AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿ ಕೈಯಲ್ಲಿದ್ದ ಐಸ್​ ಕ್ರೀಮ್​ ತಿನ್ನಲು ಪತಿ ಉಪಯೋಗಿಸಿದ ಟ್ರಿಕ್​ ಏನು ಗೊತ್ತಾ? ವಿಡಿಯೋ ನೋಡಿ

ಲ್ಲೊಂದು ದಂಪತಿಯ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. ಪತಿ ತನ್ನ ಚಾಣಾಕ್ಷತನದಿಂದ, ತರಲೆ ಮಾಡುತ್ತಾ ಹೆಂಡತಿಯ ಕೈಯಲ್ಲಿದ್ದ ಐಸ್​ಕ್ರೀಮ್​ ಅನ್ನು ಹೇಗೆ ತಿನ್ನುತ್ತಾನೆ ಎನ್ನುವುದನ್ನು ತೋರಿಸಲಾಗಿದೆ.

ಹೆಂಡತಿ ಕೈಯಲ್ಲಿದ್ದ ಐಸ್​ ಕ್ರೀಮ್​ ತಿನ್ನಲು ಪತಿ ಉಪಯೋಗಿಸಿದ ಟ್ರಿಕ್​ ಏನು ಗೊತ್ತಾ? ವಿಡಿಯೋ ನೋಡಿ
ಪಿಯೂಷ್​ ಮತ್ತು ಯಾಮಿನಿ
TV9 Web
| Edited By: |

Updated on:Jan 14, 2022 | 6:53 PM

Share

ಸಾಮಾಜಿಕ ಜಾಲತಾಣ ಎಲ್ಲ ರೀತಿಯ ವಿಡಿಯೋಗಳಿಗೆ ಪ್ಲಾಟ್​ ಫಾರ್ಮ್​ ಇದ್ದಂತೆ. ತಮಾಷೆಯ ವಿಡಿಯೋಗಳಿರಬಹುದು, ಹೊಸ ವಿಚಾರಗಳನ್ನು ಹಂಚಿಕೊಳ್ಳಲು, ಅನುಭವವನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ. ಕೆಲವು ತಮಾಷೆಯ ವಿಡಿಯೋಗಳಂತೂ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಇಲ್ಲೊಂದು ದಂಪತಿಯ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. ಪತಿ ತನ್ನ ಚಾಣಾಕ್ಷತನದಿಂದ, ತರಲೆ ಮಾಡುತ್ತಾ ಹೆಂಡತಿಯ ಕೈಯಲ್ಲಿದ್ದ ಐಸ್​ಕ್ರೀಮ್​ ಅನ್ನು ಹೇಗೆ ತಿನ್ನುತ್ತಾನೆ ಎನ್ನುವುದನ್ನು ತೋರಿಸಲಾಗಿದೆ. ಇದು  ಜೋಡಿಯ ನಡುವೆ ಇರುವ ಪ್ರೀತಿಯ ಸಂವಹನವನ್ನು ವಿವರಿಸುತ್ತದೆ. ಆನ್ಲೈನ್​ ಕಂಟೆಂಟ್​ ಕ್ರಿಯೇಟರ್​ ಯಾಮಿನಿ ಮತ್ತು ಪಿಯೂಷ್​ ಅವರ ಜಂಟಿ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವಿಡಿಯೋ ಹಂಚಿಕೊಂಡ ದಂಪತಿ ಚಳಿಗಾಲದಲ್ಲಿ ಐಸ್​ಕ್ರೀಮ್​ ತಿನ್ನುವ ಖುಷಿಯೇ ಬೇರೆ ಎಂದು ಕ್ಯಾಪ್ಷನ್​ ನೀಡಿದ್ದಾರೆ. ವಿಡಿಯೋದಲ್ಲಿ ಮೊದಲು ಕ್ಯಾಂಡಿ ಐಸ್​ಕ್ರೀಮ್​ ಅನ್ನು ಕವರ್​ನಿಂದ ತೆಗೆದು ಕೆಳಕ್ಕೆ ಮೇಲಕ್ಕೆ ಮಾಡುವುದು ಕಾಣುತ್ತದೆ. ನಂತರ ಯಾಮಿನಿ ಅವರು ಪತಿಯ ಕಡೆಗೆ ಐಸ್​ಕ್ರೀಮ್​ ತಿರುಗಿಸಿದ ತಕ್ಷಣ ಪಿಯೂಷ್​ ಅವರು ಐಸ್​ಕ್ರೀಮ್​ ಅನ್ನು ತಿನ್ನುವುದನ್ನು ಕಾಣಬಹುದು. ವಿಡಿಯೋ ಹಂಚಿಕೊಂಡು ಕೆಲವೇ ದಿನಗಳಲ್ಲಿ 3.3 ಲಕ್ಷ ವೀಕ್ಷಣೆ ಪಡೆದಿದ್ದು, ಇನ್ನೂ ವೈರಲ್​ ಆಗುತ್ತಲೇ ಇದೆ.

ಇದನ್ನೂ ಓದಿ:

ಆಸ್ಪತ್ರೆಯಿಂದ ಬಿಡುಗಡೆಯಾದ ಬಚ್​ ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​: ವಿಡಿಯೋ ನೋಡಿ ಪ್ರತಿಕ್ರಿಯಿಸಿದ ರಾಪರ್​ ಬಾದ್​​ ಷಾ

Published On - 6:51 pm, Fri, 14 January 22

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’