Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗೆಳೆಯನೊಂದಿಗೆ ಆನೆಗಳ ಪುನರ್ಮಿಲನ; ಹೃದಯಸ್ಪರ್ಶಿ ದೃಶ್ಯ ನೋಡಿ ಭಾವುಕರಾದ ನೆಟ್ಟಿಗರು

Wildlife : ಪ್ರಾಣಿಗಳು ಮತ್ತು ಮನುಷ್ಯರು ಒಮ್ಮೆ ಪರಸ್ಪರ ಸ್ನೇಹಿತರಾದರೆ ಮುಗಿಯಿತು. ಜೀವನಪರ್ಯಂತ ಆ ಪ್ರೀತಿ, ವಿಶ್ವಾಸ, ನೆನಪು ಜೀವಂತವಾಗಿರುತ್ತದೆ. ಇದೀಗ ಕೆನಡಾದ ಅಭಯಾರಣ್ಯದ ದೃಶ್ಯ ವೈರಲ್ ಆಗುತ್ತಿದೆ. ಒಂದು ತಿಂಗಳ ನಂತರ ತಮ್ಮನ್ನು ನೋಡಲು ಬರುತ್ತಿರುವ ಸ್ನೇಹಿತನನ್ನು ನೋಡಿದ ಎರಡು ಆನೆಗಳು ಅವನನ್ನು ಬರಮಾಡಿಕೊಳ್ಳುವ ರೀತಿ ಬಹಳ ಆಪ್ತವಾಗಿದೆ.

Viral Video: ಗೆಳೆಯನೊಂದಿಗೆ ಆನೆಗಳ ಪುನರ್ಮಿಲನ; ಹೃದಯಸ್ಪರ್ಶಿ ದೃಶ್ಯ ನೋಡಿ ಭಾವುಕರಾದ ನೆಟ್ಟಿಗರು
ಒಂದು ತಿಂಗಳ ನಂತರ ತಮ್ಮ ಸ್ನೇಹಿತನನ್ನು ಬೇಟಿ ಮಾಡಿದ ಆನೆಗಳು
Follow us
ಶ್ರೀದೇವಿ ಕಳಸದ
|

Updated on: Nov 16, 2023 | 12:13 PM

Elephant Lover : ಪ್ರಾಣಿಗಳಿಗೂ ಮತ್ತು ಮನುಷ್ಯರಿಗೂ ಅವಿನಾಭಾವ ಸಂಬಂಧ. ಸಾಕುಪ್ರಾಣಿಗಳಾದ ಬೆಕ್ಕು, ನಾಯಿ, ಹಸು, ಕುದುರೆ ಇವೆಲ್ಲವುಗಳೊಂದಿಗೆ ಆಪ್ತವಾಗಿ ಒಡನಾಡುವುದು ಸಹಜ. ಆದರೆ ವನ್ಯಜೀವಿಗಳೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವುದು ಅಪರೂಪ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಎರಡು ಆನೆಗಳು ಬಹಳ ದಿನಗಳ ನಂತರ ತಮ್ಮ ಗೆಳೆಯನನ್ನು ಎದುರುಗೊಂಡಿವೆ. ಈ ಭಾವಪೂರ್ಣ ವಿಡಿಯೋ ನೋಡಿದ ನೆಟ್ಟಿಗರು ಈ ಆನೆಗಳನ್ನು ಮತ್ತವರ ಗೆಳೆಯನನ್ನು ಕೊಂಡಾಡುತ್ತಿದ್ದಾರೆ. ಇನ್​ಸ್ಟಾಗ್ರಾಂನ ಗುಡ್​ ಮೂವ್​ಮೆಂಟ್​ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ : Viral Brain Teaser: ಮೆದುಳಿಗೆ ಗುದ್ದು; ಶಾಲಾದಿನಗಳ ಇಂಥ ಲೆಕ್ಕಗಳು ನೆನಪಿವೆಯೇ? ಹಾಗಿದ್ದರೆ ಪ್ರಯತ್ನಿಸಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ದೃಶ್ಯ ಕೆನಡಾ ಮೂಲದ್ದು. ಒಂದು ತಿಂಗಳ ನಂತರ ಅಭಯಾರಣ್ಯಕ್ಕೆ ಈತ ಮರಳಿದ್ದಾನೆ. ಈತ ಬರುವುದನ್ನು ಗಮನಿಸಿದ ಆನೆಗಳು ಅವನನ್ನು ಸ್ವಾಗತಿಸಿದ ರೀತಿ ಆಪ್ಯಾಯಮಾನವಾಗಿದೆ. ಒಂದು ದಿನದ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಸುಮಾರು 2 ಮಿಲಿಯನ್​ ಜನರು ನೋಡಿದ್ದಾರೆ. 1.4 ಲಕ್ಷ ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಆನೆಗಳು ತಮ್ಮ ಗೆಳೆಯನನ್ನು ಸ್ವಾಗತಿಸಿದ ವಿಡಿಯೋ

ಈ ದೃಶ್ಯ ನೋಡಿ ನನ್ನ ಕಣ್ಣುಗಳು ತುಂಬಿಕೊಂಡವು ಎಂದು ಒಬ್ಬರು. ನನ್ನ ಮನಸ್ಸು ತೋಯ್ದಿತು ಎಂದು ಇನ್ನೊಬ್ಬರು. ಆನೆ ಸೌಮ್ಯ ಮತ್ತು ದೈತ್ಯ, ಎಂದಿಗೂ ಪುಟ್ಟ ಮಗುವಿನಂತೆ ಎಂದಿದ್ದಾರೆ ಮತ್ತೊಬ್ಬರು. ಇಂಥ ಅವಕಾಶ ಎಲ್ಲರಿಗೂ ದೊರೆಯಲಾರದು ಎಂದಿದ್ದಾರೆ ಮಗದೊಬ್ಬರು. ಇದಕ್ಕೇ ಮನುಷ್ಯರಿಗಿಂತ ಪ್ರಾಣಿಗಳಲೇ ಮೇಲು ಎನ್ನುವುದು ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನೂ ಓದಿ : Viral: ಫ್ಲೋರಿಡಾ; 5 ಜನರಿಂದ 17 ಅಡಿ ಹೆಬ್ಬಾವಿನ ರಕ್ಷಣೆ, ಫೋಟೋ ವೈರಲ್

ಇದು ಶುದ್ಧ ಪ್ರೀತಿ ಎಂದಿದ್ದಾರೆ ಒಬ್ಬರು. ಸ್ನೇಹ ಮತ್ತು ವಿಶ್ವಾಸದ ಅಪರೂಪದ ಕ್ಷಣಗಳು ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ಅನೇಕರ ಮನಸನ್ನು ಮುದಗೊಳಿಸಿದೆ. ಈತನಕ ನೋಡಿದ ಅಪರೂಪದ ವಿಡಿಯೋಗಳಲ್ಲಿ ಇದು ಒಂದು. ಈ ವಿಡಿಯೋ ನೋಡಿದಾಗಿನಿಂತ ಮನಸ್ಸು ಉಲ್ಲಾಸದಿಂದ ತುಯ್ಯುತ್ತಿದೆ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು