AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೇಟರ್​​ನಿಂದ ಇನ್​ಸ್ಟಾಗ್ರಾಂನ ಮುಖ್ಯಸ್ಥರಾಗುವ ತನಕ; ಆ್ಯಡಮ್ ಮೊಸ್ಸೇರಿಯ ವೃತ್ತಿ ಹಿನ್ನೋಟ

Adam Mosseri: ಇನ್​ಸ್ಟಾಗ್ರಾಂ ಮುಖ್ಯಸ್ಥ ಆ್ಯಡಮ್ ಮೊಸ್ಸೇರಿ ಥ್ರೆಡ್ಸ್​ನಲ್ಲಿ ತಮ್ಮ ವೃತ್ತಿಜೀವನದ ಇತಿಹಾಸದ ಬಗ್ಗೆ ಹಂಚಿಕೊಂಡಿದ್ದಾರೆ. ನೂರಾರು ಜನರು ಪ್ರಭಾವಿತರಾಗಿ ತಮ್ಮ ವೃತ್ತಿಜೀವನದ ಮೈಲಿಗಲ್ಲುಗಳ ಕುರಿತು ಹಂಚಿಕೊಂಡಿದ್ದಾರೆ. ಅನೇಕರಿಗೆ ಈ ಪೋಸ್ಟ್​ ಸ್ಫೂರ್ತಿದಾಯಕವಾಗಿದೆ. ಜಗತ್ತಿನಲ್ಲಿ ಎಂಜಿನಿಯರ್​, ಡಾಕ್ಟರ್​ ಕೆಲಸ ಬಿಟ್ಟು ಬೇರೆ ಜಗತ್ತೂ ಇದೆ ಎನ್ನುವುದನ್ನು ಇದು ನೆನಪಿಸಿದೆ.

Viral Video: ವೇಟರ್​​ನಿಂದ ಇನ್​ಸ್ಟಾಗ್ರಾಂನ ಮುಖ್ಯಸ್ಥರಾಗುವ ತನಕ; ಆ್ಯಡಮ್ ಮೊಸ್ಸೇರಿಯ ವೃತ್ತಿ ಹಿನ್ನೋಟ
ಇನ್​ಸ್ಟಾಗ್ರಾಂ ಮುಖ್ಯಸ್ಥ ಆ್ಯಡಮ್ ಮೊಸ್ಸೇರಿ
ಶ್ರೀದೇವಿ ಕಳಸದ
|

Updated on: Sep 07, 2023 | 1:24 PM

Share

Instagram: ಪ್ರತೀ ಮನುಷ್ಯನೂ ತನ್ನ ಅನ್ನವನ್ನು ತಾನೇ ಗಳಿಸಿಕೊಳ್ಳಬೇಕು. ಆರಂಭದಲ್ಲಿ ಸೇರಿದ ಕೆಲಸ ಯಾವತ್ತೂ ಕನಸಿನ ಕೆಲಸ ಆಗಲು ಸಾಧ್ಯವೇ? ಅವಶ್ಯಕತೆ ಪೂರೈಸಿಕೊಳ್ಳಲು ದುಡಿಯಬೇಕು. ಇಂದು ಜಗತ್ಪ್ರಸಿದ್ಧರಾದ ಅನೇಕರು ಕೂಡ ಈ ಹಾದಿಯಲ್ಲಿಯೇ ಸಾಗಿದವರು ಇನ್ನು ಸಾಮಾನ್ಯರ ಪಾಡು? ಇದೀಗ  ಇನ್​ಸ್ಟಾಗ್ರಾಂನ ಮುಖ್ಯಸ್ಥ ಆ್ಯಡಮ್ ಮೊಸ್ಸೇರಿ (Adam Mosseri) ತಮ್ಮ ವೃತ್ತಿಜೀವನದ ಹಿನ್ನೋಟವನ್ನು ಥ್ರೆಡ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ಗೆ ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. ಸುಮಾರು 260 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಈ ಕೊಕ್ಕರೆಯಮ್ಮ ಯಾಕೆ ತನ್ನ ಮಗುವನ್ನು ಕುಕ್ಕಿ ಕುಕ್ಕಿ ಕೆಳಗೆಸೆದಳೋ?

ಆ್ಯಡಮ್ ಮೊಸ್ಸೇರಿ ತಮ್ಮ ವೃತ್ತಿಯ ಇತಿಹಾಸವನ್ನು ಥ್ರೆಡ್​ (Thread) ನಲ್ಲಿ ಪೋಸ್ಟ್ ಮಾಡಿದ್ದರ ಸಾರಾಂಶ ಇಲ್ಲಿದೆ. ಒಂದು ದಿನದ ಹಿಂದೆ ಹಂಚಿಕೊಂಡ ಈ ಪೋಸ್ಟ್ ಇದೀಗ ವೈರಲ್ ಆಗಿದೆ. ಆ್ಯಡಮ್​ ತಮ್ಮ ವೃತ್ತಿಜೀವನ ಆರಂಭಿಸಿದ್ದು​ ಹೋಟೆಲ್​ ಒಂದರಲ್ಲಿ ವೇಟರ್​ ಆಗಿ. ಆನಂತರ ಬಾರ್​ಟೆಂಡರ್ ಆದರು. ಆಮೇಲೆ ಡಿಸೈನರ್ ತದನಂತರ ಪ್ರಾಡಕ್ಟ್ ಮ್ಯಾನೇಜರ್ ಸದ್ಯ ಇನ್​ಸ್ಟಾಗ್ರಾಂನ ಮುಖ್ಯಸ್ಥರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅನೇಕರು ಈ ಪೋಸ್ಟ್​ನಿಂದ ಪ್ರಭಾವಿತರಾಗಿ ತಮ್ಮ ವೃತ್ತಿ ಇತಿಹಾಸವನ್ನು ಆ್ಯಡಮ್ ಮಾದರಿಯಲ್ಲಿ ಹಂಚಿಕೊಂಡಿದ್ದಾರೆ. ನಿಜಕ್ಕೂ ಇದು ಅತ್ಯಂತ ಆಕರ್ಷಕವಾಗಿದೆ. ನೀವು ಒಂದೊಂದೇ ಹಂತಗಳನ್ನು ಏರಿರುವ ರೀತಿ ನಿಜಕ್ಕೂ ಮೆಚ್ಚುವಂಥದ್ದು ಎಂದು ಒಬ್ಬರು ಹೇಳಿದ್ದಾರೆ. ವೇಟರ್ ಆಗಿ ವೃತ್ತಿಜೀವನ ಆರಂಭಿಸಿದವರಿಗಂತೂ ಈ ಪೋಸ್ಟ್​ ಸಾಕಷ್ಟು ಸ್ಫೂರ್ತಿ ತುಂಬಿದೆ. ತಮ್ಮ ಮುಂದಿನ ಪ್ರಯಾಣದ ಮೈಲುಗಲ್ಲುಗಳನ್ನು ಅವರು ಬರೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಆ್ಯಡಮ್​ ಟ್ರೆಂಡಿಂಗ್​ನಲ್ಲಿ ಇಲ್ಲ ನೋಡಿ ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ತ್ರೀಡಿ ಟ್ಯುಟೋರಿಯಲ್; ಈ ಕಲಾಕೃತಿ ರಚಿಸುವುದನ್ನು ತೋರಿಸಿಕೊಟ್ಟ ಮೋಹಿತ ಕಶ್ಯಪ

ಕ್ಲರ್ಕ್, ಕ್ಯಾಷಿಯರ್​, ಸಹಾಯಕ, ಸಹಾಯಕ ಸ್ಟೋರ್ ಮ್ಯಾನೇಜರ್, ಹೌಸ್ ಕ್ಲೀನರ್​, ಆಫೀಸ್​ ಮ್ಯಾನೇಜರ್, ಸದ್ಯ ಅವಳಿ ಮಕ್ಕಳ ತಾಯಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಲೈಬ್ರರಿ ಬುಕ್​ ಸ್ಟ್ಯಾಕರ್​, ಕ್ಯಾಷಿಯರ್​, ವೇಟರ್, ಬಾರ್​​ಟೆಂಡರ್​, ಫೋಟೋಗ್ರಾಫರ್​, ವಿಪಿ ಡಿಜಿಟಲ್ ಸ್ಟ್ರ್ಯಾಟಜಿ, ಡಿಜಿಟಲ್​ ಏಜನ್ಸಿ ಹೆಡ್​, ಪ್ರೊಡಕ್ಟ್​ ಮ್ಯಾನೇಜ್​ಮೆಂಟ್​ ಪ್ರೊಫೆಸರ್​, ಇನ್ನೋವೇಷನ್ ಕನ್ಸಲ್ಟಂಟ್​, ಸಿಎಕ್​ ಸ್ಟ್ರಾಟಜಿ ಡೈರೆಕ್ಟರ್​. ಹೀಗೆ ಒಂದು ಹಂತಕ್ಕೆ ಬರುವ ಮುನ್ನ ತಾವು ನಿರ್ವಹಿಸಿದ ಕೆಲಸ, ಕ್ಷೇತ್ರಗಳನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು