AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ವತಾರೋಹಣದಲ್ಲಿ ದಾಖಲೆ ಬರೆದ ಕೊಪ್ಪಳದ ಸೈನಿಕ ವೀರೇಶ ಗಾದಿಗನೂರ

Indian Army : ಮೂರು ದಿನಗಳಲ್ಲಿ ಹಿಮಾಲಯದ ಮೂರು ಶಿಖರಗಳು ಸೇರಿದಂತೆ ಮೆಂಟಾಕ್​ ಪರ್ವತಶ್ರೇಣಿಗಳನ್ನು ಇವರು ಏರಿದ್ದಾರೆ. ಫಲವಾಗಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್ ಇವರ ಸಾಧನೆಯನ್ನು ಮಾನ್ಯ ಮಾಡಿದೆ.

ಪರ್ವತಾರೋಹಣದಲ್ಲಿ ದಾಖಲೆ ಬರೆದ ಕೊಪ್ಪಳದ ಸೈನಿಕ ವೀರೇಶ ಗಾದಿಗನೂರ
ವೀರೇಶ ಗಾದಿಗನೂರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 08, 2022 | 6:18 PM

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ 39 ವರ್ಷದ ವೀರೇಶ ಪಿ. ಗಾದಿಗನೂರ ಎಂಬುವವರು ಮೆಂಟಾಕ್​ ಪರ್ವತಾರೋಹಣ ಮಾಡಿ ದಾಖಲೆ ಮಾಡಿದ್ಧಾರೆ. ಇವರು 2202ರ ಜನವರಿಯಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಜೂನ್​ನಲ್ಲಿ ಮೆಂಟಾಕ್​ ಪರ್ವತಶ್ರೇಣಿಗಳನ್ನು ಇವರು ಪರ್ವತಾರೋಹಣ ಮಾಡಿದ್ದರು. ಕರ್ತವ್ಯದಲ್ಲಿ ನಿರತರಾಗಿದ್ದಾಗ ಹೊಸ ದಾರಿಗಳನ್ನು ಹುಡುಕುವುದರ ಕಡೆಗೆ ಇವರ ಆಸಕ್ತಿ ಇರುತ್ತಿತ್ತು. ಇದೇ ಮುಂದೆ ಅವರನ್ನು ಪರ್ವತಾರೋಹಣದೆಡೆ ಸೆಳೆಯಿತು.

ಮೂರು ದಿನಗಳಲ್ಲಿ ಮೂರು ಶಿಖರಗಳು ಸೇರಿದಂತೆ 11 ಮೆಂಟಾಕ್​ ಪರ್ವತಶ್ರೇಣಿಗಳನ್ನು ಇವರು ಏರಿದ್ದಾರೆ. ಫಲವಾಗಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್ ಇವರ ಸಾಧನೆಯನ್ನು ಮಾನ್ಯ ಮಾಡಿದೆ. ಈತನಕ 2017ರಲ್ಲಿ ಸಿಯಾಚಿನ್​ನಲ್ಲಿ ಮೌಂಟ್​ ಕಾಮೆಟ್​, ಮೌಂಟ್​ ಭಾಗೀರಥಿ, ಮೌಂಟ್​ ಜೋಗಿನ್​ ಸೇರಿದಂತೆ 39 ಪರ್ವತಗಳ ಆರೋಹಣ ಮಾಡಿದ್ದಾರೆ. 2017ರಲ್ಲಿ ಲಡಾಕ್​, ಸ್ಟಾಕ್​ ಕಾಂಗ್ರಿ ಪರ್ವತಾರೋಹಣವನ್ನು ನಾಲ್ಕು ದಿನಗಳಲ್ಲಿ ಇಬ್ಬರೊಂದಿಗೆ 6,000 ಮೀಟರ್ ಎತ್ತರದ 17 ಪರ್ವತಗಳ ಆರೋಹಣ ಮಾಡಿದ್ದಾರೆ. ಏಷ್ಯಾ ಬುಕ್  ಆಫ್​ ರೆಕಾರ್ಡ್ಸ್​ ಮತ್ತು ನೋಬಲ್ ವರ್ಲ್ಡ್​ ರೆಕಾರ್ಡ್ಸ್​ ಮತ್ತು ವರ್ಲ್ಡ್​ ಬುಕ್ ಆಫ್​ ರೆಕಾರ್ಡ್ಸ್​ ನಲ್ಲಿ ಇದು ದಾಖಲಾಗಿದೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನಾನು 2010ರಲ್ಲಿ ಪರ್ವತಾರೋಹಣ ತರಬೇತಿಗೆ ಸೇರಿದಾಗ ನನಗೆ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಆದರೆ ಕ್ರಮೇಣ ಇದು ಎಷ್ಟು ಸಾಹಸಮಯ ಎಂಬುದನ್ನು ಅರಿಗುಕೊಳ್ಳುತ್ತಾ ಹೋದೆ. ಈ ಪರ್ವತಾರೋಹಣ ಮಾಡಿ ತ್ರಿವರ್ಣ ಧ್ವಜ ಹಾರಿಸಿದಾಗ ನಿಜಕ್ಕೂ ಸಂತಸ ಮತ್ತು ಹೆಮ್ಮೆಯ ವಿಷಯ ಎನ್ನಿಸಿತು’ ಎಂದಿದ್ಧಾರೆ ವೀರೇಶ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:13 pm, Thu, 8 December 22

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ