AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್​ಗೆ ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ

Delivery Agent : ಆರ್ಡರ್ ಮಾಡಿದ್ದು ತಡವಾದರೆ ಕಂಪೆನಿಗೆ ಕಂಪ್ಲೆಂಟ್​ ಮಾಡುತ್ತೀರಿ, ಪರ್ಯಾಯವಾಗಿ ಇನ್ನೇನೋ ಆಫರ್ ಪಡೆಯುತ್ತೀರಿ. ಜೋರಾಗಿ ಕೂಗಾಡುತ್ತೀರಿ, ಮೌನ ತಾಳುತ್ತೀರಿ. ಆದರೆ ಈ ಗ್ರಾಹಕರು ಮಾತ್ರ ವಿಭಿನ್ನ! ನೋಡಿ ವಿಡಿಯೋ

ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್​ಗೆ ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ
ಆಯಿಯೇ ಆಪಕಾ ಇಂತಜಾರ್ ಥಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 08, 2022 | 1:06 PM

Viral Video : ಅಡುಗೆ ಮಾಡಲು ಸಮಯವಿಲ್ಲವೆಂದೋ, ಉದಾಸೀನವೆಂದೋ ಅಥವಾ ಇನ್ನೇನೋ ಕಾರಣಕ್ಕೆ ಫುಡ್​ ಆರ್ಡರ್ ಮಾಡುತ್ತೀರಿ. ಆದರೆ ಕಾರಣಾಂತರದಿಂದ ಡೆಲಿವರಿ ಏಜೆಂಟ್​ ತಡವಾಗಿ ನಿಮ್ಮನ್ನು ತಲುಪುತ್ತಾರೆ. ಆಗ ಏನು ಮಾಡುತ್ತೀರಿ? ಜೋರಾಗಿ ಕೂಗಾಡುತ್ತೀರಿ, ಮೌನ ತಾಳುತ್ತೀರಿ ಅಥವಾ ತಡವಾಗಿದ್ದಕ್ಕೆ ಕಂಪೆನಿಗೆ ಕಂಪ್ಲೆಂಟ್​ ಮಾಡುತ್ತೀರಿ, ಪರ್ಯಾಯವಾಗಿ ಇನ್ನೇನೋ ಆಫರ್ ಪಡೆಯುತ್ತೀರಿ. ಇದೆಲ್ಲವೂ ಮಾಮೂಲು. ಆದರೆ ಆ ವಿಳಂಬಕ್ಷಣಗಳನ್ನು ಸಂತಸಕ್ಕೆ ತಿರುಗಿಸಿಕೊಳ್ಳುವ ಹಾಗೆ ಎಂದಾದರೂ ಯೋಚಿಸಿದ್ದೀರಾ? ಹಾಗಿದ್ದರೆ ಈ ವಿಡಿಯೋ ನೋಡಿ. ಸಂಜೀವ್ ತ್ಯಾಗಿ ಎನ್ನುವ ಇನ್​ಸ್ಟಾಗ್ರಾಂ ಖಾತೆದಾರರು ದಸರಾ ದಿನದಂದು ಹಲ್ದೀರಾಮ್ಸ್​ನಿಂದ ಚೋಲೆ ಭಟುರೆ ಆರ್ಡರ್ ಮಾಡಿದ್ದರು. ಏಜೆಂಟ್​ ಒಂದು ಗಂಟೆ ತಡವಾಗಿ ಬಂದರು ಮುಂದೇನಾಯಿತು ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಗು ಬರುತ್ತಿದೆಯಲ್ಲ? ದೆಹಲಿಯ ಟ್ರಾಫಿಕ್ ಜಾಮ್​ನಿಂದ ಒಂದು ಗಂಟೆ ತಡವಾಗಿ ಬಂದ ಡೆಲಿವರಿ ಏಜೆಂಟ್​​ ಇಂಥ ಸರ್​ಪ್ರೈಝ್​ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ‘ಆಯಿಯೇ ಆಪಕಾ ಇಂತಜಾರ ಥಾ’ ಎಂದು ಹಾಡುತ್ತ ಡೆಲಿವರಿ ಏಜೆಂಟ್​ಗೆ ಸಂಜೀವ್​ ತಿಲಕ ಹಚ್ಚಿ ಸ್ವಾಗತಿಸಿದ್ದಾರೆ. ತಡವಾಗಿದ್ದಕ್ಕೆ ಬೈಗುಳ ತಿನ್ನಬೇಕಲ್ಲ ಎಂದುಕೊಂಡು ಬಂದಿದ್ದ ಏಜೆಂಟ್​ ನಸುನಗುತ್ತ ಆರತಿ ಮಾಡಿಸಿಕೊಂಡು ವಾಪಾಸಾಗಿದ್ದಾರೆ.

ಈ ವಿಡಿಯೋ ಅನ್ನು ಮೂರು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಪ್ರತಿಕ್ರಿಯೆಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ಬಹಳ ಖುಷಿ ಕೊಡುತ್ತದೆ ಈ ವಿಡಿಯೋ ಎಂದು ಕೆಲವರು, ಈ ಕಾಯುವಿಕೆ ಮತ್ತು ತಡ ಎನ್ನುವ ಸನ್ನಿವೇಶವನ್ನು ಹೀಗೆ ಸಂತಸದಿಂದ ಮಾರ್ಪಾಡಿಸಿಕೊಂಡ ಸಂಜೀವ್​ ಅವರಿಗೆ ಅಭಿನಂದನೆ ಎಂದಿದ್ದಾರೆ ಹಲವರು.

ಹೇಗಿದೆ ಈ ಐಡಿಯಾ? ಕೋಪ, ಬೇಜಾರು, ಅದು ಇದು ಎಲ್ಲ ಇದ್ದದ್ದೇ. ಒಮ್ಮೆ ಭಿನ್ನವಾಗಿ ಆಲೋಚಿಸುವುದನ್ನು ಕಲಿತರೆ ಎಲ್ಲವೂ ತಿಳಿಯಾಗಿ ಸುಂದರವಾದ ನೆನಪಾಗಿ ದಾಖಲಾಗುವುದಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:04 pm, Sat, 8 October 22

ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಸ್, MLCಯಲ್ಲಿ ಸಿಡಿಲಬ್ಬರ
ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಸ್, MLCಯಲ್ಲಿ ಸಿಡಿಲಬ್ಬರ
ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್
ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್
ಸೈಪ್ರಸ್​ಗೆ ಹೊರಟ ಪ್ರಧಾನಿ ಮೋದಿ
ಸೈಪ್ರಸ್​ಗೆ ಹೊರಟ ಪ್ರಧಾನಿ ಮೋದಿ