AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕನ್ಪಾಕ್ಸ್​ ಲಸಿಕೆ ಸಂಶೋಧಕ ಡಾ.ಮಿಚಿಯಾಕಿ ಜನ್ಮದಿನ: ಡೂಡಲ್​ ಮೂಲಕ ಗೂಗಲ್​ ಗೌರವ

ಚಿಕನ್ಪಾಕ್ಸ್ ರೋಗದ ವಿರುದ್ಧ ಮೊದಲ ಲಸಿಕೆ ಕಂಡುಹಿಡಿದ  ಜಪಾನಿನ ವೈರಲಾಜಿಸ್ಟ್(virologist)​ ಡಾ. ಮಿಚಿಯಾಕಿ ತಕಾಹಶಿ ಅವರ ಜನ್ಮದಿನದವಾದ ಇಂದು (ಫೆ.17) ಗೂಗಲ್​ ವಿಶೇಷ ಡೂಡಲ್ ರಚಿಸಿ ಗೌರವಿಸಿದೆ.

ಚಿಕನ್ಪಾಕ್ಸ್​ ಲಸಿಕೆ ಸಂಶೋಧಕ ಡಾ.ಮಿಚಿಯಾಕಿ ಜನ್ಮದಿನ: ಡೂಡಲ್​ ಮೂಲಕ ಗೂಗಲ್​ ಗೌರವ
ಗೂಗಲ್​ ಡೂಡಲ್​
TV9 Web
| Edited By: |

Updated on:Feb 17, 2022 | 11:08 AM

Share

ಚಿಕನ್ಪಾಕ್ಸ್ (chickenpox)​ ರೋಗದ ವಿರುದ್ಧ ಮೊದಲ ಲಸಿಕೆ ಕಂಡುಹಿಡಿದ  ಜಪಾನಿನ ವೈರಲಾಜಿಸ್ಟ್(virologist)​ ಡಾ. ಮಿಚಿಯಾಕಿ ತಕಾಹಶಿ(Michiaki Takahashi) ಅವರ ಜನ್ಮದಿನದವಾದ ಇಂದು (ಫೆ.17) ಗೂಗಲ್​ ವಿಶೇಷ ಡೂಡಲ್ (Google Doodle)​ ರಚಿಸಿದೆ. ಡಾ. ಮಿಚಿಯಾಕಿ ಅವರ 94ನೇ ಜನ್ಮದಿನದ ಪ್ರಯುಕ್ತ ಗೂಗಲ್​ ಡೂಡಲ್​ ಮೂಲಕ  ಗೌರವ ಸಲ್ಲಿಸಿದೆ. ಈ ಡೂಡಲ್​ಅನ್ನು ಜಪಾನೀ ಕಲಾವಿದ ಟಟ್ಸುರೊ ಕಿಯುಚಿ ಎನ್ನುವವರು ಚಿತ್ರಿಸಿದ್ದಾರೆ. ಡೂಡಲ್​ನಲ್ಲಿ ಮಿಚಿಯಾಕಿ ಅವರು ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು. ಅವರು ಅಧ್ಯಯನಕ್ಕಾಗಿ ಸೂಕ್ಷ್ಮ ದರ್ಶಕ ಬಳಸುತ್ತಿರುವುದು,  ಮಗುವಿನ ತೋಳಿಗೆ ಬ್ಯಾಂಡ್​ ಹಾಕುವುದನ್ನು ಡೂಡಲ್​ನಲ್ಲಿ ಕಾಣಬಹದು.

ಡಾ. ಮಿಚಿಯಾಕಿ 1928ರಲ್ಲಿ ಜಪಾನ್​ನ ಒಸಾಕಾ ನಗರದಲ್ಲಿ ಜನಿಸಿದರು. ಮೈಕ್ರೋಬಿಯಲ್​ ಡಿಸೀಸ್​ ಸಂಶೋಧನಾ ಸಂಸ್ಥೆಗೆ ಸೇರಿ 1959ರಲ್ಲಿ ವೈದ್ಯಕೀಯ ಪದವಿ ಪಡೆದರು.  1974ರಲ್ಲಿ ಇವರು ಚಿಕನ್ಪಾಕ್ಸ್​ಗೆ ಕಾರಣವಾಗುವ ವರಿಸೆಲ್ಲಾ ವೈರಸ್​ಅನ್ನು ತಡೆಗಟ್ಟಲು ಮೊದಲ ಲಸಿಕೆಯನ್ನು ಕಂಡುಹಿಡಿದರು.  ಇಮ್ಯುನೊಕೊಪ್ರೊಮೈಸ್ಡ್​ ರೋಗಿಗಳನ್ನು ಸಂಶೋಧನೆಗೆ ಒಳಪಡಿಸುವ ಮೂಲಕ ಲಸಿಕೆಯ ಪರಿಣಾಮಕತ್ವವನ್ನು ಸಾಬೀತು ಮಾಡಲಾಯಿತು.  ನಂತರ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದ ಬಳಿಕ ಮೈಕ್ರೋಬಿಯಲ್​ ರೋಗಗಳ ಸಂಶೋಧನಾ ಪ್ರತಿಷ್ಠಾನವು 1986ರಲ್ಲಿ ಲಸಿಕೆಯನ್ನು ಬಳಕೆಗೆ ಹೊರತಂದಿತು.

ಜಗತ್ತಿನ 80ಕ್ಕೂ ಹೆಚ್ಚು ದೇಶಗಳು ಚಿಕನ್ಪಾಕ್ಸ್​ಗೆ ಜೀವರಕ್ಷಕವಾಗಿ ಇವರ ಲಸಿಕೆಯನ್ನು ಬಳಸಿಕೊಂಡಿದೆ. ಪ್ರತೀ ವರ್ಷ ಲಕ್ಷಾಂತರ ಮಕ್ಕಳಿಗೆ ಈ ಲಸಿಕೆ ನೀಡಿ ಚಿಕನ್ಪಾನಕ್ಸ್​ನಿಂದ ರಕ್ಷಿಸಲಾಗುತ್ತದೆ. ಡಾ.ಮಿಚಿಯಾಕಿ 2013ರಲ್ಲಿ ನಿಧನರಾದರು.

ಇದನ್ನೂ ಓದಿ:

48 ಗಂಟೆಗಳ ಕಾಲ ಪ್ಲಾಸ್ಟಿಕ್​ ಕ್ಯಾನ್​ನಲ್ಲಿ ತಲೆ ಸಿಲುಕಿ ಒದ್ದಾಡುತ್ತಿದ್ದ ಚಿರತೆ ಮರಿಯ ರಕ್ಷಣೆ

Published On - 11:03 am, Thu, 17 February 22

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು