Viral Video: ತನ್ನೊಂದಿಗಿದ್ದ ಶ್ವಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ : ವಿಡಿಯೋ ವೈರಲ್​

ಸದಾ ಕಾಲ ತನ್ನೊಂದಿಗೆ ಎರಡೂ ನಾಯಿಗಳನ್ನು ಕರೆದುಕೊಂಡೇ ಓಡಾಡುವ ಚೊಕೋ ಅವುಗಳೊಂದಿಗೆ ತನ್ನ ವಿಶೇಷ ದಿನವನ್ನು ಆಚರಿಸಿಕೊಂಡಿದ್ದಾನೆ.

Viral Video: ತನ್ನೊಂದಿಗಿದ್ದ ಶ್ವಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ : ವಿಡಿಯೋ ವೈರಲ್​
ನಾಯಿಗಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿರುವ ಯುವಕ
Follow us
| Updated By: Pavitra Bhat Jigalemane

Updated on: Jan 11, 2022 | 2:03 PM

ಆಗಾಗ ಕಾಣಿಸಿಕೊಳ್ಳುವ ಹೃದಯಸ್ಪರ್ಶಿ ವಿಡಿಯೋಗಳು ಮಾನವ ಮತ್ತು ಪ್ರಾಣಿಗಳ ನಡುವಿನ  ಬಾಂದವ್ಯವನ್ನು ವಿವರಿಸುತ್ತದೆ. ಅದರಲ್ಲೂ ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧ ಪದಗಳಿಗೆ ನಿಲುಕದ್ದು. ತನಗೆ ಅನ್ನ ಹಾಕಿದ ವ್ಯಕ್ತಿಗೆ ನಿಯತ್ತಿನಿಂದ ಪ್ರೀತಿ ತೋರಿಸುವ  ನಾಯಿಗಳು ಒಡೆಯನಿಗೆ ಕಷ್ಟ ಬಂದಾಗ ಎಂದಿಗೂ ದೂರ ಓಡುವುದಿಲ್ಲ. ಇಲ್ಲೊಂದು ನಾಯಿ ಮತ್ತು ನಿರ್ಗತಿಕ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗಿದೆ. ಮನೆಯಿಲ್ಲದೆ ನಿರ್ಗತಿಕ ವ್ಯಕ್ತಿಯೊಬ್ಬ ತನ್ನೊಂದಿಗಿರುವ ಎರಡು ನಾಯಿಗಳ ಜತೆ ರಸ್ತೆ ಬದಿಯಲ್ಲಿ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ವಿಡಿಯೋ ಸಖತ್​ ವೈರಲ್​ ಆಗಿದೆ.

ವಿಡಿಯೋದಲ್ಲಿ ಚೊಕೊ ಎನ್ನುವ ವ್ಯಕ್ತಿ ರಸ್ತೆ ಬದಿಯಲ್ಲಿ ಕೇಕ್​ ಇಟ್ಟುಕೊಂಡು ಕ್ಯಾಂಡಲ್​ ಹೊತ್ತಿಸಿರುವುದನ್ನು ಕಾಣಬಹುದು ಜತೆಗೆರುವ ಎರಡು ನಾಯಿಗಳ ತಲೆಯ ಮೇಲೆ  ಬರ್ತಡೇ ಹಾಟ್​ ಹಾಕಿ  ತನ್ನ ಪಕ್ಕದಲ್ಲಿ ಕೂರಿಸಿಕೊಂಡು ಬರ್ತಡೇ ಹಾಡನ್ನು ಹೇಳುವುದನ್ನು ಕಾಣಬಹುದು. ಸದಾ ಕಾಲ ತನ್ನೊಂದಿಗೆ ಎರಡೂ ನಾಯಿಗಳನ್ನು ಕರೆದುಕೊಂಡೇ ಓಡಾಡುವ ಚೊಕೋ ಅವುಗಳೊಂದಿಗೆ ತನ್ನ ವಿಶೇಷ ದಿನವನ್ನು ಆಚರಿಸಿಕೊಂಡಿದ್ದಾನೆ. ಈ ಘಟನೆ ಕೋಲಂಬಿಯಾದಲ್ಲಿ ನಡೆದಿದೆ.

@roteloperiodismo ಎನ್ನುವ ಇನ್ಸ್ಟಾಗ್ರಾಮ್​ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದು, 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.  3 ನಿಮಿಷಗಳ ಈ ವಿಡಿಯೋಕ್ಕೆ ಹಲವರು ಕಾಮೆಂಟ್​ ಮಾಡಿದ್ದು. ಚೊಕೊ ಮತ್ತು ಶ್ವಾನಗಳ ನಡುವಿನ ವಿಶೇಷ ಸಂಬಂಧವನ್ನು  ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸುಧಾ ಮೂರ್ತಿಯವರು ತಾವು ಸಾಕಿದ ಗೋಪಿ ಎನ್ನುವ  ಶ್ವಾನಕ್ಕೆ ಆರತಿ ಬೆಳಗಿ, ಹಾಡು ಹೇಳಿ ಬರ್ತಡೇ ಆಚರಿಸಿದ್ದರು. ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ:

Viral Video: ಹದಗೆಟ್ಟ ಊರಿನ ರಸ್ತೆಯ ಬಗ್ಗೆ ವಿವರಿಸಲು ರಿಪೋರ್ಟರ್​ ಆದ ಬಾಲಕಿ

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು