ಪ್ರೀತಿ ವಿಚಾರ ಗೊತ್ತಾಗಿ ಮಗಳನ್ನು ಅಮೆರಿಕಕ್ಕೆ ಕಳುಹಿಸಿದ ತಂದೆ, ಕೋಪಕ್ಕೆ ಗರ್ಲ್‌ಫ್ರೆಂಡ್‌ ಅಪ್ಪನಿಗೆ ಗುಂಡು ಹಾರಿಸಿದ ಪ್ರೇಮಿ

ಪ್ರೀತಿ-ಪ್ರೇಮದ ವಿಚಾರ ಗೊತ್ತಾದ್ರೆ ಮನೆಯವರು ಮಕ್ಕಳನ್ನು ಪ್ರೇಮದ ಕೂಪದಲ್ಲಿ ಹೊರತರಲು ಪ್ರಯತ್ನಿಸುತ್ತಾರೆ. ಇದೇ ರೀತಿ ಇಲ್ಲೊಬ್ಬರು ವ್ಯಕ್ತಿ ಕೂಡಾ ಮಗಳ ಪ್ರೀತಿ ವಿಚಾರ ಗೊತ್ತಾಗಿ ಆಕೆಯನ್ನು ಅಮೆರಿಕಕ್ಕೆ ಕಳುಹಿಸಿದ್ದು, ಇದರಿಂದ ಕೋಪಗೊಂಡ ಬಾಯ್‌ಫ್ರೆಂಡ್‌ ತನ್ನ ಗೆಳತಿಯ ತಂದೆಯ ಮೇಲೆ ಗುಂಡು ಹಾರಿಸಿದ್ದಾನೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಅಗುತ್ತಿದೆ.

ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಪ್ರೀತಿಗೆ ಒಪ್ಪಿಗೆ ನೀಡಲ್ಲ. ಪ್ರೀತಿ-ಪ್ರೇಮದ ವಿಚಾರ ಗೊತ್ತಾದ್ರೆ ದೊಡ್ಡ ರಂಪಾಟ ನಡೆಸಿ ಪ್ರೇಮಿಗಳನ್ನು ದೂರ ದೂರ ಮಾಡಿ ಬಿಡುತ್ತಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ಕೂಡಾ ತಮ್ಮ ಮಗಳ ಪ್ರೀತಿ ವಿಚಾರ ಗೊತ್ತಾಗಿ ಅವಳನ್ನು ಗೆಳೆಯನಿಂದ ದೂರ ಮಾಡಬೇಕೆಂದು ಆಕೆಯನ್ನು ಅಮೆರಿಕಕ್ಕೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ಬಾಯ್‌ಫ್ರೆಂಡ್‌ ನನ್ನಿಂದ ನನ್ನ ಗರ್ಲ್‌ಫ್ರೆಂಡ್‌ ಅನ್ನು ದೂರ ಮಾಡೋಕೆ ಎಷ್ಟು ಧೈರ್ಯ ಎನ್ನುತ್ತಾ ಗೆಳತಿಯ ತಂದೆಗೆ ಗುಂಡು ಹಾರಿಸಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಹೈದರಬಾದ್‌ನಲ್ಲಿ ನಡೆದಿದ್ದು, ಬಲ್ವಿಂದರ್‌ ಸಿಂಗ್‌ ಎಂಬ 25 ವರ್ಷದ ಯುವಕ ತನ್ನ ಗರ್ಲ್‌ಫ್ರೆಂಡ್‌ ತಂದೆಯ ಮೇಲೆಯೇ ಏರ್‌ ಗನ್‌ನಿಂದ ಗುಂಡು ಹಾರಿಸಿದ್ದಾನೆ. ಮಗಳ ಪ್ರೀತಿ ವಿಚಾರ ಗೊತ್ತಾಗಿ ಕೋಪಗೊಂಡ ತಂದೆ ರೇವಂತ್‌ ಆನಂದ್‌ ತಮ್ಮ ಮಗಳು ಮನ್ವೀತಾಳನ್ನು ಅಮೆರಿಕಕ್ಕೆ ಕಳುಹಿದ್ದಾರೆ. ಇದೇ ಕೋಪದಿಂದ ನನ್ನಿಂದ ಆಕೆಯನ್ನು ದೂರ ಮಾಡಲು ಇವರಿಗೆ ಎಷ್ಟು ಧೈರ್ಯ ಎಂದು ಬಲ್ವಿಂದರ್‌ ಸಿಂಗ್‌ ನವೆಂಬರ್‌ 10 ರಂದು ತನ್ನ ಗೆಳತಿಯ ತಂದೆಯ ಮೇಲೆ ಏರ್‌ ಗನ್‌ನಿಂದ ಒಂದು ಸುತ್ತಿನ ಗುಂಡು ಹಾರಿಸಿದ್ದಾನೆ. ಹೌದು ನಿನ್ನೆ ವೆಂಕಟೇಶ್ವರ ಕಾಲೋನಿಯಲ್ಲಿರುವ ರೇವಂತ್‌ ಮನೆಗೆ ಬಂದ ಬಲ್ವಿಂದರ್‌ ಅವರ ಜೊತೆ ಜಗಳವಾಡಿ ಕೊನೆಗೆ ರೇವಂತ್‌ ಮೇಲೆ ಗುಂಡು ಹಾರಿಸಿದ್ದಾನೆ. ಅಷ್ಟೇ ಅಲ್ಲದೆ ರೇವಂತ್‌ ಅವರ ಕಾರಿಗೂ ಹಾನಿ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳು ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ಓದಿ: Viral: ನನ್ನ ಬಿಟ್ಟೋಗ್ಬೇಡಾ, ನಾನು ಬರ್ತೀನಿ ಅಮ್ಮಾ ಮಾಲೀಕರೊಂದಿಗೆ ಬಸ್‌ ಏರಿದ ಶ್ವಾನ

ತೆಲುಗು ಸ್ಕ್ರೈಬ್‌ ನ್ಯೂಸ್‌ ಪೋರ್ಟಲ್‌ ಪ್ರಕಾರ, ಗಂಡು ರೇವಂತ್‌ ಆನಂದ್‌ ಅವರ ಬಲಗಣ್ಣಿಗೆ ತಗುಲಿದ್ದು, ಪರಿಣಾಮ ಗಂಭೀರ ಗಾಯಗಳಾಗಿವೆ. ಈ ಸಂಬಂಧ ರೇವಂತ್‌ ಆನಂದ್‌ ಪೊಲೀಸರಿಗೆ ದೂರು ನೀಡಿದ್ದು, ಪ್ರೀತಿಯ ಹೆಸರಲ್ಲಿ ಆತ ತನ್ನ ಮಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ದೂರಿನ ಮೇರೆಗೆ ಹೈದರಬಾದ್‌ ಪೊಲೀಸರು ಬಲ್ವಿಂದರ್‌ ವಿರುದ್ಧ ಸೆಕ್ಷನ್‌ 109 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಬಳಿಕ ಸರೂರ್‌ನಗರ ಪೊಲೀಸರ್‌ ಬಲ್ವಿಂದರ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ರೇವಂತ್‌ ಆನಂದ್‌ ಕಣ್ಣಿನ ಗಾಯಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:25 pm, Mon, 11 November 24

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us