AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಕ್ಸ್​ ಬದಲಾಗಿ ಶ್ರೀ ಹರಿ; ಹಿಂದಿಯಲ್ಲಿ ಬರೆದ ಔಷಧಿಚೀಟಿ ವೈರಲ್

Prescription in Hindi : ಅಮಿತ್​ ಷಾ ಅವರ ಭಾಷಣದಿಂದ ಪ್ರೇರೇಪಣೆಗೊಂಡು ಹಿಂದಿಯಲ್ಲಿ ಔಷಧಿಚೀಟಿ ಬರೆದೆ ಎಂದಿದ್ದಾರೆ ಈ ವೈದ್ಯರು. ಡಾಕ್ಟ್ರೆ, ಬಿಜೆಪಿಯಲ್ಲಿ ಉಜ್ವಲ ಭವಿಷ್ಯವಿದೆ ನಿಮಗೆ, ಇನ್ನು ಅನುವಾದವೂ ಸೂಪರ್ ಎಂದಿದ್ದಾರೆ ನೆಟ್ಟಿಗರು.

ಆರ್​ಎಕ್ಸ್​ ಬದಲಾಗಿ ಶ್ರೀ ಹರಿ; ಹಿಂದಿಯಲ್ಲಿ ಬರೆದ ಔಷಧಿಚೀಟಿ ವೈರಲ್
Doctor Writes Prescription In Hindi Uses Shri Hari Instead Of Rx
TV9 Web
| Edited By: |

Updated on:Oct 17, 2022 | 4:44 PM

Share

Viral : ಕೆಲ ತಿಂಗಳುಗಳ ಹಿಂದೆ ಕೇರಳದ ವೈದ್ಯರೊಬ್ಬರು ಕ್ಯಾಪಿಟಲ್​ ಲೆಟರ್ಸ್​ನಲ್ಲಿ ದುಂಡಾಗಿ ಬರೆದ ಔಷಧಿಚೀಟಿ ವೈರಲ್​ ಆಗಿದ್ದ ಬಗ್ಗೆ ಓದಿ ಶ್ಲಾಘಿಸಿದ್ದಿರಿ. ಇದೀಗ ಮಧ್ಯಪ್ರದೇಶದ ವೈದ್ಯರೊಬ್ಬರು ಹಿಂದಿಯಲ್ಲಿ ಬರೆದ ಔಷಧಿಚೀಟಿ ವೈರಲ್ ಆಗುತ್ತಿದೆ. ಈ ಚೀಟಿಯಲ್ಲಿ ಅವರು Rx ಬದಲಾಗಿ ಶ್ರೀ ಹರಿ ಎಂದು ಬರೆದು 5 ಥರದ ಔಷಧಿಗಳನ್ನು ಮತ್ತು ರೋಗಿಯ ಇತಿಹಾಸವನ್ನು ಹಿಂದಿಯಲ್ಲಿ ಬರೆದಿದ್ದಾರೆ. ಇವರು ಬಹುಶಃ ಸಚಿವ ಅಮಿತ್ ಷಾ ಅವರ ಭಾಷಣದಿಂದ ಸ್ಫೂರ್ತಿಗೊಂಡಿರಬಹುದು ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಮೊನ್ನೆಯಷ್ಟೇ ಅಮಿತ್ ಷಾ ಎಂಬಿಬಿಎಸ್​ ವಿದ್ಯಾರ್ಥಿಗಳಿಗಾಗಿ ಹಿಂದಿಯಲ್ಲಿ ಮೂರು ವೈದ್ಯಕೀಯ ಶಿಕ್ಷಣ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮರುದಿನವೇ ಈ ಹಿಂದಿ ಔಷಧಿಚೀಟಿ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಈ ಚೀಟಿಯ ಮೇಲೆ 16.10.2022 ಎಂದು ತಾರೀಖನ್ನೂ ನಮೂದಿಸಲಾಗಿದೆ. ಸತನಾದಲ್ಲಿರುವ ಡಾ. ಸರ್ವೇಶ್ ಸಿಂಗ್​ ಎಂಬ ವೈದ್ಯರು ಈ ಔಷಧಿಚೀಟಿಯ ಕರ್ತೃ. ಅಲ್ಲಿಗೆ ನೆಟ್ಟಿಗರ ಅನುಮಾನ ಸರಿಯಾಗಿಯೇ ಇದೆ ಎಂದರ್ಥ ಮತ್ತು ಅದಕ್ಕೆ ಪುರಾವೆಯನ್ನು ಈ ವೈದ್ಯರೇ ನೀಡಿದ್ಧಾರೆ.

‘ಸರ್ಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ಹಿಂದಿಯಲ್ಲಿ ಔಷಧಿಚೀಟಿ ಬರೆಯಬೇಕೆಂದು ಅಮಿತ್​ ಷಾ ಅವರು ಕಾರ್ಯಕ್ರಮದಲ್ಲಿ ಹೇಳಿದ್ದನ್ನು ಕೇಳಿಸಿಕೊಂಡೆ. ಅವರ ಭಾಷಣದಿಂದ ಪ್ರೇರೇಪಣೆಗೊಂಡ ನಾನು ತಕ್ಷಣವೇ ಈ ಕ್ರಮವನ್ನು ಅಳವಡಿಸಿಕೊಂಡೆ’ ಎಂದು ಆಜ್​ತಕ್​ ಸುದ್ದಿವಾಹಿನಿಗೆ ಡಾ. ಸರ್ವೇಶ್ ತಿಳಿಸಿದ್ಧಾರೆ.

ಹಿಂದಿ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ತೀರ್ಮಾನಿಸಿದ ಮಧ್ಯಪ್ರದೇಶ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ದೇಶದಾದ್ಯಂತ ಉತ್ತಮ ಬದಲಾವಣೆಯನ್ನು ತರುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಇದನ್ನೂ ಓದಿ : ಕೇರಳದ ವೈದ್ಯರ ಈ ಔಷಧಿಚೀಟಿ ಯಾಕೆ ವೈರಲ್ ಆಗುತ್ತಿದೆ ಊಹಿಸಿ

ಡಾಕ್ಟರ್​ ಸಾಬ್ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದಂತೆ ಎಂದು ಒಬ್ಬ ನೆಟ್ಟಿಗರು ಕಾಲೆಳೆದಿದ್ದಾರೆ. ಬಿಜೆಪಿ ವಲಯದಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ ಡಾಕ್ಟ್ರೇ, ಒಳ್ಳೆಯದಾಗಲಿ ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ. ಹಿಂದಿಯಲ್ಲಿ​ ಅಬ್ಡಾಮಿನ್​ಗೆ ಏನು ಹೇಳುತ್ತಾರೆ ಎನ್ನುವುದು ಈ ವೈದ್ಯರಿಗೆ ಗೊತ್ತಿರಲಿಕ್ಕಿಲ್ಲ, ಬಹಳ ಅದ್ಭುತವಾದ ಅನುವಾದ! ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ಧಾರೆ.

ಒಟ್ಟಿನಲ್ಲಿ ಈ ಔಷಧಿಚೀಟಿ ನಗೆಪಾಟಿಲಿಗೆ ಈಡಾಗಿದೆ. ಹಿಂದಿಯಲ್ಲಿ ಔಷಧಿಚೀಟಿ ಬರೆಯಬೇಕೆಂಬ ನಿಯಮ ಜಾತಿಗೆ ಬಂದರೆ ನಿಮ್ಮ ಅಭಿಪ್ರಾಯವೇನಿರುತ್ತದೆ?

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 4:30 pm, Mon, 17 October 22

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ