AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಏಣಿ ಮೇಲೆ ನಡೆದು ಬಂದು ಕಾರು ಹತ್ತಿದ ವ್ಯಕ್ತಿ; ಕಾರಲ್ಲೇ ಏಣಿ ಇಟ್ಟು ಪ್ರಯಾಣ! ವಿಡಿಯೋ ನೋಡಿ

Viral Video: ತನ್ನದೇ ಕಾರಿನ ಕಡೆಗೆ ನಡೆದುಕೊಂಡು ಹೋಗದೆ, ಏಣಿ ಮೂಲಕ ಹೋಗುತ್ತಿದ್ದಾನೆ. ಆತನಿಗೆ ನೀರಿಗೆ ಬಿದ್ದರೆ, ಹೆಚ್ಚು ಕಡಿಮೆ ಆದರೆ ಎಂಬ ಯಾವ ಭಯವೂ ಇಲ್ಲ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ.

Video: ಏಣಿ ಮೇಲೆ ನಡೆದು ಬಂದು ಕಾರು ಹತ್ತಿದ ವ್ಯಕ್ತಿ; ಕಾರಲ್ಲೇ ಏಣಿ ಇಟ್ಟು ಪ್ರಯಾಣ! ವಿಡಿಯೋ ನೋಡಿ
TV9 Web
| Edited By: |

Updated on:Oct 16, 2021 | 6:06 PM

Share

ಹೊಸ ಹೊಸ ಆವಿಷ್ಕಾರಗಳು ಕಷ್ಟದ, ಸಮಸ್ಯೆಯ ಸಂದರ್ಭದಲ್ಲಿ ಉಂಟಾಗುವುದು. ವಿಶೇಷ ಆಲೋಚನೆಗಳು ಅವಸರದಲ್ಲಿ ಹೊಳೆಯುವುದು ಸಾಮಾನ್ಯ. ಕೆಲಸ ಸುಲಭ ಆಗಲೇಬೇಕು, ಸುಲಲಿತವಾಗಿ ಸಾಗಲೇಬೇಕು ಎಂದಾಗ ಇಂಥದ್ದೆಲ್ಲ ನೆನಪಾಗುತ್ತದೆ. ಯಾವುದೇ ಕೆಲಸವನ್ನೂ ಜುಗಾಡ್ ಮಾಡಿ ಮುಂದುವರಿಸುವುದು ಕಷ್ಟವೇನಲ್ಲ. ಜುಗಾಡ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ನೂರಾರು ಪೋಸ್ಟ್​ಗಳನ್ನು ನೀವು ನೋಡಿರಬಹುದು. ಈಗ ಇಷ್ಟೆಲ್ಲಾ ಮಾತನಾಡುತ್ತಿದ್ದೇವೆ ಅಂತಾದರೆ ಜುಗಾಡ್ ಬಗ್ಗೆ ಹೊಸ ವಿಡಿಯೋ ತಂದಿದ್ದೇವೆ ಎಂದು ನೀವು ಅರ್ಥ ಮಾಡಿಕೊಂಡಿರಬೇಕಲ್ಲಾ?

ಈ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬಾತ ನೀರು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಕಾರಿನ ಬಳಿಗೆ ಬರುತ್ತಿದ್ದಾನೆ. ಆದರೆ, ಅವನು ಒದ್ದೆಯಾಗುತ್ತಿಲ್ಲ. ಸ್ವಲ್ಪವೂ ನೀರು ತಾಗದಂತೆ, ಒದ್ದೆಯಾಗದಂತೆ ಅವನು ನಡೆದುಕೊಂಡು ಬರುವ ವಿಡಿಯೋ ಈಗ ವೈರಲ್ ಆಗಿದೆ. ತನ್ನದೇ ಕಾರಿನ ಕಡೆಗೆ ನಡೆದುಕೊಂಡು ಹೋಗದೆ, ಏಣಿ ಮೂಲಕ ಹೋಗುತ್ತಿದ್ದಾನೆ. ಆತನಿಗೆ ನೀರಿಗೆ ಬಿದ್ದರೆ, ಹೆಚ್ಚು ಕಡಿಮೆ ಆದರೆ ಎಂಬ ಯಾವ ಭಯವೂ ಇಲ್ಲ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ವ್ಯಕ್ತಿ ಕಾರಿನ ಕಡೆಗೆ ಬಂದಾಗ, ನಿಧಾನವಾಗಿ ಕಾರಿನ ಬಾಗಿಲು ತೆಗೆದು ಒಳಗೆ ಇಳಿಯುತ್ತಾನೆ. ಆರಾಮವಾಗಿ ಕಾರಿಗೆ ಇಳಿದು ಮುಂದೆ ಏಣಿಯನ್ನು ಏನು ಮಾಡುತ್ತಾನೆ ಗೊತ್ತೇ? ಅದನ್ನು ಮಡಚಿ ಕಾರಿನ ಟಾಪ್​ನ ಮೇಲೆ ಇಡುತ್ತಾನೆ. ಹಗ್ಗದ ಸಹಾಯದಿಂದ ಆ ಏಣಿಯನ್ನು ಕಾರ್​ನ ಮೇಲೆ ಇಟ್ಟು ಅದನ್ನು ಕಟ್ಟಿಬಿಡುತ್ತಾನೆ. ಈ ಸರ್ಕಸ್​ಗೆ ನೋಡುಗರೆಲ್ಲಾ ಸೂಪರ್ ರಿಯಾಕ್ಷನ್ ಕೊಟ್ಟಿದ್ದಾರೆ.

How to cross a flooded road from funny

ಈ ವಿಡಿಯೋ ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಲ್ಪಟ್ಟಿದೆ. ಈ ವಿಡಿಯೋಗೆ ಸಾವಿರಾರು ಲೈಕ್ ಹಾಗೂ ಕಮೆಂಟ್​ಗಳು ಕೂಡ ಬಂದಿದೆ. ಸೋಷಿಯಲ್ ಮೀಡಿಯಾದ ಬಹಳಷ್ಟು ಪೇಜ್​ಗಳಲ್ಲಿ ಕೂಡ ವಿಡಿಯೋ ಸದ್ದು ಮಾಡಿದೆ. ಹೀಗೆ ಮಾಡಲು ನಾನು ಕೂಡ ಒಮ್ಮೆ ಪ್ರಯತ್ನಿಸಬೇಕು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹಲವರು ಜೋರಾಗಿ ನಗುವ ಇಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Viral Video: ಮಿಸ್ಟರ್ ಬೀನ್ ಥರಾನೇ ಕಾಣ್ತಾರೆ; ನಟನೆ ಕೂಡ ಸೂಪರ್! ವಿಡಿಯೋ ನೋಡಿ

ಇದನ್ನೂ ಓದಿ: ಈ ಅವತಾರದಲ್ಲಿ ಬಂದು ಅಭಿಮಾನಿಗಳಿಗೆ ರಶ್ಮಿಕಾ ಹೇಳಿದ್ದೇನು; ಹೊಸ ಫೋಟೋ ವೈರಲ್​

Published On - 6:05 pm, Sat, 16 October 21

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ