AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಿನ ಟ್ಯಾಂಕ್​ನಲ್ಲಿ ಕೋಟಿ ರೂ. ಅಡಗಿಸಿಟ್ಟ ಉದ್ಯಮಿ: ಐಟಿ ದಾಳಿಯಲ್ಲಿ ಹೊರತೆಗೆದ ನೋಟುಗಳನ್ನು ಹೇರ್​ ಡ್ರೈಯರ್​ನಲ್ಲಿ ಒಣಗಿಸಿದ ಅಧಿಕಾರಿಗಳು

ಉದ್ಯಮಿ ಶಂಕರ್​ ರೈ ಒಂದು ಕೋಟಿಯಷ್ಟು ಹಣವನ್ನು ಅಂಡರ್​ ಗ್ರೌಂಡ್​ನಲ್ಲಿರುವ ನೀರಿನ ಟ್ಯಾಂಕ್​ನಲ್ಲಿ ಬಚ್ಚಿಟ್ಟಿದ್ದರು. ಮನೆಯನ್ನು ಜಾಲಾಡಿದ ಅಧಿಕಾರಿಗಳಿಗೆ ಟ್ಯಾಂಕ್​ನಲ್ಲಿ ಬಚ್ಚಿಟ್ಟ ಹಣವನ್ನೂ ಹೊರತೆಗೆದಿದ್ದಾರೆ.

ನೀರಿನ ಟ್ಯಾಂಕ್​ನಲ್ಲಿ ಕೋಟಿ ರೂ. ಅಡಗಿಸಿಟ್ಟ ಉದ್ಯಮಿ: ಐಟಿ ದಾಳಿಯಲ್ಲಿ ಹೊರತೆಗೆದ ನೋಟುಗಳನ್ನು ಹೇರ್​ ಡ್ರೈಯರ್​ನಲ್ಲಿ ಒಣಗಿಸಿದ ಅಧಿಕಾರಿಗಳು
ನೋಟುಗಳನ್ನು ಒಣಗಿಸುತ್ತಿರುವ ಅಧಿಕಾರಿಗಳು
TV9 Web
| Edited By: |

Updated on:Jan 11, 2022 | 11:22 AM

Share

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭೂಪಾಲ್​ನ ಮದ್ಯ ಉದ್ಯಮಿಯೊಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 8 ಕೋಟಿ ರೂ.ನಷ್ಟು ಹಣ, 3 ಕೆಜಿ ಬಂಗಾರ ದೊರಕಿದೆ. ಉದ್ಯಮಿ ಶಂಕರ್​​ ರೈ ಮತ್ತು ಅವರ ಕುಟುಂಬದವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅಚ್ಚರಿಯ ಸಂಗತಿ ಎಂದರೆ ಶಂಕರ್​ ರೈ ಒಂದು ಕೋಟಿಯಷ್ಟು ಹಣವನ್ನು ಅಂಡರ್​ ಗ್ರೌಂಡ್​ನಲ್ಲಿರುವ ನೀರಿನ ಟ್ಯಾಂಕ್​ನಲ್ಲಿ ಬಚ್ಚಿಟ್ಟಿದ್ದರು. ಮನೆಯನ್ನು ಜಾಲಾಡಿದ ಅಧಿಕಾರಿಗಳು ಟ್ಯಾಂಕ್​ನಲ್ಲಿ ಬಚ್ಚಿಟ್ಟ ಹಣವನ್ನೂ ಹೊರತೆಗೆದಿದ್ದಾರೆ. ಆದರೆ ನೋಟುಗಳು ನೀರಿನಲ್ಲಿ ಒದ್ದೆಯಾಗಿದ್ದವು. ಹೀಗಾಗಿ ಅಧಿಕಾರಿಗಳು ಒಂದು ಕೋಟಿರೂ  ಮೌಲ್ಯದ ನೋಟುಗಳನ್ನು ಹೇರ್​ ಡ್ರೈಯರ್​ ಮತ್ತು ಇಸ್ತ್ರಿ ಪೆಟ್ಟುಗೆ ಮೂಲಕ ಒಣಗಿಸಿದ್ದಾರೆ.

ಅಧಿಕಾರಿಗಳು ಹೇರ್​ ಡ್ರೈಯರ್​ ಮತ್ತು ಇಸ್ತ್ರಿಪೆಟ್ಟಿಗೆ ಉಪಯೋಗಿಸಿ ನೋಟುಗಳನ್ನು ಒಣಗಿಸುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ದಾಳಿಯಲ್ಲಿ ಸಿಕ್ಕ ಆಸ್ತಿಯ ಬಗ್ಗೆ ಮಾಹಿತಿ ನೀಡಿದ ಜಬಲ್ಪುರದ ಆದಾಯ ತೆರಿಗೆ ಇಲಾಖೆಯ ಕಮಿಷನರ್​  ತನಿಖೆಯ ವೇಳೆ 8 ಕೋಟಿ ಮೌಲ್ಯದ ಹಣ, 3 ಕೆಜಿ ಬಂಗಾರ ದೊರಕಿದೆ.  ಅದರಲ್ಲಿ ಒಂದು ಕೋಟೊ ಹಣವನ್ನು ನೀರಿನ ಟ್ಯಾಂಕ್​ನಿಂದ ಹೊರತೆಗೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.  ಒಟ್ಟು 39 ಗಂಟೆಗಳ ನಿರಂತರ ವಿಚಾರಣೆ ನಡೆಸಿದ ಅಧಿಕಾರಿಗಳ ತಂಡ ಭೌತಿಕ ವಿಚಾರಣೆ ಮುಗಿದಿದೆ. ಇನ್ನು ದಾಖಲೆಗಳನ್ನು ಇಟ್ಟುಕೊಂಡು ತನಿಖೆ ಮುಂದುವರೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಶಂಕರ್​ ರೈ ಕೇವಲ ಮದ್ಯ ಉದ್ಯಮಿ ಮಾತ್ರವಲ್ಲದೆ ಬಡ್ಡಿ ವ್ಯವಹಾರವನ್ನೂ ಮಾಡುತ್ತಿದ್ದರು ಎಂದು ವರದಿಯಾಗಿದೆ.  ಸದ್ಯ ವೈರಲ್ ಆದ ವಿಡಿಯೋ 8 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಹಲವು ರೀಟ್ವೀಟ್​ ಆಗಿದೆ.

ಇದನ್ನೂ ಓದಿ:

ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ವೈದ್ಯೆಯರು: ವೈರಲ್​ ಆದ ಎಂಗೇಜ್​ಮೆಂಟ್​​ ಫೋಟೋಗಳು

Published On - 11:16 am, Tue, 11 January 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ