AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ಞೆ ತಪ್ಪಿದ ಚಾಲಕ; 66 ಜನರನ್ನು ಉಳಿಸಿದ 7ನೇ ತರಗತಿಯ ಬಾಲಕನ ವಿಡಿಯೋ ವೈರಲ್

School Bus : ಚಾಲಕ ಬಸ್ ಓಡಿಸುತ್ತಲೇ ಅಸ್ವಸ್ಥನಾಗತೊಡಗುತ್ತಾನೆ. ಯಾರಾದರೂ 911ಗೆ ಕರೆ ಮಾಡಿ ಎಂದು ಕೂಗುತ್ತಾನೆ. ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಗಾಬರಿಯಿಂದ ಚೀರಾಡುತ್ತಾರೆ. ಆದರೆ ಒಬ್ಬ ಬಾಲಕ ಮಾತ್ರ ಸಾಹಸ ಮೆರೆಯುತ್ತಾನೆ.

ಪ್ರಜ್ಞೆ ತಪ್ಪಿದ ಚಾಲಕ; 66 ಜನರನ್ನು ಉಳಿಸಿದ 7ನೇ ತರಗತಿಯ ಬಾಲಕನ ವಿಡಿಯೋ ವೈರಲ್
ಪ್ರಜ್ಞೆತಪ್ಪಿ ಬಿದ್ದ ಚಾಲಕ, ಬಸ್​ ನಿಯಂತ್ರಿಸುತ್ತಿರುವ ಬಾಲಕ
ಶ್ರೀದೇವಿ ಕಳಸದ
| Edited By: |

Updated on:May 02, 2023 | 1:54 PM

Share

Viral Video : ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಮಿಚಿಗನ್​ನಲ್ಲಿರುವ ವಾರನ್​ ಕನ್ಸಾಲಿಡೇಟೆಡ್​ ಶಾಲೆಯು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದೆ. ಡೈಲನ್​ ರೀವ್ಸ್​ ಬರ್ನೆಟ್​ ರಸ್ತೆಯ ಬಳಿ ಇರುವ ಮೆಸೋನಿಕ್​ ಬೌಲೆವಾರ್ಡ್​ನಲ್ಲಿ ಈ ಘಟನೆ ಸಂಭವಿಸಿದೆ. ಬಸ್​ ಡ್ರೈವರ್ ಪ್ರಜ್ಞೆ ತಪ್ಪುತ್ತಿರುವಂತೆ ಬಸ್ಸಿನಲ್ಲಿದ್ದ ಏಳನೇ ತರಗತಿಯ ಬಾಲಕ ಸಮಯಪ್ರಜ್ಞೆಯಿಂದ ವರ್ತಿಸಿ 66 ಜನರ ಜೀವವನ್ನು ಉಳಿಸಿದ್ದಾನೆ.

ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಈ ಬಸ್ ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಡ್ರೈವರ್​ ಅಸ್ವಸ್ಥನಾಗಿದ್ದಾನೆ. ಇದನ್ನು ಗಮನಿಸಿದ ಈ ಬಾಲಕ ಬಸ್​ ಅಪಘಾತಕ್ಕೆ ಒಳಗಾಗದಂತೆ ನಿಯಂತ್ರಿಸಿದ್ದಾನೆ. ಇವನ ಸಮಯ ಪ್ರಜ್ಞೆ, ಗಮನಿಸುವಿಕೆ, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡ ರೀತಿಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : ಉತ್ತರಪ್ರದೇಶದ ಶಾಲಾ ಬಸ್ಸಿನಲ್ಲಿ ಹೆಬ್ಬಾವು ಪತ್ತೆ, ವಿಡಿಯೋ ವೈರಲ್

ಈ ವಿಡಿಯೋ ಸುಮಾರು 53 ಸೆಕೆಂಡುಗಳದ್ದು. ಡ್ರೈವರ್ ಪ್ರಜ್ಞೆ ತಪ್ಪುವ ಮೊದಲು ಯಾರಾದರೂ 911ಗೆ ಕರೆ ಮಾಡಿ ಎಂದು ಕೂಗುತ್ತಾನೆ. ಗಾಬರಿಗೊಂಡ ಪ್ರಯಾಣಿಕರು ಅರಚತೊಡಗುತ್ತಾರೆ. ಆದರೆ ಈ ಬಾಲಕ ಮಾತ್ರ ಧೈರ್ಯದಿಂದ ಮುನ್ನುಗ್ಗಿ ಬಸ್​ ಅನ್ನು ನಿಯಂತ್ರಿಸಿ ನಿಲ್ಲಿಸುತ್ತಾನೆ.

ಇದನ್ನೂ ಓದಿ : Viral Video : ಲೈವ್​ ಎಂಬ ಅರಿವಿದ್ದೇ ಈ ಬೆಕ್ಕು ಹೀಗೆ ಮಾಡಿತೆ?

ಶಾಲಾಸಿಬ್ಬಂದಿಯು ಈ ಹುಡುಗನ ಸಾಹಸವನ್ನು ಶ್ಲಾಘಿಸಿ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದೆ. ನೆಟ್ಟಿಗರು ಈತನನ್ನು ಕೊಂಡಾಡುತ್ತಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:30 pm, Tue, 2 May 23

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ