AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದೋರ್ ಸಿಟಿ ಕೌನ್ಸಿಲ್ ಸಭೆ: ನಾಯಿ ಪದಬಳಕೆಗೆ ಆಕ್ಷೇಪ; ‘ಆದರಣೀಯ ಶ್ವಾನ್ ಜೀ’ಎಂದು ಸಂಬೋಧಿಸಿದ ಕೌನ್ಸಿಲರ್

ಇಂದೋರ್​​ನಲ್ಲಿ ಸಿಟಿ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ರುಬಿನಾ ಖಾನ್ ನಾಯಿ ದಾಳಿ ಪ್ರಕರಣ ಪ್ರಸ್ತಾಪಿಸಿದಾಗ ಕೆಲವು ಸದಸ್ಯರು ನಾಯಿ ಎಂಬ ಪದಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರುಬೀನಾ, ಸರಿ ನಾಯಿ ಎಂಬ ಪದ ಬಳಸುವುದಿಲ್ಲ. ಆದರಣೀಯ ಶ್ವಾನ್ ಜೀ ಎಂದೇ ನಾನು ಬಳಸುತ್ತೇನೆ ಎಂದು ತಮ್ಮ ಭಾಷಣದಲ್ಲಿ ಶ್ವಾನ್ ಜೀ ಎಂದು ಹೇಳಿದ್ದು ಸದನದಲ್ಲಿ ಸದಸ್ಯರು ಬಿದ್ದು ಬಿದ್ದು ನಕ್ಕಿದ್ದಾರೆ

ಇಂದೋರ್ ಸಿಟಿ ಕೌನ್ಸಿಲ್ ಸಭೆ: ನಾಯಿ ಪದಬಳಕೆಗೆ ಆಕ್ಷೇಪ; 'ಆದರಣೀಯ ಶ್ವಾನ್  ಜೀ'ಎಂದು ಸಂಬೋಧಿಸಿದ ಕೌನ್ಸಿಲರ್
ರುಬೀನಾ ಖಾನ್
ರಶ್ಮಿ ಕಲ್ಲಕಟ್ಟ
|

Updated on: Feb 20, 2024 | 6:13 PM

Share

ಇಂದೋರ್ ಫೆಬ್ರುವರಿ20: ಇಂದೋರ್​​ನಲ್ಲಿ (Indore) ಸಿಟಿ ಕೌನ್ಸಿಲ್ ಸಭೆ ನಡೆಯುತ್ತಿತ್ತು. ಮೇಯರ್, ಕೌನ್ಸಿಲರ್ ಸೇರಿದಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್ (Congress) ಕೌನ್ಸಿಲರ್ ರುಬಿನಾ ಖಾನ್ ನಾಯಿ ದಾಳಿ (Dog) ಪ್ರಕರಣ ಪ್ರಸ್ತಾಪಿಸಿದರು. ಸದ್ಯ ಈ ವಿಚಾರ ಮಧ್ಯಪ್ರದೇಶದ ಅತ್ಯಂತ ಗಂಭೀರ ಸಮಸ್ಯೆಯಾಗಿದ್ದರೂ ನಗರಸಭೆಯಲ್ಲಿ ರುಬಿನಾ ಖಾನ್ ಪದ ಬಳಕೆ ಕೇಳಿ ಸದಸ್ಯರೆಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ರುಬಿನಾ ತಮ್ಮ ಭಾಷಣದಲ್ಲಿ ನಾಯಿ ಎಂಬ ಪದ ಬಳಸಿದಾಗ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಆ ನಂತರ ರುಬೀನಾ ನಾಯಿಗಳನ್ನು ಆದರಣೀಯ ಶ್ವಾನ್ ಜೀ (ಗೌರವಾನ್ವಿತ ನಾಯಿಯವರೇ) ಎಂದು ಹೇಳಿದ್ದಾರೆ. ರುಬೀನಾ ಭಾಷಣ ಮಾಡುತ್ತಿದ್ದಂತೆ ಸದನಕ್ಕೆ ಸದನವೇ ನಗೆಗಡಲಲ್ಲಿ ಮುಳುಗಿತ್ತು.

ನಾಯಿ ಪದಬಳಕೆ ಮಾಡಿದ ನಂತರ, ರುಬಿನಾ ಖಾನ್, ಸರಿ, ನಾನು ನಾಯಿಗಳಿಗೆ ಗೌರವವನ್ನು ನೀಡಬೇಕೆಂದು ನೀವು ಬಯಸುತ್ತೀರಿ. ಆದ್ದರಿಂದ ಕೇಳು, ಗೌರವಾನ್ವಿತ ನಾಯಿಯೇ, ನಮ್ಮ ವಾರ್ಡ್‌ನಲ್ಲಿ ಹಲವಾರು ಶ್ವಾನ್ ಜೀ ಇವೆ. ಇವುಗಳು ನಮಗೆ ತುಂಬಾ ತೊಂದರೆ ಕೊಡುತ್ತಿವೆ ಮೇಡಂ. ಇದರಿಂದ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗಿದೆ. ಅವರು ಲೇಡಿ ಶ್ವಾನ್ ಜೊತೆಗೂ ಸಂಬಂಧ ಹೊಂದಿದ್ದಾರೆ. ನಾಯಿಯ ಸಂತಾನಹರಣ ಮಾಡಿ ಅದೇ ವಾರ್ಡ್‌ನಲ್ಲಿ ಬಿಟ್ಟರೆ ಆಗದು ಎಂದು ಅವರು ಹೇಳಿದ್ದಾರೆ .

ನಾಯಿಗಾಗಿ ನಗರದ ಹೊರಗೆ ದೊಡ್ಡ ಭೂಮಿಯನ್ನು ಹುಡುಕುವುದು ಪರಿಹಾರವಾಗಿದೆ. ಅವರಿಗಾಗಿ ಅಲ್ಲಿ ಮನೆ ನಿರ್ಮಿಸಬೇಕು. ಇದರೊಂದಿಗೆ ಪ್ರಾಣಿ ಪ್ರಿಯರೂ ಅವುಗಳ ಆರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಖಾನ್ ಹೇಳಿದ್ದಾರೆ.

ಇದನ್ನೂ ಓದಿಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ನ ಪುಟ್ಟಣ್ಣಗೆ ಜಯ, ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಖಭಂಗ

ಮಧ್ಯಪ್ರದೇಶದ ಅನೇಕ ನಗರಗಳಿಂದ ಬೀದಿ ನಾಯಿ ದಾಳಿ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಅದರಲ್ಲೂ ಇಂದೋರ್, ಗ್ವಾಲಿಯರ್, ಜಬಲ್‌ಪುರ್ ಮತ್ತು ಭೋಪಾಲ್ ನಾಯಿಗಳ ಸಂತಾನಹರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿವೆ. ಆದರೆ, ಅಲ್ಲಿನ ವಾಸ್ತವವೇ ಬೇರೆ. ಮಹಾನಗರ ಪಾಲಿಕೆಯ ಕೌನ್ಸಿಲ್ ಸಮ್ಮೇಳನದಲ್ಲಿ ನಗರದ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಸಂತಾನಹರಣ ಮತ್ತು ನಾಯಿ ದಾಳಿ ತಡೆಯಲು  ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಪ್ರತಿಪಕ್ಷಗಳು ಸರ್ಕಾರವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದವು. ಆದರೆ, ಕಾಂಗ್ರೆಸ್ ಕೌನ್ಸಿಲರ್ ರುಬಿನಾ ಖಾನ್  ಭಾಷಣದಿಂದ ಸದನ ಗಂಭೀರ ವಿಷಯವನ್ನೂ  ಕಾಮಿಡಿಯಾಗಿ ಸ್ವೀಕರಿಸುವಂತಾಯಿತು. ರುಬಿನಾ ಖಾನ್ ಅವರ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಂದಹಾಗೆ  ಗೌರವ ಕೊಟ್ಟು ಶ್ವಾನ ಜೀ ಎಂದು ಕರೆದರೆ ನಾಯಿ ಕಚ್ಚಲ್ವಾ? ಎಂದು ನೆಟ್ಟಿಗರು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!