AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ ಚರ್ಚೆ ವೇಳೆ ಇಮ್ರಾನ್ ಖಾನ್ ಆಪ್ತ ನಾಯಕಿ ಫಿರ್ದೋಸ್​ನಿಂದ ವಿರೋಧ ಪಕ್ಷದ ಸಂಸದರಿಗೆ ಕಪಾಳಮೋಕ್ಷ; ವಿಡಿಯೋ ವೈರಲ್

ಜಾವೇದ್​ ಚೌಧರಿ ಆಯೋಜಿಸಿದ್ದ ಎಕ್ಸ್​ಪ್ರೆಸ್​ ನ್ಯೂಸ್​ ಟಾಕ್​ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಗಮನಿಸುವಂತೆ ಇಮ್ರಾನ್ ಖಾನ್ ಆಪ್ತೆ ಮಹಿಳಾ ನಾಯಕಿ ಫಿರ್ದೋಸ್​ ಮತ್ತು ಪಿಪಿಪಿಯ ಸಂಸದ ಮಂಡೋಖೆಲ್​ ಪರಸ್ಪರ ಕಿತ್ತಾಡಿಕೊಂಡ ದೃಶ್ಯ ವೈರಲ್​ ಆಗಿದೆ.

ಟಿವಿ ಚರ್ಚೆ ವೇಳೆ ಇಮ್ರಾನ್ ಖಾನ್ ಆಪ್ತ ನಾಯಕಿ ಫಿರ್ದೋಸ್​ನಿಂದ ವಿರೋಧ ಪಕ್ಷದ ಸಂಸದರಿಗೆ ಕಪಾಳಮೋಕ್ಷ; ವಿಡಿಯೋ ವೈರಲ್
ಇಮ್ರಾನ್ ಖಾನ್ ಆಪ್ತೆ ಮಹಿಳಾ ನಾಯಕಿ ಫಿರ್ದೋಸ್​ನಿಂದ ವಿರೋಧ ಪಕ್ಷದ ಸಂಸದರಿಗೆ ಕಪಾಳಮೋಕ್ಷ
TV9 Web
| Edited By: |

Updated on:Jun 10, 2021 | 2:52 PM

Share

ಸುದ್ದಿ ಕಾರ್ಯಕ್ರಮವೊಂದರಲ್ಲಿ ಇಮ್ರಾನ್ ಖಾನ್ ಆಪ್ತೆ, ಪಿಟಿಐ ಪಕ್ಷದ ಮಹಿಳಾ ನಾಯಕಿ ಫಿರ್ದೋಸ್​ ಅವರು ಪಿಪಿಪಿ ಪಕ್ಷದ ಸಂಸದ ಖಾದಿರ್​ ಖಾನ್​ ಮಂಡೋಖೇಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಟಿವಿ ಕಾರ್ಯಕ್ರಮದಲ್ಲಿ ಫಿರ್ದೋಸ್​ ತುಂಬಾ ಕೋಪಗೊಂಡು ಸಂಸದರ ಕಾಲರ್​ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ. ಸುದ್ದಿ ವಾಹಿನಿಯ ಆ್ಯಂಕರ್​ ಮುಂದೆಯೇ ನಡೆದಿರುವ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

ಜಾವೇದ್​ ಚೌಧರಿ ಆಯೋಜಿಸಿದ್ದ ಎಕ್ಸ್​ಪ್ರೆಸ್​ ನ್ಯೂಸ್​ ಟಾಕ್​ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ ಇಮ್ರಾನ್ ಖಾನ್ ಆಪ್ತೆ ಫಿರ್ದೋಸ್​ ಮತ್ತು ಪಿಪಿಪಿ ಪಕ್ಷದ ಸಂಸದ ಮಂಡೋಖೆಲ್​ ಪರಸ್ಪರ ಕಿತ್ತಾಡಿಕೊಂಡ ದೃಶ್ಯ ವೈರಲ್​ ಆಗಿದೆ.

ಘಟನೆ ವೈರಲ್​ ಆದ ಬಳಿಕ ಫಿರ್ದೋಸ್​ ಖಾನ್​ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಒಂದು ಭಾಗ ಮಾತ್ರ ಬಿಡುಗಡೆಯಾಗಿದೆ. ಸಂಪೂರ್ಣ ವಿಡಿಯೋವನ್ನೂ ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ನಾವಿಬ್ಬರೂ ಕುಳಿತಿದ್ದೆವು. ಪಿಪಿಪಿಯ ಖಾದಿರ್​ ಮಂಡೋಖೇಲ್​ ನನಗೆ ಬೆದರಿಕೆ ಹಾಕಿದರು. ನನ್ನ ತೀರಿಹೋದ ತಂದೆ ಮತ್ತು ನನ್ನ ಬಗ್ಗೆ ಕೆಟ್ಟ  ಭಾಷೆಗ ಬಳಸಿ ಅವಮಾನಿಸಿದರು. ನನ್ನ ರಕ್ಷಣೆಗಾಗಿ ನಾನು ಮುಂದಿನ ಹೆಜ್ಜೆ ಇಡಲೇಬೇಕಾಯಿತು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

Throwback! ಪಾಕಿಸ್ತಾನದ ವಿರುದ್ಧ ವೀರೂ ದಾದಾ ಎರಡೇ ಎರಡು ಬಾಲ್​ನಲ್ಲಿ 21 ರನ್ ಚಚ್ಚಿದ್ದು ಹೇಗೆ ಅಂತೀರಾ…?

ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ, ವಿಶ್ವಸಂಸ್ಥೆಗೆ 88 ಉಗ್ರರ ಅಡ್ರಸ್ ಕೊಟ್ಟು ಪಾಕಿಸ್ತಾನ್ ನಾಟಕ

Published On - 1:42 pm, Thu, 10 June 21

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ