AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕನ್ಪಾಕ್ಸ್​ ಲಸಿಕೆ ಸಂಶೋಧಕ ಡಾ.ಮಿಚಿಯಾಕಿ ಜನ್ಮದಿನ: ಡೂಡಲ್​ ಮೂಲಕ ಗೂಗಲ್​ ಗೌರವ

ಚಿಕನ್ಪಾಕ್ಸ್ ರೋಗದ ವಿರುದ್ಧ ಮೊದಲ ಲಸಿಕೆ ಕಂಡುಹಿಡಿದ  ಜಪಾನಿನ ವೈರಲಾಜಿಸ್ಟ್(virologist)​ ಡಾ. ಮಿಚಿಯಾಕಿ ತಕಾಹಶಿ ಅವರ ಜನ್ಮದಿನದವಾದ ಇಂದು (ಫೆ.17) ಗೂಗಲ್​ ವಿಶೇಷ ಡೂಡಲ್ ರಚಿಸಿ ಗೌರವಿಸಿದೆ.

ಚಿಕನ್ಪಾಕ್ಸ್​ ಲಸಿಕೆ ಸಂಶೋಧಕ ಡಾ.ಮಿಚಿಯಾಕಿ ಜನ್ಮದಿನ: ಡೂಡಲ್​ ಮೂಲಕ ಗೂಗಲ್​ ಗೌರವ
ಗೂಗಲ್​ ಡೂಡಲ್​
TV9 Web
| Edited By: |

Updated on:Feb 17, 2022 | 11:08 AM

Share

ಚಿಕನ್ಪಾಕ್ಸ್ (chickenpox)​ ರೋಗದ ವಿರುದ್ಧ ಮೊದಲ ಲಸಿಕೆ ಕಂಡುಹಿಡಿದ  ಜಪಾನಿನ ವೈರಲಾಜಿಸ್ಟ್(virologist)​ ಡಾ. ಮಿಚಿಯಾಕಿ ತಕಾಹಶಿ(Michiaki Takahashi) ಅವರ ಜನ್ಮದಿನದವಾದ ಇಂದು (ಫೆ.17) ಗೂಗಲ್​ ವಿಶೇಷ ಡೂಡಲ್ (Google Doodle)​ ರಚಿಸಿದೆ. ಡಾ. ಮಿಚಿಯಾಕಿ ಅವರ 94ನೇ ಜನ್ಮದಿನದ ಪ್ರಯುಕ್ತ ಗೂಗಲ್​ ಡೂಡಲ್​ ಮೂಲಕ  ಗೌರವ ಸಲ್ಲಿಸಿದೆ. ಈ ಡೂಡಲ್​ಅನ್ನು ಜಪಾನೀ ಕಲಾವಿದ ಟಟ್ಸುರೊ ಕಿಯುಚಿ ಎನ್ನುವವರು ಚಿತ್ರಿಸಿದ್ದಾರೆ. ಡೂಡಲ್​ನಲ್ಲಿ ಮಿಚಿಯಾಕಿ ಅವರು ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು. ಅವರು ಅಧ್ಯಯನಕ್ಕಾಗಿ ಸೂಕ್ಷ್ಮ ದರ್ಶಕ ಬಳಸುತ್ತಿರುವುದು,  ಮಗುವಿನ ತೋಳಿಗೆ ಬ್ಯಾಂಡ್​ ಹಾಕುವುದನ್ನು ಡೂಡಲ್​ನಲ್ಲಿ ಕಾಣಬಹದು.

ಡಾ. ಮಿಚಿಯಾಕಿ 1928ರಲ್ಲಿ ಜಪಾನ್​ನ ಒಸಾಕಾ ನಗರದಲ್ಲಿ ಜನಿಸಿದರು. ಮೈಕ್ರೋಬಿಯಲ್​ ಡಿಸೀಸ್​ ಸಂಶೋಧನಾ ಸಂಸ್ಥೆಗೆ ಸೇರಿ 1959ರಲ್ಲಿ ವೈದ್ಯಕೀಯ ಪದವಿ ಪಡೆದರು.  1974ರಲ್ಲಿ ಇವರು ಚಿಕನ್ಪಾಕ್ಸ್​ಗೆ ಕಾರಣವಾಗುವ ವರಿಸೆಲ್ಲಾ ವೈರಸ್​ಅನ್ನು ತಡೆಗಟ್ಟಲು ಮೊದಲ ಲಸಿಕೆಯನ್ನು ಕಂಡುಹಿಡಿದರು.  ಇಮ್ಯುನೊಕೊಪ್ರೊಮೈಸ್ಡ್​ ರೋಗಿಗಳನ್ನು ಸಂಶೋಧನೆಗೆ ಒಳಪಡಿಸುವ ಮೂಲಕ ಲಸಿಕೆಯ ಪರಿಣಾಮಕತ್ವವನ್ನು ಸಾಬೀತು ಮಾಡಲಾಯಿತು.  ನಂತರ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದ ಬಳಿಕ ಮೈಕ್ರೋಬಿಯಲ್​ ರೋಗಗಳ ಸಂಶೋಧನಾ ಪ್ರತಿಷ್ಠಾನವು 1986ರಲ್ಲಿ ಲಸಿಕೆಯನ್ನು ಬಳಕೆಗೆ ಹೊರತಂದಿತು.

ಜಗತ್ತಿನ 80ಕ್ಕೂ ಹೆಚ್ಚು ದೇಶಗಳು ಚಿಕನ್ಪಾಕ್ಸ್​ಗೆ ಜೀವರಕ್ಷಕವಾಗಿ ಇವರ ಲಸಿಕೆಯನ್ನು ಬಳಸಿಕೊಂಡಿದೆ. ಪ್ರತೀ ವರ್ಷ ಲಕ್ಷಾಂತರ ಮಕ್ಕಳಿಗೆ ಈ ಲಸಿಕೆ ನೀಡಿ ಚಿಕನ್ಪಾನಕ್ಸ್​ನಿಂದ ರಕ್ಷಿಸಲಾಗುತ್ತದೆ. ಡಾ.ಮಿಚಿಯಾಕಿ 2013ರಲ್ಲಿ ನಿಧನರಾದರು.

ಇದನ್ನೂ ಓದಿ:

48 ಗಂಟೆಗಳ ಕಾಲ ಪ್ಲಾಸ್ಟಿಕ್​ ಕ್ಯಾನ್​ನಲ್ಲಿ ತಲೆ ಸಿಲುಕಿ ಒದ್ದಾಡುತ್ತಿದ್ದ ಚಿರತೆ ಮರಿಯ ರಕ್ಷಣೆ

Published On - 11:03 am, Thu, 17 February 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ