Viral Photo: ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು, ಕೆಳಗೆ ಮಾರ್ಬಲ್​ ಕಲ್ಲು; ವಿಪರೀತ ಟ್ರೋಲ್​ ಆದ ಮಧ್ಯಪ್ರದೇಶ ಸಿಎಂ

TV9 Digital Desk

| Edited By: Lakshmi Hegde

Updated on: Sep 12, 2021 | 1:01 PM

ಗಿಡ ನೆಡಲು ಅಷ್ಟು ದುಬಾರಿ ಬೆಲೆಯ ಮಾರ್ಬಲ್​ ಕಲ್ಲು ಹಾಕಿ ನಿಲ್ಲಬೇಕಾ? ಅಂಥ ಮಳೆ ಬರುತ್ತಿದ್ದಾಗಲೂ ಸಸಿಗೆ ನೀರು ಹಾಕಬೇಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ.

Viral Photo: ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು, ಕೆಳಗೆ ಮಾರ್ಬಲ್​ ಕಲ್ಲು; ವಿಪರೀತ ಟ್ರೋಲ್​ ಆದ ಮಧ್ಯಪ್ರದೇಶ ಸಿಎಂ
ಛತ್ರಿ ಕಳಗೆ ನಿಂತು ಗಿಡಕ್ಕೆ ನೀರು ಹಾಕುತ್ತಿರುವ ಮಧ್ಯಪ್ರದೇಶ ಸಿಎಂ

ಭೋಪಾಲ್​:  ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಇದೀಗ ಭರ್ಜರಿ ಟ್ರೋಲ್​ ಆಗುತ್ತಿದ್ದಾರೆ. ನೆಟ್ಟಿಗರಂತೂ ಅವರಿಗೆ ಇನ್ನಿಲ್ಲದಂತೆ ಛೇಡಿಸುತ್ತಿದ್ದಾರೆ.  ಅದಕ್ಕೆ ಕಾರಣ ವೈರಲ್​ ಆದ ಒಂದು ಫೋಟೋ. ಶಿವರಾಜ್ ಸಿಂಗ್​ ಚೌಹಾಣ್​ ಅವರು ಗಿಡವೊಂದನ್ನು ನೆಟ್ಟು, ಅದಕ್ಕೆ ನೀರು ಹಾಕುತ್ತಿರುವ ಫೋಟೋ ವೈರಲ್​ ಆದ ಬೆನ್ನಲ್ಲೇ ಈ ಪರಿ ಟ್ರೋಲ್​ ಆಗಲು ಶುರುವಾಗಿದ್ದು. 

ಶಿವರಾಜ್​ ಸಿಂಗ್​ ಚೌಹಾಣ್​​ ಎರಡು ದೊಡ್ಡ ಮಾರ್ಬಲ್​ ಕಲ್ಲಿನ ಮೇಲೆ ನಿಂತಿದ್ದಾರೆ. ಹಾಗೇ ಬಗ್ಗಿ ಒಂದು ಗಿಡಕ್ಕೆ ನೀರು ಹಾಕುತ್ತಿದ್ದಾರೆ. ಅವರ ಪಕ್ಕದಲ್ಲಿ ನಿಂತ ವ್ಯಕ್ತಿ ಅವರಿಗೆ ಛತ್ರಿ ಹಿಡಿದಿದ್ದಾರೆ. ಈ ಛತ್ರಿ ಹಿಡಿದಿದ್ದು ಬಿಸಿಲು ಬರುತ್ತಿದೆ ಎಂದಲ್ಲ..ಬದಲಿಗೆ ಅಲ್ಲಿ ಮಳೆ ಸುರಿಯುತ್ತಿತ್ತು. ಅಂಥ ಮಳೆಯಲ್ಲಿ, ಕೊಡೆ ಹಿಡಿದು ಗಿಡಕ್ಕೆ ನೀರು ಹಾಕಿದ್ದೇ ಈ ಟ್ರೋಲ್​ಗೆ ಕಾರಣ. ಸಾಮಾನ್ಯ ಜನರಷ್ಟೇ ಅಲ್ಲದೆ ಕಾಂಗ್ರೆಸ್​ ಕೂಡ ಶಿವರಾಜ್​ ಸಿಂಗ್​ ಚೌಹಾಣ್​ ವಿರುದ್ಧ ಅಪಹಾಸ್ಯ ಮಾಡಿದೆ.  ಕಳೆದ ಶುಕ್ರವಾರ ನೆಟ್ಟಿಗರೊಬ್ಬರು ಈ ಫೋಟೋ ಶೇರ್​ ಮಾಡಿಕೊಂಡು..ನಮ್ಮದೇ ಸ್ಟೈಲು..ನಮ್ಮದೇ ರೀತಿ ಎಂದು ಫನ್ನಿಯಾಗಿ ಕ್ಯಾಪ್ಷನ್​ ಬರೆದಿದ್ದಾರೆ. ಕೆಲವೇ ಹೊತ್ತಲ್ಲಿ ಫೋಟೋ ಸಿಕ್ಕಾಪಟೆ ವೈರಲ್ ಆಗಿದೆ.

ಗಿಡ ನೆಡಲು ಅಷ್ಟು ದುಬಾರಿ ಬೆಲೆಯ ಮಾರ್ಬಲ್​ ಕಲ್ಲು ಹಾಕಿ ನಿಲ್ಲಬೇಕಾ? ಅಂಥ ಮಳೆ ಬರುತ್ತಿದ್ದಾಗಲೂ ಸಸಿಗೆ ನೀರು ಹಾಕಬೇಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ. ಕಾಂಗ್ರೆಸ್​ ಕೂಡ ಶಿವರಾಜ್​ ಸಿಂಗ್​ ಚೌಹಾಣ್​ರನ್ನು ತುಂಬ ಟೀಕಿಸಿದೆ. ಮಣ್ಣಿನ ಮಗ, ರೈತನ ಮಗ ಎಂದು ಅಪಹಾಸ್ಯ ಮಾಡಿದೆ. ಮಧ್ಯಪ್ರದೇಶ ಕಾಂಗ್ರೆಸ್​ ಮಾಧ್ಯಮ ಕೋ ಆರ್ಡಿನೇಟರ್​ ನರೇಂದ್ರ ಸಲುಜಾ ಈ ಫೋಟೋವನ್ನು ಟ್ವೀಟ್​ ಮಾಡಿದ್ದು, ಇಲ್ಲಿ ಕೆಂಪು ಮಣ್ಣಿನ ವಿಹಂಗಮ ನೋಟವಿದೆ. ಹಾಗೇ, ಆ ಒದ್ದೆ ಮಣ್ಣಿನ ಮೇಲೆ ರೈತನ ಮಗ ಶಿವರಾಜ್​ ಜೀ ಅವರು ದುಬಾರಿ ಕಲ್ಲುಗಳನ್ನು ಹಾಕಿದ್ದಾರೆ. ಮಳೆ ಬರುತ್ತಿದೆ..ಕೊಡೆ ಹಿಡಿದು ಸಸಿಗೆ ನೀರು ಹಾಕುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ಗೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಅಬ್ಬಾ, ಅದೆಂತಾ ಪೋಸ್ ಎಂದಿದ್ದಾರೆ. ಛತ್ರಿ, ಮಳೆ, ಕ್ಯಾಮರಾ ಮತ್ತು ಆ್ಯಕ್ಷನ್​ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಬರೆದಿದ್ದಾರೆ.

ಇದನ್ನೂ ಓದಿ: ‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ

ಮೈಸೂರಿನಲ್ಲಿ 101 ಗಣಪತಿ ದೇವಸ್ಥಾನ ತೆರವಿಗೆ ತೀವ್ರ ವಿರೋಧ! ಜಿಲ್ಲಾಡಳಿತ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada