AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಕ್ಸ್​ ಬದಲಾಗಿ ಶ್ರೀ ಹರಿ; ಹಿಂದಿಯಲ್ಲಿ ಬರೆದ ಔಷಧಿಚೀಟಿ ವೈರಲ್

Prescription in Hindi : ಅಮಿತ್​ ಷಾ ಅವರ ಭಾಷಣದಿಂದ ಪ್ರೇರೇಪಣೆಗೊಂಡು ಹಿಂದಿಯಲ್ಲಿ ಔಷಧಿಚೀಟಿ ಬರೆದೆ ಎಂದಿದ್ದಾರೆ ಈ ವೈದ್ಯರು. ಡಾಕ್ಟ್ರೆ, ಬಿಜೆಪಿಯಲ್ಲಿ ಉಜ್ವಲ ಭವಿಷ್ಯವಿದೆ ನಿಮಗೆ, ಇನ್ನು ಅನುವಾದವೂ ಸೂಪರ್ ಎಂದಿದ್ದಾರೆ ನೆಟ್ಟಿಗರು.

ಆರ್​ಎಕ್ಸ್​ ಬದಲಾಗಿ ಶ್ರೀ ಹರಿ; ಹಿಂದಿಯಲ್ಲಿ ಬರೆದ ಔಷಧಿಚೀಟಿ ವೈರಲ್
Doctor Writes Prescription In Hindi Uses Shri Hari Instead Of Rx
TV9 Web
| Edited By: |

Updated on:Oct 17, 2022 | 4:44 PM

Share

Viral : ಕೆಲ ತಿಂಗಳುಗಳ ಹಿಂದೆ ಕೇರಳದ ವೈದ್ಯರೊಬ್ಬರು ಕ್ಯಾಪಿಟಲ್​ ಲೆಟರ್ಸ್​ನಲ್ಲಿ ದುಂಡಾಗಿ ಬರೆದ ಔಷಧಿಚೀಟಿ ವೈರಲ್​ ಆಗಿದ್ದ ಬಗ್ಗೆ ಓದಿ ಶ್ಲಾಘಿಸಿದ್ದಿರಿ. ಇದೀಗ ಮಧ್ಯಪ್ರದೇಶದ ವೈದ್ಯರೊಬ್ಬರು ಹಿಂದಿಯಲ್ಲಿ ಬರೆದ ಔಷಧಿಚೀಟಿ ವೈರಲ್ ಆಗುತ್ತಿದೆ. ಈ ಚೀಟಿಯಲ್ಲಿ ಅವರು Rx ಬದಲಾಗಿ ಶ್ರೀ ಹರಿ ಎಂದು ಬರೆದು 5 ಥರದ ಔಷಧಿಗಳನ್ನು ಮತ್ತು ರೋಗಿಯ ಇತಿಹಾಸವನ್ನು ಹಿಂದಿಯಲ್ಲಿ ಬರೆದಿದ್ದಾರೆ. ಇವರು ಬಹುಶಃ ಸಚಿವ ಅಮಿತ್ ಷಾ ಅವರ ಭಾಷಣದಿಂದ ಸ್ಫೂರ್ತಿಗೊಂಡಿರಬಹುದು ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಮೊನ್ನೆಯಷ್ಟೇ ಅಮಿತ್ ಷಾ ಎಂಬಿಬಿಎಸ್​ ವಿದ್ಯಾರ್ಥಿಗಳಿಗಾಗಿ ಹಿಂದಿಯಲ್ಲಿ ಮೂರು ವೈದ್ಯಕೀಯ ಶಿಕ್ಷಣ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮರುದಿನವೇ ಈ ಹಿಂದಿ ಔಷಧಿಚೀಟಿ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಈ ಚೀಟಿಯ ಮೇಲೆ 16.10.2022 ಎಂದು ತಾರೀಖನ್ನೂ ನಮೂದಿಸಲಾಗಿದೆ. ಸತನಾದಲ್ಲಿರುವ ಡಾ. ಸರ್ವೇಶ್ ಸಿಂಗ್​ ಎಂಬ ವೈದ್ಯರು ಈ ಔಷಧಿಚೀಟಿಯ ಕರ್ತೃ. ಅಲ್ಲಿಗೆ ನೆಟ್ಟಿಗರ ಅನುಮಾನ ಸರಿಯಾಗಿಯೇ ಇದೆ ಎಂದರ್ಥ ಮತ್ತು ಅದಕ್ಕೆ ಪುರಾವೆಯನ್ನು ಈ ವೈದ್ಯರೇ ನೀಡಿದ್ಧಾರೆ.

‘ಸರ್ಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ಹಿಂದಿಯಲ್ಲಿ ಔಷಧಿಚೀಟಿ ಬರೆಯಬೇಕೆಂದು ಅಮಿತ್​ ಷಾ ಅವರು ಕಾರ್ಯಕ್ರಮದಲ್ಲಿ ಹೇಳಿದ್ದನ್ನು ಕೇಳಿಸಿಕೊಂಡೆ. ಅವರ ಭಾಷಣದಿಂದ ಪ್ರೇರೇಪಣೆಗೊಂಡ ನಾನು ತಕ್ಷಣವೇ ಈ ಕ್ರಮವನ್ನು ಅಳವಡಿಸಿಕೊಂಡೆ’ ಎಂದು ಆಜ್​ತಕ್​ ಸುದ್ದಿವಾಹಿನಿಗೆ ಡಾ. ಸರ್ವೇಶ್ ತಿಳಿಸಿದ್ಧಾರೆ.

ಹಿಂದಿ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ತೀರ್ಮಾನಿಸಿದ ಮಧ್ಯಪ್ರದೇಶ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ದೇಶದಾದ್ಯಂತ ಉತ್ತಮ ಬದಲಾವಣೆಯನ್ನು ತರುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಇದನ್ನೂ ಓದಿ : ಕೇರಳದ ವೈದ್ಯರ ಈ ಔಷಧಿಚೀಟಿ ಯಾಕೆ ವೈರಲ್ ಆಗುತ್ತಿದೆ ಊಹಿಸಿ

ಡಾಕ್ಟರ್​ ಸಾಬ್ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದಂತೆ ಎಂದು ಒಬ್ಬ ನೆಟ್ಟಿಗರು ಕಾಲೆಳೆದಿದ್ದಾರೆ. ಬಿಜೆಪಿ ವಲಯದಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ ಡಾಕ್ಟ್ರೇ, ಒಳ್ಳೆಯದಾಗಲಿ ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ. ಹಿಂದಿಯಲ್ಲಿ​ ಅಬ್ಡಾಮಿನ್​ಗೆ ಏನು ಹೇಳುತ್ತಾರೆ ಎನ್ನುವುದು ಈ ವೈದ್ಯರಿಗೆ ಗೊತ್ತಿರಲಿಕ್ಕಿಲ್ಲ, ಬಹಳ ಅದ್ಭುತವಾದ ಅನುವಾದ! ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ಧಾರೆ.

ಒಟ್ಟಿನಲ್ಲಿ ಈ ಔಷಧಿಚೀಟಿ ನಗೆಪಾಟಿಲಿಗೆ ಈಡಾಗಿದೆ. ಹಿಂದಿಯಲ್ಲಿ ಔಷಧಿಚೀಟಿ ಬರೆಯಬೇಕೆಂಬ ನಿಯಮ ಜಾತಿಗೆ ಬಂದರೆ ನಿಮ್ಮ ಅಭಿಪ್ರಾಯವೇನಿರುತ್ತದೆ?

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 4:30 pm, Mon, 17 October 22

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ