AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು, ಕೆಳಗೆ ಮಾರ್ಬಲ್​ ಕಲ್ಲು; ವಿಪರೀತ ಟ್ರೋಲ್​ ಆದ ಮಧ್ಯಪ್ರದೇಶ ಸಿಎಂ

ಗಿಡ ನೆಡಲು ಅಷ್ಟು ದುಬಾರಿ ಬೆಲೆಯ ಮಾರ್ಬಲ್​ ಕಲ್ಲು ಹಾಕಿ ನಿಲ್ಲಬೇಕಾ? ಅಂಥ ಮಳೆ ಬರುತ್ತಿದ್ದಾಗಲೂ ಸಸಿಗೆ ನೀರು ಹಾಕಬೇಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ.

Viral Photo: ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು, ಕೆಳಗೆ ಮಾರ್ಬಲ್​ ಕಲ್ಲು; ವಿಪರೀತ ಟ್ರೋಲ್​ ಆದ ಮಧ್ಯಪ್ರದೇಶ ಸಿಎಂ
ಛತ್ರಿ ಕಳಗೆ ನಿಂತು ಗಿಡಕ್ಕೆ ನೀರು ಹಾಕುತ್ತಿರುವ ಮಧ್ಯಪ್ರದೇಶ ಸಿಎಂ
TV9 Web
| Updated By: Lakshmi Hegde|

Updated on: Sep 12, 2021 | 1:01 PM

Share

ಭೋಪಾಲ್​:  ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಇದೀಗ ಭರ್ಜರಿ ಟ್ರೋಲ್​ ಆಗುತ್ತಿದ್ದಾರೆ. ನೆಟ್ಟಿಗರಂತೂ ಅವರಿಗೆ ಇನ್ನಿಲ್ಲದಂತೆ ಛೇಡಿಸುತ್ತಿದ್ದಾರೆ.  ಅದಕ್ಕೆ ಕಾರಣ ವೈರಲ್​ ಆದ ಒಂದು ಫೋಟೋ. ಶಿವರಾಜ್ ಸಿಂಗ್​ ಚೌಹಾಣ್​ ಅವರು ಗಿಡವೊಂದನ್ನು ನೆಟ್ಟು, ಅದಕ್ಕೆ ನೀರು ಹಾಕುತ್ತಿರುವ ಫೋಟೋ ವೈರಲ್​ ಆದ ಬೆನ್ನಲ್ಲೇ ಈ ಪರಿ ಟ್ರೋಲ್​ ಆಗಲು ಶುರುವಾಗಿದ್ದು. 

ಶಿವರಾಜ್​ ಸಿಂಗ್​ ಚೌಹಾಣ್​​ ಎರಡು ದೊಡ್ಡ ಮಾರ್ಬಲ್​ ಕಲ್ಲಿನ ಮೇಲೆ ನಿಂತಿದ್ದಾರೆ. ಹಾಗೇ ಬಗ್ಗಿ ಒಂದು ಗಿಡಕ್ಕೆ ನೀರು ಹಾಕುತ್ತಿದ್ದಾರೆ. ಅವರ ಪಕ್ಕದಲ್ಲಿ ನಿಂತ ವ್ಯಕ್ತಿ ಅವರಿಗೆ ಛತ್ರಿ ಹಿಡಿದಿದ್ದಾರೆ. ಈ ಛತ್ರಿ ಹಿಡಿದಿದ್ದು ಬಿಸಿಲು ಬರುತ್ತಿದೆ ಎಂದಲ್ಲ..ಬದಲಿಗೆ ಅಲ್ಲಿ ಮಳೆ ಸುರಿಯುತ್ತಿತ್ತು. ಅಂಥ ಮಳೆಯಲ್ಲಿ, ಕೊಡೆ ಹಿಡಿದು ಗಿಡಕ್ಕೆ ನೀರು ಹಾಕಿದ್ದೇ ಈ ಟ್ರೋಲ್​ಗೆ ಕಾರಣ. ಸಾಮಾನ್ಯ ಜನರಷ್ಟೇ ಅಲ್ಲದೆ ಕಾಂಗ್ರೆಸ್​ ಕೂಡ ಶಿವರಾಜ್​ ಸಿಂಗ್​ ಚೌಹಾಣ್​ ವಿರುದ್ಧ ಅಪಹಾಸ್ಯ ಮಾಡಿದೆ.  ಕಳೆದ ಶುಕ್ರವಾರ ನೆಟ್ಟಿಗರೊಬ್ಬರು ಈ ಫೋಟೋ ಶೇರ್​ ಮಾಡಿಕೊಂಡು..ನಮ್ಮದೇ ಸ್ಟೈಲು..ನಮ್ಮದೇ ರೀತಿ ಎಂದು ಫನ್ನಿಯಾಗಿ ಕ್ಯಾಪ್ಷನ್​ ಬರೆದಿದ್ದಾರೆ. ಕೆಲವೇ ಹೊತ್ತಲ್ಲಿ ಫೋಟೋ ಸಿಕ್ಕಾಪಟೆ ವೈರಲ್ ಆಗಿದೆ.

ಗಿಡ ನೆಡಲು ಅಷ್ಟು ದುಬಾರಿ ಬೆಲೆಯ ಮಾರ್ಬಲ್​ ಕಲ್ಲು ಹಾಕಿ ನಿಲ್ಲಬೇಕಾ? ಅಂಥ ಮಳೆ ಬರುತ್ತಿದ್ದಾಗಲೂ ಸಸಿಗೆ ನೀರು ಹಾಕಬೇಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ. ಕಾಂಗ್ರೆಸ್​ ಕೂಡ ಶಿವರಾಜ್​ ಸಿಂಗ್​ ಚೌಹಾಣ್​ರನ್ನು ತುಂಬ ಟೀಕಿಸಿದೆ. ಮಣ್ಣಿನ ಮಗ, ರೈತನ ಮಗ ಎಂದು ಅಪಹಾಸ್ಯ ಮಾಡಿದೆ. ಮಧ್ಯಪ್ರದೇಶ ಕಾಂಗ್ರೆಸ್​ ಮಾಧ್ಯಮ ಕೋ ಆರ್ಡಿನೇಟರ್​ ನರೇಂದ್ರ ಸಲುಜಾ ಈ ಫೋಟೋವನ್ನು ಟ್ವೀಟ್​ ಮಾಡಿದ್ದು, ಇಲ್ಲಿ ಕೆಂಪು ಮಣ್ಣಿನ ವಿಹಂಗಮ ನೋಟವಿದೆ. ಹಾಗೇ, ಆ ಒದ್ದೆ ಮಣ್ಣಿನ ಮೇಲೆ ರೈತನ ಮಗ ಶಿವರಾಜ್​ ಜೀ ಅವರು ದುಬಾರಿ ಕಲ್ಲುಗಳನ್ನು ಹಾಕಿದ್ದಾರೆ. ಮಳೆ ಬರುತ್ತಿದೆ..ಕೊಡೆ ಹಿಡಿದು ಸಸಿಗೆ ನೀರು ಹಾಕುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ಗೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಅಬ್ಬಾ, ಅದೆಂತಾ ಪೋಸ್ ಎಂದಿದ್ದಾರೆ. ಛತ್ರಿ, ಮಳೆ, ಕ್ಯಾಮರಾ ಮತ್ತು ಆ್ಯಕ್ಷನ್​ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಬರೆದಿದ್ದಾರೆ.

ಇದನ್ನೂ ಓದಿ: ‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ

ಮೈಸೂರಿನಲ್ಲಿ 101 ಗಣಪತಿ ದೇವಸ್ಥಾನ ತೆರವಿಗೆ ತೀವ್ರ ವಿರೋಧ! ಜಿಲ್ಲಾಡಳಿತ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ

4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ