AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ನನ್ನ ಮಗಳನ್ನು ಬೆದರಿಸಲು ಎಷ್ಟು ಧೈರ್ಯ ನಿನಗೆ?’ ವಿಮಾನದೊಳಗೆ ಜಗಳ

Fight in Flight : ಮನುಷ್ಯ ಭೂಮಿಯ ಮೇಲಿದ್ದರೂ ಅಷ್ಟೇ. ಆಕಾಶದಲ್ಲಿ ಹಾರಾಡುತ್ತಿದ್ದರೂ ಅಷ್ಟೇ. ನೀರ ಮೇಲೆ ತೇಲುತ್ತಿದ್ದರೂ ಅಷ್ಟೇ. ಕೆಲವೊಂದು ವಿಷಯಕ್ಕೆ ತಾಳ್ಮೆ ಕಳೆದುಕೊಳ್ಳುತ್ತಾನೆ. ಕಾರಣಗಳು ನೂರಾರು. ನೋಡಿ ಈ ವಿಡಿಯೋ.

Viral: 'ನನ್ನ ಮಗಳನ್ನು ಬೆದರಿಸಲು ಎಷ್ಟು ಧೈರ್ಯ ನಿನಗೆ?' ವಿಮಾನದೊಳಗೆ ಜಗಳ
ವಿಸ್ತಾರಾ ವಿಮಾನದಲ್ಲಿ ಕ್ಯಾಬಿನ್​ ಸಿಬ್ಬಂದಿಯು ಪ್ರಯಾಣಿಕರ ಜಗಳವನ್ನು ಬಗೆಹರಿಸುತ್ತಿರುವ ದೃಶ್ಯ
ಶ್ರೀದೇವಿ ಕಳಸದ
|

Updated on: Jul 04, 2023 | 6:47 PM

Share

Mid Air Fight : ವಿಮಾನದಲ್ಲಿ ಚಿತ್ರ ಬಿಡಿಸಿದ್ದನ್ನು ನೋಡಿದ್ದೀರಿ. ಪ್ರೇಮ ನಿವೇದನೆ ಮಾಡಿಕೊಂಡಿದ್ದನ್ನೂ ನೋಡಿದ್ದೀರಿ. ಆದರೆ ವಿಮಾನದಲ್ಲಿ ಜಗಳವಾಡಿದ್ದನ್ನು ನೀವೀಗ ನೋಡಬೇಕಾಗಿದೆ. ಅಂದರೆ ವಿಮಾನದಲ್ಲಿ ಪ್ರಯಾಣಿಕರು ಪರಸ್ಪರ ಜಗಳಕ್ಕಿಳಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಜೂ. 25ರಂದು ಮುಂಬೈನಿಂದ ಡೆಹ್ರಾಡೂನ್​​​ಗೆ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನದಲ್ಲಿ (Vistara Airlines) ಈ ಘಟನೆ ನಡೆದಿದೆ. ಪ್ರಯಾಣಿಕನೊಬ್ಬ ತನ್ನ ಪಕ್ಕದ ಸೀಟಿನಲ್ಲಿ ಕುಳಿತ ಪ್ರಯಾಣಿಕನಿಗೆ, ‘ನನ್ನ ಮಗಳನ್ನು ಬೆದರಿಸಲು ನಿನಗೆಷ್ಟು ಧೈರ್ಯ’ ಎಂದು ದಬಾಯಿಸುತ್ತಿದ್ದಾನೆ. ಅವರಿಬ್ಬರ ಜಗಳ ತಾರಕಕ್ಕೇರಿ ಅಕ್ಕಪಕ್ಕದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಕ್ಯಾಬಿನ್​ ಸಿಬ್ಬಂದಿ ಮಧ್ಯಪ್ರವೇಶಿಸಿ ಕ್ಯಾಪ್ಟನ್​ ಸಹಾಯವನ್ನು ಕೋರಿದರು. ಈ ಕೆಳಗಿನ ವಿಡಿಯೋದಲ್ಲಿರುವ ದೃಶ್ಯವನ್ನು ಗಮನಿಸಿ.

ನಂತರ ಕ್ಯಾಬಿನ್​ ಸಿಬ್ಬಂದಿಯ ಮಧ್ಯಸ್ಥಿಕೆಯಿಂದ ಜಗಳವು ಸಂಪನ್ನಗೊಂಡು ಪ್ರಯಾಣವು ಶಾಂತರೀತಿಯಲ್ಲಿ ಸಾಗಿತು. ಆ ನಂತರ ಈ ಘಟನೆಯ ಕುರಿತು ವಿಸ್ತಾರಾ ಫ್ಲೈಟ್​ ಸ್ಪಷ್ಟನೆಯನ್ನು ನೀಡಿತು. ಈ ಟ್ವೀಟ್​ ನೋಡಿದ ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಜಗಳದಿಂದಾಗಿ ನೊಂದವರು ತಕ್ಷಣವೇ IPC 354 ಪ್ರಕಾರ ಕೇಸ್​ ಹಾಕಬಹುದಿತ್ತು. ಅಪರಾಧಿಗೆ 1ರಿಂದ 5 ವರ್ಷಗಳವರೆಗೆ ಶಿಕ್ಷೆ ಕಾದಿರುತ್ತಿತ್ತು ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: ”ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ” ಹೆಂಡತಿ ಗಂಡನಿಗೆ ಹೇಳಿದಾಗ…

ಇಷ್ಟು ಗಂಭೀರ ಜಗಳದ ನಡುವೆಯೂ ನೆಟ್ಟಿಗರೊಬ್ಬರಿಗೆ ತಮಾಷೆ ಮಾಡಬೇಕು ಎನ್ನಿಸಿದೆ! ಈ ವಿಡಿಯೋದಲ್ಲಿ ಮೊದಲ ಸಲ ಕೇಳಿಬಂದ ಹೆಣ್ಣಿನ ಧ್ವನಿ ಐಶ್ವರ್ಯಾ ರೈ ಧ್ವನಿಯಂತಿದೆ ಎಂದ್ದಾರೆ. ಎಲ್ಲಿ ಹೋದರೂ ಈ ಮನುಷ್ಯರ ಜಗಳಗಳಿಗೆ ಕೊನೆಯೇ ಇಲ್ಲವೆ? ಸ್ವಲ್ಪ ತಾಳ್ಮೆ ತಂದುಕೊಂಡರೆ ಪ್ರಯಾಣ ಎಷ್ಟೊಂದು ಸುಖಕರವಾಗಿರುತ್ತದೆ ಎಂದಿದ್ದಾರೆ ಅನೇಕರು. ಒಂದಿಬ್ಬರಿಂದಾಗಿ ಅನೇಕ ಪ್ರಯಾಣಿಕರ ಮೂಡ್​ ಹಾಳಾಗುತ್ತದೆ ಅಲ್ಲವೆ? ಎಂದು ಪ್ರಶ್ನಿಸಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು