರಗೆ ಬಿಸಿಲಿದ್ದರೂ ಎಂಥ ಚಳಿ ಇದೆ. ಕಾಲು ಕೆಳಗಿಟ್ಟರೆ ಜುಣುಜುಣು, ನೀರು ಮುಟ್ಟಿದರೆ ಗಡಗಡ. ರಾತ್ರಿಹಗಲೂ ಚಳಿಯೇ ಚಳಿ. ಈ ಪುಟ್ಟ ಹುಡುಗನೊಬ್ಬ ಫೈರ್​ ಕ್ಯಾಂಪಿನೆದುರು ಕುಳೀತಿದ್ದಾನೆ. ಮಡಿಲೊಳಗೆ ಮೇಕೆಮರಿಯೊಂದನ್ನು ಇಟ್ಟುಕೊಂಡು ಪುಟ್ಟ ಕೈಗಳಿಂದ ಕಾವು ಕೊಡುತ್ತಿದ್ದಾನೆ. ಅದೂ ಸುಮ್ಮನೇ ಕಾವು ಕೊಡಿಸಿಕೊಳ್ಳುತ್ತಿದೆ. ಎಂಥ ಮುದ್ಧಾಗಿದೆ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

15,000ಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಎಂಥ ಚಳಿಯೂ ಓಡಿಹೋಗುವಂತಿದೆ. ನೋಡುತ್ತಿದ್ದಂತೆ ಬೆಚ್ಚನೆಯ ಭಾವ ಆವರಿಸುವುದರಲ್ಲಿ ಸಂದೇಹವೇ ಇಲ್ಲ. ಎಷ್ಟು ಶ್ರದ್ಧೆ, ಪ್ರೀತಿ, ಅಕ್ಕರೆಯಿಂದ ಮರಿಗೆ ಕಾವು ಕೊಡುತ್ತಿದ್ದಾನೆ ಈ ಪುಟ್ಟ. ನೆಟ್ಟಿಗರೆಲ್ಲ ಈ ಹುಡುಗನಿಗೆ ಶಭಾಷ್​ ಎನ್ನುತ್ತಿದ್ದಾರೆ.

ಮರಿಯಾದರೂ ಎಷ್ಟು ಸಮಾಧಾನದಿಂದ ಅವನ ಮೇಲೆ ಕುಳಿತಿದೆ. ಹೀಗದು ಕುಳಿತಿದೆಯೆಂದರೆ ಅವನ ಮೇಲೆ ಅದೂ ಕೂಡ ಎಷ್ಟು ವಿಶ್ವಾಸ ಪ್ರೀತಿ ಇಟ್ಟಿರಬಹುದು. ಕಥೆ ಹೇಳುವ ಸಮಯವಿದು. ಈ ಕರುಣೆ ಎಂದಿಗೂ ಈ ಬಾಲಕನ ಭವಿಷ್ಯವನ್ನು ಉತ್ತಮವಾಗಿಸುತ್ತದೆ ಎಂದಿದ್ದಾರೆ ಒಬ್ಬರು. ನನ್ನ ಮಗ ಕೂಡ ಹೀಗೆಯೇ ಮಾಡುತ್ತಾನೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 4:37 pm, Thu, 8 December 22

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?