AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್​ಗೆ ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ

Delivery Agent : ಆರ್ಡರ್ ಮಾಡಿದ್ದು ತಡವಾದರೆ ಕಂಪೆನಿಗೆ ಕಂಪ್ಲೆಂಟ್​ ಮಾಡುತ್ತೀರಿ, ಪರ್ಯಾಯವಾಗಿ ಇನ್ನೇನೋ ಆಫರ್ ಪಡೆಯುತ್ತೀರಿ. ಜೋರಾಗಿ ಕೂಗಾಡುತ್ತೀರಿ, ಮೌನ ತಾಳುತ್ತೀರಿ. ಆದರೆ ಈ ಗ್ರಾಹಕರು ಮಾತ್ರ ವಿಭಿನ್ನ! ನೋಡಿ ವಿಡಿಯೋ

ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್​ಗೆ ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ
ಆಯಿಯೇ ಆಪಕಾ ಇಂತಜಾರ್ ಥಾ
TV9 Web
| Edited By: ಶ್ರೀದೇವಿ ಕಳಸದ|

Updated on:Oct 08, 2022 | 1:06 PM

Share

Viral Video : ಅಡುಗೆ ಮಾಡಲು ಸಮಯವಿಲ್ಲವೆಂದೋ, ಉದಾಸೀನವೆಂದೋ ಅಥವಾ ಇನ್ನೇನೋ ಕಾರಣಕ್ಕೆ ಫುಡ್​ ಆರ್ಡರ್ ಮಾಡುತ್ತೀರಿ. ಆದರೆ ಕಾರಣಾಂತರದಿಂದ ಡೆಲಿವರಿ ಏಜೆಂಟ್​ ತಡವಾಗಿ ನಿಮ್ಮನ್ನು ತಲುಪುತ್ತಾರೆ. ಆಗ ಏನು ಮಾಡುತ್ತೀರಿ? ಜೋರಾಗಿ ಕೂಗಾಡುತ್ತೀರಿ, ಮೌನ ತಾಳುತ್ತೀರಿ ಅಥವಾ ತಡವಾಗಿದ್ದಕ್ಕೆ ಕಂಪೆನಿಗೆ ಕಂಪ್ಲೆಂಟ್​ ಮಾಡುತ್ತೀರಿ, ಪರ್ಯಾಯವಾಗಿ ಇನ್ನೇನೋ ಆಫರ್ ಪಡೆಯುತ್ತೀರಿ. ಇದೆಲ್ಲವೂ ಮಾಮೂಲು. ಆದರೆ ಆ ವಿಳಂಬಕ್ಷಣಗಳನ್ನು ಸಂತಸಕ್ಕೆ ತಿರುಗಿಸಿಕೊಳ್ಳುವ ಹಾಗೆ ಎಂದಾದರೂ ಯೋಚಿಸಿದ್ದೀರಾ? ಹಾಗಿದ್ದರೆ ಈ ವಿಡಿಯೋ ನೋಡಿ. ಸಂಜೀವ್ ತ್ಯಾಗಿ ಎನ್ನುವ ಇನ್​ಸ್ಟಾಗ್ರಾಂ ಖಾತೆದಾರರು ದಸರಾ ದಿನದಂದು ಹಲ್ದೀರಾಮ್ಸ್​ನಿಂದ ಚೋಲೆ ಭಟುರೆ ಆರ್ಡರ್ ಮಾಡಿದ್ದರು. ಏಜೆಂಟ್​ ಒಂದು ಗಂಟೆ ತಡವಾಗಿ ಬಂದರು ಮುಂದೇನಾಯಿತು ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಗು ಬರುತ್ತಿದೆಯಲ್ಲ? ದೆಹಲಿಯ ಟ್ರಾಫಿಕ್ ಜಾಮ್​ನಿಂದ ಒಂದು ಗಂಟೆ ತಡವಾಗಿ ಬಂದ ಡೆಲಿವರಿ ಏಜೆಂಟ್​​ ಇಂಥ ಸರ್​ಪ್ರೈಝ್​ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ‘ಆಯಿಯೇ ಆಪಕಾ ಇಂತಜಾರ ಥಾ’ ಎಂದು ಹಾಡುತ್ತ ಡೆಲಿವರಿ ಏಜೆಂಟ್​ಗೆ ಸಂಜೀವ್​ ತಿಲಕ ಹಚ್ಚಿ ಸ್ವಾಗತಿಸಿದ್ದಾರೆ. ತಡವಾಗಿದ್ದಕ್ಕೆ ಬೈಗುಳ ತಿನ್ನಬೇಕಲ್ಲ ಎಂದುಕೊಂಡು ಬಂದಿದ್ದ ಏಜೆಂಟ್​ ನಸುನಗುತ್ತ ಆರತಿ ಮಾಡಿಸಿಕೊಂಡು ವಾಪಾಸಾಗಿದ್ದಾರೆ.

ಈ ವಿಡಿಯೋ ಅನ್ನು ಮೂರು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಪ್ರತಿಕ್ರಿಯೆಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ಬಹಳ ಖುಷಿ ಕೊಡುತ್ತದೆ ಈ ವಿಡಿಯೋ ಎಂದು ಕೆಲವರು, ಈ ಕಾಯುವಿಕೆ ಮತ್ತು ತಡ ಎನ್ನುವ ಸನ್ನಿವೇಶವನ್ನು ಹೀಗೆ ಸಂತಸದಿಂದ ಮಾರ್ಪಾಡಿಸಿಕೊಂಡ ಸಂಜೀವ್​ ಅವರಿಗೆ ಅಭಿನಂದನೆ ಎಂದಿದ್ದಾರೆ ಹಲವರು.

ಹೇಗಿದೆ ಈ ಐಡಿಯಾ? ಕೋಪ, ಬೇಜಾರು, ಅದು ಇದು ಎಲ್ಲ ಇದ್ದದ್ದೇ. ಒಮ್ಮೆ ಭಿನ್ನವಾಗಿ ಆಲೋಚಿಸುವುದನ್ನು ಕಲಿತರೆ ಎಲ್ಲವೂ ತಿಳಿಯಾಗಿ ಸುಂದರವಾದ ನೆನಪಾಗಿ ದಾಖಲಾಗುವುದಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:04 pm, Sat, 8 October 22

Follow Us
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು