AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​​ನ ದೇವಾಲಯದ ಆನೆ ವಿಗ್ರಹದಡಿಯಲ್ಲಿ ಸಿಲುಕಿದ ಭಕ್ತ; ಇಷ್ಟೊಂದು ಭಕ್ತಿ ಒಳ್ಳೇದಲ್ಲ ಎಂದ ನೆಟ್ಟಿಗರು

Viral Video ವಿಗ್ರಹದಡಿಯಲ್ಲಿ ಸಿಲುಕಿಕೊಂಡು ಅದರಿಂದ ಹೊರಬರಲು ತುಂಬಾ ಪ್ರಯತ್ನಿಸಿರುವುದನ್ನು ನೋಡಿದರೆ ಅವರು ದೇವಾಲಯದಲ್ಲಿ ಆಚರಣೆಯನ್ನು ಪಾಲಿಸುತ್ತಿದ್ದರು ಎಂದು ತೋರುತ್ತದೆ.

ಗುಜರಾತ್​​ನ ದೇವಾಲಯದ ಆನೆ ವಿಗ್ರಹದಡಿಯಲ್ಲಿ ಸಿಲುಕಿದ ಭಕ್ತ; ಇಷ್ಟೊಂದು ಭಕ್ತಿ ಒಳ್ಳೇದಲ್ಲ ಎಂದ ನೆಟ್ಟಿಗರು
ಆನೆಯ ವಿಗ್ರಹದಡಿ ಸಿಲುಕಿದ ಭಕ್ತ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Dec 07, 2022 | 10:32 PM

Share

ಭಾರತ ವೈವಿಧ್ಯಮಯ ಧರ್ಮಗಳ ನಾಡು. ದೇವರ ಆಶೀರ್ವಾದ ಪಡೆಯಲು ಜನರು ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಕೆಲವೊಮ್ಮೆ, ಜನರು ದೇವರನ್ನು ಮೆಚ್ಚಿಸುವುದಕ್ಕಾಗಿ ವಿಭಿನ್ನವಾಗಿರುವುದನ್ನು ಮಾಡಲು ಪ್ರಯತ್ನಿಸುತ್ತಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಕ್ತನೊಬ್ಬ ದೇವಸ್ಥಾನದಲ್ಲಿರುವ ಆನೆಯ ಪ್ರತಿಮೆಯ (elephant statue) ಅಡಿಯಲ್ಲಿ ನುಸುಳಿ, ಹೊರಬರಲು ಒದ್ದಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.ಅಂದಹಾಗೆ ಈ ವಿಡಿಯೊ ಗುಜರಾತ್​​ನದ್ದು(Gujarat). ವ್ಯಕ್ತಿ ಈ ವಿಗ್ರಹದಡಿಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾನೆಯೇ ಎಂಬುದು ವಿಡಿಯೊದಲ್ಲಿ ಸ್ಪಷ್ಟವಾಗಿಲ್ಲ. ವಿಗ್ರಹದಡಿಯಲ್ಲಿ ಸಿಲುಕಿಕೊಂಡು ಅದರಿಂದ ಹೊರಬರಲು ತುಂಬಾ ಪ್ರಯತ್ನಿಸಿರುವುದನ್ನು ನೋಡಿದರೆ ಅವರು ದೇವಾಲಯದಲ್ಲಿ ಆಚರಣೆಯನ್ನು ಪಾಲಿಸುತ್ತಿದ್ದರು ಎಂದು ತೋರುತ್ತದೆ. ಟ್ವಿಟ್ಟರ್ ಬಳಕೆದಾರ ನಿತಿನ್ ಹಂಚಿಕೊಂಡ ವಿಡಿಯೊದಲ್ಲಿ, ವಿಗ್ರಹದೆಡೆಯಿಂದ ಹೊರಬರಲು ಮನುಷ್ಯ ತನ್ನ ಕೈ ಮತ್ತು ದೇಹವನ್ನು ಕುಗ್ಗಿಸಿ ಒದ್ದಾಡುತ್ತಿರುವುದು ಕಾಣಿಸುತ್ತದೆ. ದೇವಾಲಯದ ಅರ್ಚಕರು ಕೂಡಾ ವ್ಯಕ್ತಿಗೆ ಸಹಾಯ ಮಾಡುತ್ತಿರುವುದು ಕಾಣಿತ್ತದೆ. ಅಲ್ಲಿ ನೆರಿದಿದ್ದ ಜನರುರು ಕೂಡಾ ಭಕ್ತನಿಗೆ ಸಲಹೆಗಳನ್ನು ನೀಡುತ್ತಿರುವುದು ಕಾಣಬಹುದು.

ಟ್ವಿಟರ್​​ನಲ್ಲಿ  ಈ ವಿಡಿಯೊವನ್ನು 1300ಕ್ಕಿಂತಲೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 2019 ರಲ್ಲಿ ಅಂತಹುದೇ ಒಂದು ಘಟನೆ ಸಂಭವಿಸಿದ್ದು, ಆಚರಣೆಯ ಭಾಗವಾಗಿ ಸಣ್ಣ ಆನೆಯ ಪ್ರತಿಮೆಯ ಕಾಲುಗಳ ನಡುವೆ ತೆವಳಿದ ಮಹಿಳಾ ಭಕ್ತೆಯೊಬ್ಬರು ಸಿಲುಕಿಕೊಂಡು ಸ್ವಲ್ಪ ಸಮಯದ ನಂತರ ಹೊರಬಂದಿದ್ದರು.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?