AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಬ್ರ್ಯಾಂಡ್​’; ಭ್ರಮೆಯ ಭಾವಿಗೆ ನಿಮ್ಮ ಮಕ್ಕಳನ್ನು ತಳ್ಳುತ್ತಿದ್ದೀರೇ? ಎಚ್ಚರವಿರಲಿ

Parenting: ಬಾಲ್ಯದಲ್ಲಿ ಅಪ್ಪ ಅಮ್ಮ ಬಟ್ಟೆ ಕೊಡಿಸಿದಾಗ ಇದು ಯಾವ ಬ್ರ್ಯಾಂಡಿನದು ಎಂದು ನೋಡುತ್ತಿದ್ದಿರೇ? ಹಾಗಿದ್ದರೆ ಈಗ್ಯಾಕೆ ನಿಮ್ಮ ಮಕ್ಕಳಿಗೆ ತುಟ್ಟಿಯಾದಂಥ ಬ್ರ್ಯಾಂಡ್​​ ಬಟ್ಟೆಗಳನ್ನೇ ಕೊಡಿಸುವ ಹಠ? ಅದರ ಪರಿಣಾಮದ ಅರಿವಿದೆಯೇ?

Viral Video: 'ಬ್ರ್ಯಾಂಡ್​'; ಭ್ರಮೆಯ ಭಾವಿಗೆ ನಿಮ್ಮ ಮಕ್ಕಳನ್ನು ತಳ್ಳುತ್ತಿದ್ದೀರೇ? ಎಚ್ಚರವಿರಲಿ
ನಿಮ್ಮ ಮಕ್ಕಳಿಗೆ ತುಟ್ಟಿಯಾದ ಬ್ರ್ಯಾಂಡ್​ ಬಟ್ಟೆಗಳು ಬೇಕೆ?
ಶ್ರೀದೇವಿ ಕಳಸದ
|

Updated on:Jul 10, 2023 | 4:03 PM

Share

Brand: ‘ನನ್ನ ಸ್ನೇಹಿತೆ ಹತ್ತು ವರ್ಷವೂ ತುಂಬಿರದ ತನ್ನ ಮಗಳ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದಳು, ‘ನನ್ನ ಮಗಳು ‘ಇಂಥ’ ಬ್ರ್ಯಾಂಡ್​ ಬಿಟ್ಟರೆ ಬೇರೆ ಯಾವ ಬ್ರ್ಯಾಂಡ್​ನ ಬಟ್ಟೆಯನ್ನೂ ಧರಿಸುವುದಿಲ್ಲ.’ ಅಂದರೆ ತಾಯಿಮಗಳಿಬ್ಬರ ದೃಷ್ಟಿಯಲ್ಲಿ ಉಳಿದ ಬಟ್ಟೆಗಳೆಲ್ಲ ಚೀಪ್. ಇಂಥ ತುಟ್ಟಿ ಬ್ರ್ಯಾಂಡ್​ನ ಬಟ್ಟೆಗಳನ್ನು ಧರಿಸುವುದೇ ಸ್ವಾಭಿಮಾನದ ದ್ಯೋತಕ ಮತ್ತು ಈ ಮೂಲಕವೇ  ತನ್ನತನವನ್ನು ಉಳಿದವರು ಅಳಿಯಬೇಕು ಎನ್ನುವುದನ್ನು ಆ ಮಗು ತನ್ನ ಮೆದುಳಿಗೆ ಈಗಿನಿಂದಲೇ ತರಬೇತಿ ಕೊಟ್ಟುಕೊಳ್ಳುತ್ತಿದೆ. ಇಂಥ ಅಭ್ಯಾಸವು ನಿಮಗೂ ಮತ್ತು ಮಕ್ಕಳಿಗೂ ರೂಢಿಯಾಗಿದ್ದರೆ ಇಂದೇ ನಿಲ್ಲಿಸಿ.’ ಎನ್ನುತ್ತಿದೆ ಬ್ರೇನಿಫೈ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿರುವ  ಈ ಕೆಳಗಿನ ವಿಡಿಯೋ ಕಂಟೆಂಟ್​.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by BRAINIFY || Parenting (@parentingwithbrainify)

ಯಾವ ಪೋಷಕರೂ ಅಷ್ಟೇ. ನಮಗಿಂತ ನಮ್ಮ ಮಕ್ಕಳು ಉತ್ತಮವಾದ ಬಟ್ಟೆಗಳನ್ನು ಹಾಕಬೇಕು ಎಂಬ ಆಸೆಯಿಂದಲೇ ಶಾಪಿಂಗ್ ಮಾಡುತ್ತಾರೆ. ಆದರೆ ಒಳ್ಳೆಯದು ಎಂದಾಗ ಅದು ತುಟ್ಟಿಯದು ಮತ್ತು ಬ್ರ್ಯಾಂಡ್​​ಗೆ ಸಂಬಂಧಿಸಿದ್ದು ಅಂತಲೇ ಅವರ ಅಂಬೋಣ. ಆದರೆ ಅದು ಖಂಡಿತ ತಪ್ಪು. ಕೊಡಿಸುವ ಬಟ್ಟೆ ಬಾಳಿಕೆ ಬರುವಂಥದ್ದಿದ್ದು ಮಕ್ಕಳಿಗೂ ಇಷ್ಟವಾಗುವಂತಿದ್ದರೆ ಮುಗಿಯಿತು. ನೀವು ಒಮ್ಮೆ ಬ್ರ್ಯಾಂಡ್​ನ ಬಾವಿಗೆ ಬಿದ್ದಿರೋ ನಿಮ್ಮ ಮಕ್ಕಳೂ ಅದರಿಂದ ಎದ್ದುಬರಲಾರದ ಸ್ಥಿತಿಯನ್ನು ತಲುಪುತ್ತಾರೆ. ಅಷ್ಟೇ ಯಾಕೆ? ಮಕ್ಕಳು ತಮ್ಮ ಗುಣಾವಗುಣ, ನಡತೆಯ ಬಗ್ಗೆ ಆಲೋಚಿಸದೆ ಬ್ರ್ಯಾಂಡ್​ ಮೂಲಕವೇ ತನ್ನ ಅಸ್ತಿತ್ವ ಎಂಬ ಪೊಳ್ಳುತನಕ್ಕೆ ಬೀಳುತ್ತವೆ.

ಇದನ್ನೂ ಓದಿ : Viral Video: ‘ಲೈಕ್ಸ್​, ಶೇರ್​, ಕಮೆಂಟ್​ಗಾಗಿ ಇಷ್ಟೊಂದು ಅಪಾಯಕ್ಕೆ ಒಡ್ಡಿಕೊಳ್ಳಬೇಡ’ ನೆಟ್ಟಿಗರ ಮನವಿ

ತುಟ್ಟಿ ಬ್ರ್ಯಾಂಡ್​ ಧರಿಸಿದರೆ ಮಾತ್ರ ಸ್ನೇಹಿತರು ನಮ್ಮನ್ನು ಗೌರವಿಸುತ್ತಾರೆ, ಸರೀಕರು ನಮ್ಮನ್ನು ಒಳಗೊಳ್ಳುತ್ತಾರೆ ಎಂಬ ಭ್ರಮೆಯಲ್ಲಿ ಬಿದ್ದ ಮಕ್ಕಳು ತಮ್ಮ ಆಂತರಿಕ ಸೌಂದರ್ಯ ಮತ್ತು ಆತ್ಮವಿಮರ್ಶೆಯಂಥ ಸಂಗತಿಗಳಿಗೆ ತೆರೆದುಕೊಳ್ಳುವುದೇ ಇಲ್ಲ. ಜೊತೆಗೆ ಜಾಹೀರಾತು ಕಂಪೆನಿಗಳ ಅರ್ಥಹೀನ ಬಡಬಡಿಕೆ ಮತ್ತದರ ಪ್ರಭಾವದಿಂದ ನಿಮ್ಮ ಮಕ್ಕಳನ್ನು ನೀವೇ ಕಾಪಾಡಬೇಕು. ಏಕೆಂದರೆ ಅತ್ಯಂತ ಪ್ರಭಾವಿ ಮಾಧ್ಯಮ ದೃಶ್ಯಮಾಧ್ಯಮ. ಇದರ ಪ್ರಭಾವಕ್ಕೆ ಮಕ್ಕಳು ಅತಿಬೇಗನೆ ಒಳಗಾಗುವುದರಿಂದ ಅದೇ ಸತ್ಯ ಎಂದುಕೊಂಡುಬಿಡುತ್ತವೆ.

ಇದನ್ನೂ ಓದಿ : Viral Video: ಲಿಸಾ; ಕುತೂಹಲ ಕೆರಳಿಸಿರುವ ಒಡಿಶಾದ ಮೊದಲ ಎಐ ನ್ಯೂಸ್ ಆ್ಯಂಕರ್

ಆದ್ದರಿಂದ ಮಕ್ಕಳನ್ನು ಸುತ್ತುವರಿದ ಎಲ್ಲ ಹುಸಿಪ್ರಭಾವಗಳಿಂದ ರಕ್ಷಿಸುವುದು ಪೋಷಕರ ಕರ್ತವ್ಯ. ಅದಕ್ಕಿಂತ ಮೊದಲು ನಿಮ್ಮ ಬುದ್ಧಿ ಮತ್ತು ಅರಿವನ್ನು ಆಗಾಗ ಒರೆಗಲ್ಲಿಗೆ ಹಚ್ಚಿಕೊಳ್ಳಿ. ಬಟ್ಟೆಬರೆಗಿಂತ ಜ್ಞಾನ, ಗುಣ, ಸ್ವಭಾವ, ಮತ್ತು ಅನುಭವದಿಂದ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಿ. ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 4:00 pm, Mon, 10 July 23

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ