AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಉಸಿರುಗಟ್ಟಿ ಸಾವು-ಬದುಕಿನ ನಡುವೆ ನರಳುತ್ತಿದ್ದ ಪುಟ್ಟ ಮಗುವನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ

ಮೇ 29ನೇ ತಾರೀಕಿನಂದು ಮಗುವಿಗೆ ಔಷಧ ಹಾಕಲಾಗಿತ್ತು. ಗಂಟಲಲ್ಲಿ ಸಿಲುಕಿಕೊಂಡಿದ್ದ ಔಷಧದಿಂದ ಮಗುವಿಕೆ ಉಸಿರಾಟದ ಸಮಸ್ಯೆ ಉಂಟಾಗತೊಡಗಿತು. ಕೆಲಸ ಗಂಟೆಗಳಲ್ಲಿ ಮಗುವಿನ ಮುಖ ನೇರಳ ಬಣ್ಣಕ್ಕೆ ತಿರುಗಲು ಆರಂಭಿಸಿತು. ಹೀಗಿರುವಾಗ ಮನೆಯವರಿಗೆ ಆತಂಕ ಹೆಚ್ಚಾಗಿದೆ.

Viral Photo: ಉಸಿರುಗಟ್ಟಿ ಸಾವು-ಬದುಕಿನ ನಡುವೆ ನರಳುತ್ತಿದ್ದ ಪುಟ್ಟ ಮಗುವನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ
ಉಸಿರುಗಟ್ಟಿ ಸಾವು-ಬದುಕಿನ ನಡುವೆ ನರಳುತ್ತಿದ್ದ ಪುಟ್ಟ ಮಗುವನ್ನು ರಕ್ಷಿಸಿದ ಪೊಲೀಸ್
TV9 Web
| Edited By: |

Updated on: Jun 10, 2021 | 10:28 AM

Share

ಏನೂ ಅರಿಯದ ಪುಟ್ಟ ಮಗುವೊಂದು ಉಸಿರುಗಟ್ಟಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿತ್ತು. ಮನೆಯವರಿಗೆ ಏನೂ ಮಾಡಲಾಗದ ಸಂಕಟ. ಆ ಭಯಂಕರ ಸನ್ನಿವೇಶದಲ್ಲಿ ಪೊಲೀಸ್​ ಸಿಬ್ಬಂದಿಯೋರ್ವರು ದೃತಿಗೆಡದೇ ಗಟ್ಟಿ ಮನಸ್ಸಿನಿಂದ ಮಗುವನ್ನು ರಕ್ಷಿಸಿದ್ದಾರೆ. ಏನೂ ಅರಿಯದ ಆ ಪುಟ್ಟ ಮಗು ಬಳಲುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ ಎಂದು ನೆಟ್ಟಿಗರೋರ್ವರು ಹೇಳಿದ್ದಾರೆ. ಮಗು ಪ್ರಾಣಕ್ಕೆ ಅಪಾಯವಾಗದಂತೆ ರಕ್ಷಿಸಿದ ಅಧಿಕಾರಿ ಕೋಡಿ ಅವರಿಗೆ ಶ್ಲಾಘನೆ ವ್ಯಕ್ತವಾಗಿದೆ.

ಮೇ 29ನೇ ತಾರೀಕಿನಂದು ಮಗುವಿಗೆ ಔಷಧ ಹಾಕಲಾಗಿತ್ತು. ಗಂಟಲಲ್ಲಿ ಸಿಲುಕಿಕೊಂಡಿದ್ದ ಔಷಧದಿಂದ ಮಗುವಿಕೆ ಉಸಿರಾಟದ ಸಮಸ್ಯೆ ಉಂಟಾಗತೊಡಗಿತು. ಕೆಲಸ ಗಂಟೆಗಳಲ್ಲಿ ಮಗುವಿನ ಮುಖ ನೇರಳ ಬಣ್ಣಕ್ಕೆ ತಿರುಗಲು ಆರಂಭಿಸಿತು. ಹೀಗಿರುವಾಗ ಮನೆಯವರಿಗೆ ಆತಂಕ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಮನೆಗೆ ಬಂದಿದ್ದ 23 ವರ್ಷದ ಕೋಡಿ​ ಎಂಬ ಪೊಲೀಸ್ ಅಧಿಕಾರಿ ಮಗುವನ್ನು ರಕ್ಷಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಪಾಟ್ಸ್​ವಿಲ್ಲೆ ಅರ್ಕಾನ್ಸಾಸ್​ ಪೊಲೀಸ್​ ಇಲಾಖೆ, ಅಧಿಕಾರಿ ಕೋಡಿಯವರು ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೋಡಿ ಅವರು ಮಗುವನ್ನು ತಲೆಗೆಳಗಾಗಿ ತಿರುಗಿಸಿ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಔಷಧ ಹೊರಬರುವಂತೆ ಮಾಡಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಮಗುವಿನ ಬಾಯಿಯಿಂದ ಸಿಲುಕಿಕೊಂಡಿದ್ದ ಎಲ್ಲಾ ಔಷಧಿ ಹೊರ ಬಂದಿದೆ. ಇದರಿಂದ ಮಗು ಮೊದಲು ಅಳಲು ಪ್ರಾರಂಭಿಸಿತು. ಆ ಬಳಿಕ ಉಸಿರುಗಟ್ಟುವಿಕೆಯಿಂದ ಹೊರಬಂದಿದೆ. ಬಳಿಕ ಮಗು ಮೊದಲಿನಂತೆಯೇ ನಗುತ್ತಾ ಇರುವುದನ್ನು ಕಂಡ ಪೋಷಕರು ಸಂತೋಷಗೊಂಡಿದ್ದಾರೆ.

ಈ ಹಿಂದೆ ಕೋಡಿ ಅವರು ಇದೇ ರೀತಿಯ ಘಟನೆಯೊಂದನ್ನು ಎದುರಿಸಿದ್ದರು. ಅವರ ಸ್ವಂತ ಮಗಳಿಗೆ ಗಂಟಲಲ್ಲಿ ಉಸಿರುಗಟ್ಟಿದ್ದ ಸಂದರ್ಭದಲ್ಲಿ ಈ ರೀತಿ ಮಾಡಿ ಯಶಸ್ವಿಯಾಗಿದ್ದರು.

‘ನನಗೆ ಒಂದು ಕ್ಷಣ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಕೈ ಕಾಲುಗಳೆಲ್ಲ ನಡುಗುತ್ತಿತ್ತು. ಒಂದು ಕಡೆ ಅಳು ಇನ್ನೊಂದು ಕಡೆ ಸಂಕಟ ಈ ಎರಡರ ಮಧ್ಯೆ ಬೇರೆ ಯೋಚನೆಗಳೇ ಬರುತ್ತಿರಲಿಲ್ಲ. ಮುಗು ಮೊದಲಿನಂತೆಯೇ ಆಗಿದ್ದನ್ನು ಕಂಡು ಬಹಳ ಸಂತೋಷ ವಾಯಿತು. ನನ್ನ ಜೀವವೇ ಹೋದಷ್ಟು ಸಂಕಟದಲ್ಲಿದ್ದ ನನಗೆ ಸಂತೋಷದ ಕಣ್ಣೀರು ಬಂತು. ಕೋಡಿ ಅವರಿಗೆ ನಾವು ಎಂದೂ ಕೃತಜ್ಞರಾಗಿರುತ್ತೇವೆ ಎಂದು ಪೋಷಕರು ಸ್ಥಳೀಯ ಸುದ್ದಿ ಸಂಸ್ಥೆಯೊಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ನೋಡನೋಡುತ್ತಿದ್ದಂತೆ ಬಾಯ್ಬಿಟ್ಟ ಭೂಮಿ; ಪಾತಾಳಕ್ಕೆ ಬಿದ್ದ ಮೂರು ಕಾರುಗಳು, ಭಯಾನಕ ದೃಶ್ಯ ಸೆರೆ

Viral Video: ಸಮವಸ್ತ್ರದಲ್ಲೇ ಹಿಂದಿ ಹಾಡಿಗೆ ಆ್ಯಕ್ಟಿಂಗ್​; ಜವಾಬ್ದಾರಿ ಮರೆತ ಪೊಲೀಸರಿಗೆ ಶೋಕಾಸ್​ ನೋಟಿಸ್​

Follow Us
Web contact
Web contact

TV9 Kannada

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ