AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಸರಿನಲ್ಲಿ ಪ್ರೀ-ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಂಡ ಜೋಡಿ: ವೈರಲ್​ ಆದ ಫೋಟೋಗಳು

ಸರಿನಲ್ಲಿ ಮಾಡಿಕೊಂಡಿರುವ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಸದ್ಯ ನೆಟ್ಟಿಗರ ಮನ ಸೆಳೆದಿದೆ. ಈ ಹೊಸ ಪರಿಕಲ್ಪನೆಯ ಪೋಟೋಶೂಟ್​ಗೆ ಬಳಕೆದಾರರು ವಾವ್​ ಎಂದಿದ್ದಾರೆ.

ಕೆಸರಿನಲ್ಲಿ ಪ್ರೀ-ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಂಡ ಜೋಡಿ: ವೈರಲ್​ ಆದ ಫೋಟೋಗಳು
ಕೆಸರಿನಲ್ಲಿ ಫೋಟೋಶೂಟ್​ ಮಾಡಿಸಿಕೊಂಡ ಜೋಡಿ
TV9 Web
| Edited By: |

Updated on: Jan 06, 2022 | 2:46 PM

Share

ಪ್ರೀ ವೆಡ್ಡಿಂಗ್ ಫೋಟೋಶೂಟ್​ ಎಂದರೆ ಹೊಸ ಟ್ರೆಂಡ್​ ಆಗಿದೆ. ಅದರಲ್ಲೂ ವಿಭಿನ್ನ ರೀತಿಯ ಪರಿಕಲ್ಪನೆಗಳೊಂದಿಗೆ ಮದುವೆಗೂ ಮೊದಲು ಫೋಟೋ ತೆಗೆಸಿಕೊಳ್ಳಬೇಕು ಎನ್ನುವುದು ಎಲ್ಲಾ ಹೊಸ ಜೋಡಿಗಳ ಹೆಬ್ಬಯಕೆಯಾಗಿರುತ್ತದೆ. ಇದಕ್ಕೆ ತಕ್ಕ ಹಾಗೆ ಫೋಟೋಗ್ರಾಫರ್​ಗಳು ಹಲವು ರೀತಿಯ ಕ್ಯಾಮಾರಾಗಳನ್ನು ಹಿಡಿದು ಫೋಟೋಶೂಟ್​ಗೆ ಬರುತ್ತಾರೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ​ ಈ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಜಾರಿಯಲ್ಲಿದೆ. ಮದುವೆಗೂ ಮೊದಲು ಒಂದಷ್ಟು ಫೋಟೋಗಳನ್ನು ತಗೆಸಿಕೊಂಡು ಅದಕ್ಕೊಂದು ಚೆಂದದ ಫ್ರೆಮ್​ ಹಾಕಿ ಮನೆಯ ಗೋಡೆಯ ಮೇಲೆ ತೂಗುಹಾಕಬೇಕೆಂದು ಕನಸು ಕಾಣುತ್ತಾರೆ. ಇದಕ್ಕೆ ಮಾಡುವ ವಿಭಿನ್ನ ಪರಿಕಲ್ಪನೆಗಳು ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. 

ಇದೀಗ ತಜಕಿಸ್ತಾನದ ಜೋಡಿಯೊಂದು ಮಾಡಿಕೊಂಡಿರುವ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಫೂಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಕೆಸರಿನಲ್ಲಿ ಮಾಡಿಕೊಂಡಿರುವ ಪ್ರೀ ವೆಡ್ಡಿಂಗ್​  ಫೋಟೋಶೂಟ್​ ಸದ್ಯ ನೆಟ್ಟಿಗರ ಮನ ಸೆಳೆದಿದೆ. ಈ ಹೊಸ ಪರಿಕಲ್ಪನೆಯ ಪೋಟೋಶೂಟ್​ಗೆ ಬಳಕೆದಾರರು ವಾವ್​ ಎಂದಿದ್ದಾರೆ.

View this post on Instagram

A post shared by ????? ?????? (@bumagaz)

ಮುರಾತ್ ಜುರಾಯೆವ್ ಮತ್ತು ಕಮಿಲ್ಲಾ  ಎನ್ನುವ ಜೋಡಿ ಕೆಸರಿನಲ್ಲಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಕೆಮಿಲ್ಲಾ ಅಂದವಾದ ಬಿಳಿಬಣ್ಣದ ಗೌನ್​ ತೊಟ್ಟಿದ್ದು ಮುರಾತ್​ ಕಪ್ಪು-ಬಿಳಿಯ ಸೂಟ್​ ಧರಿಸಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದು, ಕೆಸರನಲ್ಲಿ ಜಾರಿಬಿದ್ದ, ಬಟ್ಟೆ ತುಂಬಾ ಕೆಸರು ಮೆತ್ತಿಕೊಂಡ ಫೋಟೋಗಳು ವೈರಲ್​ ಆಗಿವೆ.  ಕೆಮಿಲ್ಲಾ ಜೋಡಿ ಹಂಚಿಕೊಂಡ ಪೋಟೋಗಳಿಗೆ 9 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿದ್ದು, ಹಲವರು ಶೇರ್​ ಮಾಡಿದ್ದಾರೆ.

ಇದನ್ನೂ ಓದಿ:

ಬಂಗಾರದ ಹೊದಿಕೆಯಿರುವ ಈ ಮಿಠಾಯಿಯ ಬೆಲೆ ಕೆಜಿಗೆ 16 ಸಾವಿರ ರೂ.!

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು