AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನ: ತಾಲಿಬಾನಿಗಳಿಂದ ಪಾರಾಗಿ 4 ತಿಂಗಳ ಬಳಿಕ ಹೆತ್ತವರನ್ನು ಸೇರಿದ ಮಗು

ವಿಮಾನ ನಿಲ್ದಾಣದಲ್ಲಿದ್ದ ಮಗುವನ್ನು ಕಾಬೂಲ್​ ನಿರಾಶ್ರಿತರ ಸಂಘಟನೆಯ ಸದಸ್ಯ ಹಮೀದ್​ ಸಫಿ ಎನ್ನುವವರು ಕರೆದೊಯ್ದು  ರಕ್ಷಣೆ ಮಾಡಿದ್ದರು. ಕಳೆದ ನವೆಂಬರ್​ನಲ್ಲಿ ಮಗುವಿನ ಬಗ್ಗೆ ತಂದೆ ತಾಯಿಗಳು ಮಾಹಿತಿ ಪಡೆದಿದ್ದರು.

ಅಫ್ಘಾನಿಸ್ತಾನ: ತಾಲಿಬಾನಿಗಳಿಂದ ಪಾರಾಗಿ 4 ತಿಂಗಳ ಬಳಿಕ ಹೆತ್ತವರನ್ನು ಸೇರಿದ ಮಗು
ಹೆತ್ತವರನ್ನು ಸೇರಿದ ಮಗು
Follow us
TV9 Web
| Updated By: Pavitra Bhat Jigalemane

Updated on:Jan 11, 2022 | 9:52 AM

2021ರ ಅಗಸ್ಟ್​ನಲ್ಲಿ ಅಫಘಾನಿಸ್ತಾನವನ್ನು ತಾಲಿಬಾನ್​ ಉಗ್ರರು ವಶಪಡಿಸಿಕೊಂಡ ಬಳಿಕ ಅಲ್ಲಿಯ ಜನರ ಬದುಕು ನರಕ ಸದೃಶವಾಗಿದೆ. ಅಫ್ಘಾನ್​ ಅನ್ನು ತಾಲಿಬಾನ್​ ಕೈವಶ ಮಾಡಿಕೊಳ್ಳುತ್ತಿದ್ದಂತೆ ಅಮೆರಿಕ ಕೂಡ ತನ್ನ ಸೇನೆಯನ್ನು ವಾಪಸ್​ ಕರೆಸಿಕೊಂಡಿತ್ತು. ಈ ವೇಳೆ ಅಫ್ಘಾನ್​ ಜನತೆ ತಾಲಿಬಾನಿಗಳ ಕೈಗೆ ಸಿಲುಕಿದರೆ ತಮ್ಮ ಮಕ್ಕಳು ಜೀವಂತವಾಗಿರುವುದಿಲ್ಲ ಎನ್ನುವ ಭಯದಲ್ಲಿ ಹೆತ್ತ ಮಕ್ಕಳನ್ನು ಸೈನಿಕರಿಗೆ ನೀಡಿದ್ದರು. ಇದೀಗ ಒಂದು ಮಗು ಅದರ ಪೋಷಕರನ್ನು ಮತ್ತೆ ಸೇರಿಕೊಂಡಿದೆ ಎಂದು ವರದಿ ತಿಳಿಸಿದೆ. 

ಅಗಸ್ಟ್​ 19ರಂದು  ದೇಶ ತೊರೆದು ಹೋಗಲು ಸಾವಿರಾರು ಮಂದಿ ಅಫ್ಘಾನ್​ ನಿವಾಸಿಗಳು ವಿಮಾನ ನಿಲ್ದಾಣದಲ್ಲಿ ಸೇರಿದ್ದರು ಈ ವೇಳೆ 2 ತಿಂಗಳ ಮಗುವನ್ನು ಯುಎಸ್​ ಸೈನಿಕರಿಗೆ  ಹಸ್ತಾಂತರಿಸಿದ್ದರು. ಬಳಿಕ ವಿಮಾನ ಹತ್ತುವ ವೇಳೆ ಮಗು ಎಲ್ಲಿದೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಮಗು ಸಿಗದ ಕಾರಣ  ಕುಟುಂಬ ಉಳಿದ ನಾಲ್ಕು ಮಕ್ಕಳೊಂದಿಗೆ ಯುಎಸ್​ಗೆ ಸ್ಥಳಾಂತರಗೊಂಡಿದ್ದರು. ವಿಮಾನ ನಿಲ್ದಾಣದಲ್ಲಿದ್ದ ಮಗುವನ್ನು ಕಾಬೂಲ್​  ಟ್ಯಾಕ್ಸಿ ಡ್ರೈವರ್​ ಹಮೀದ್​ ಸಫಿ ಎನ್ನುವವರು ಕರೆದೊಯ್ದು  ರಕ್ಷಣೆ ಮಾಡಿದ್ದರು. ಕಳೆದ ನವೆಂಬರ್​ನಲ್ಲಿ ಮಗುವಿನ ಬಗ್ಗೆ ತಂದೆ ತಾಯಿಗಳು ಮಾಹಿತಿ ಪಡೆದಿದ್ದರು. ಇದೀಗ 4 ತಿಂಗಳ ಬಳಿಕ ತಂದೆ ತಾಯಿಗಳಿಂದ ಬೇರ್ಪಟ್ಟ ಮಗು ಮತ್ತೆ ಹೆತ್ತವರ ಮಡಿಲು ಸೇರಿದೆ. ಸೊಹಾಲ್​ ಅಹಮದಿ ಪೋಷಕರನ್ನು ಮತ್ತೆ ಸೇರಿದ ಮಗು.

View this post on Instagram

A post shared by Reuters (@reuters)

ಮಗುವನ್ನು ಮತ್ತೆ ಹೆತ್ತವರು ಪಡೆದುಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಹೃದಯಸ್ಪರ್ಶಿ ಫೊಟೋವನ್ನು ನೋಡಿ ಟ್ವಿಟರ್​ ಬಳಕೆದಾರರು  ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವುದು ನಿಜವಾದ ಸಂತಸ ಎಂದಿದ್ದಾರೆ.

ಕಳೆದ ಅಗಸ್ಟ್​ನಲ್ಲಿ ತಾಲಿಬಾನ್​ ಉಗ್ರರು  ಅಫ್ಘಾನಿಸ್ತಾವನ್ನು ಬಲವಂತದಿಂದ ವಶಪಡಿಸಿಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ದೇಶದಲ್ಲಿ ಜನರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಅಫ್ಘಾನ್​ ಅಧ್ಯಕ್ಷರಿಂದ ಹಿಡಿದು ಸಾವಿರಾರು ನಿವಾಸಿಗಳು ದೇಶದಿಂದ ಪಲಾಯನ ಮಾಡಿ ಜೀವ ಉಳಿಸಿಕೊಂಡಿದ್ದಾರೆ.

Published On - 9:51 am, Tue, 11 January 22

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?